ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾನಮತ್ತ ಚಾಲಕನ ಅವಾಂತರ:ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

By Nayana
|
Google Oneindia Kannada News

ಕೋಲಾರ, ಆಗಸ್ಟ್ 3: ಕುಡಿದ ಮತ್ತಿನಲ್ಲಿ ಕಾರು ಚಲಾವಣೆ ಮಾಡಿ ಜೀವಕ್ಕೆ ಕುತ್ತು ತಂದುಕೊಂಡ ಘಟನೆ ಕೋಲಾರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಬಸ್‌ ತಂಗುದಾಣಕ್ಕೆ ಡಿಕ್ಕಿ ಹೊಡೆದು, ತಂದುದಾಣದಲ್ಲಿ ಕುಳಿತಿದ್ದ ಓರ್ವ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭಿರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನ ಉರಿಗಾಂ ನ ಸತ್ತಾರ್ ಸರ್ಕಲ್‌ ನಲ್ಲಿ ನಡೆದಿದೆ.

ಬೀಗರ ಊಟಕ್ಕೆ ಹೊರಟಿದ್ದವರ ಕಾರು ಅಪಘಾತ: 3 ಸಾವುಬೀಗರ ಊಟಕ್ಕೆ ಹೊರಟಿದ್ದವರ ಕಾರು ಅಪಘಾತ: 3 ಸಾವು

ಕೆಜಿಎಫ್ ಚಾಂಪಿಯನ್ ಬಡಾವಣೆಯ ಜಯವೇಲು(70) ಮೃತ ವೃದ್ಧ, ಸುರೇಶ್ ಬಾಬು ಹಾಗೂ ಥಾಮಸ್ ಗೆ ಗಂಭಿರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಜಿಎಫ್ ಬೆಮೆಲ್ ನಗರ ನಿವಾಸಿ ದೀಪನ್ ಕುಡಿದು ಚಾಲನೆ ಮಾಡಿದ ಕಾರು ಚಾಲಕನಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Drink and drive: Car hits bus and divider

ಉರಿಗಾಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಡಿದು ವಾಹನ ಚಲಾಯಿಸಬೇಡಿ ಎಂದು ಪೊಲೀಸರು ಎಷ್ಟೇ ಅಭಿಯಾನಗಳನ್ನು ಕೈಗೊಂಡರೂ ಕೂಡ ಜನರ ಮನಸ್ಸಿಗೆ ಇನ್ನೂ ನಾಟುತ್ತಿಲ್ಲ. ಪ್ರತಿದಿನ ನೂರಾರು ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ.ಇಂತಹ ಘಟನೆಗಳನ್ನು ನೋಡಿದ ಬಳಿಕವಾದರೂ ಜನರು ಎಚ್ಚೆತ್ತುಕೊಂಡು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ.

English summary
A car hit bus shelter and pediatrician was died at Urigaon in Kolar district. Deceased identified ad Jayavelu, 70, resident of KGF champion lay out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X