ತೀರಿಹೋದ ಆ ಹುಡುಗನದು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ
ಕೆಜಿಎಫ್ ನ ಬೇತಮಂಗಲದವರಾದ ಚಲಪತಿಯವರಿಗೆ ತಮ್ಮ ಮಗ ಅಭಿರಾಮ್ ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ ಪಡೆದಿರುವುದು ನೋಡಿದ ಮೇಲಂತೂ ಮತ್ತಷ್ಟು ದುಃಖವಾಗಿದೆ. ಮಗ ಇಷ್ಟು ಅಂಕ ತೆಗೆದುಕೊಂಡ ಮೇಲೂ ಅವರಿಗೇಕೆ ದುಃಖ ಎಂಬುದನ್ನು ತಿಳಿಯಲು ಈ ವರದಿ ಓದಿ
ಕೆಜಿಎಫ್, ಮೇ 13: ಈ ಹೊತ್ತಿಗೆ ಆ ಮನೆಯಲ್ಲಿ ಸಂಭ್ರಮದ ವಾತಾವರಣ ಇರಬೇಕಿತ್ತು. ಆದರೆ ಈಗ ದುಃಖ ಮಡುಗಟ್ಟಿದೆ. ಇದ್ಯಾವ ಮನೆ, ದುಃಖ ಯಾಕೆ ಅಂತೀರಾ? ನಿಮಗೆ ನೆನಪಿರಬಹುದು ಕೋಲಾರದ ಕೆಜಿಎಫ್ ನಲ್ಲಿರುವ ವಡ್ಡರಹಳ್ಳಿಯ ಅಭಿರಾಮ್ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಎಂದು ಸುದ್ದಿಯಾಗಿತ್ತು. ಆತನ ಪೋಷಕರು-ಸಂಬಂಧಿಕರ ದುಃಖ ನೋಡಲು ಸಾಧ್ಯವಾಗುತ್ತಿರಲಿಲ್ಲ.
ಹ್ಞಾಂ, ಅದೇ ಅಭಿರಾಮ್ ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ. 625ಕ್ಕೆ 603 ಅಂಕ ಗಳಿಸಿದ್ದಾನೆ ಅಭಿರಾಮ್. ಕನ್ನಡದಲ್ಲಿ 122, ಇಂಗ್ಲಿಷ್ 100, ಹಿಂದಿ 93, ಗಣಿತ 95. ವಿಜ್ಞಾನ 95, ಸಮಾಜದಲ್ಲಿ 98 ಅಂಕಗಳು ಬಂದಿವೆ. ಅಭಿರಾಮ್ ಚಿಂತಾಮಣಿಯ ವೇಣುಗೋಪಾಲ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.[ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ]
ರಜಾ ಇತ್ತಾದ್ದರಿಂದ ಊರಿಗೆ ಬಂದಿದ್ದ. ಮೂರು ದಿನ ಕಿವಿ ನೋವು ಬರ್ತಿತ್ತು ಎಂದು ಬೇತಮಂಗಲದ ಶಾರದಾ ಕ್ಲಿನಿಕ್ ನಲ್ಲಿ ತೋರಿಸಲಾಗಿತ್ತು. ಅಲ್ಲಿ ದಂತವೈದ್ಯ ನವೀನ್ ಕುಮಾರ್ ನೀಡಿದ ಚುಚ್ಚುಮದ್ದಿನಿಂದಲೇ ಅಭಿರಾಮ್ ಮೃತಪಟ್ಟ ಎಂದು ಆತನ ಪೋಷಕರು ಆರೋಪಿಸಿದ್ದರು.[ಖಾಸಗಿ ಕ್ಷಣ ಸೆರೆ ಹಿಡಿದು ಬ್ಲ್ಯಾಕ್ ಮೇಲ್, ಪತಿ ವಿರುದ್ಧ ದೂರು]
ನೋಡಿ, ಆ ಹುಡುಗ ಅದ್ಭುತವಾದ ಅಂಕ ಗಳಿಸಿದ್ದಾನೆ. ಆತನ ಪೋಷಕರು ತಮ್ಮ ಬುದ್ಧಿವಂತ ಮಗನನ್ನು ನೆನೆದು, ಮತ್ತಷ್ಟು ದುಃಖಿತರಾಗುತ್ತಿದ್ದಾರೆ. ಆ ಮನೆಯಲ್ಲಿ ಸಂಭ್ರಮ ಉಳಿದಿಲ್ಲ.