ತೀರಿಹೋದ ಆ ಹುಡುಗನದು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ
ಕೆಜಿಎಫ್ ನ ಬೇತಮಂಗಲದವರಾದ ಚಲಪತಿಯವರಿಗೆ ತಮ್ಮ ಮಗ ಅಭಿರಾಮ್ ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ ಪಡೆದಿರುವುದು ನೋಡಿದ ಮೇಲಂತೂ ಮತ್ತಷ್ಟು ದುಃಖವಾಗಿದೆ. ಮಗ ಇಷ್ಟು ಅಂಕ ತೆಗೆದುಕೊಂಡ ಮೇಲೂ ಅವರಿಗೇಕೆ ದುಃಖ ಎಂಬುದನ್ನು ತಿಳಿಯಲು ಈ ವರದಿ ಓದಿ
ಕೆಜಿಎಫ್, ಮೇ 13: ಈ ಹೊತ್ತಿಗೆ ಆ ಮನೆಯಲ್ಲಿ ಸಂಭ್ರಮದ ವಾತಾವರಣ ಇರಬೇಕಿತ್ತು. ಆದರೆ ಈಗ ದುಃಖ ಮಡುಗಟ್ಟಿದೆ. ಇದ್ಯಾವ ಮನೆ, ದುಃಖ ಯಾಕೆ ಅಂತೀರಾ? ನಿಮಗೆ ನೆನಪಿರಬಹುದು ಕೋಲಾರದ ಕೆಜಿಎಫ್ ನಲ್ಲಿರುವ ವಡ್ಡರಹಳ್ಳಿಯ ಅಭಿರಾಮ್ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಎಂದು ಸುದ್ದಿಯಾಗಿತ್ತು. ಆತನ ಪೋಷಕರು-ಸಂಬಂಧಿಕರ ದುಃಖ ನೋಡಲು ಸಾಧ್ಯವಾಗುತ್ತಿರಲಿಲ್ಲ.
ಹ್ಞಾಂ, ಅದೇ ಅಭಿರಾಮ್ ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ. 625ಕ್ಕೆ 603 ಅಂಕ ಗಳಿಸಿದ್ದಾನೆ ಅಭಿರಾಮ್. ಕನ್ನಡದಲ್ಲಿ 122, ಇಂಗ್ಲಿಷ್ 100, ಹಿಂದಿ 93, ಗಣಿತ 95. ವಿಜ್ಞಾನ 95, ಸಮಾಜದಲ್ಲಿ 98 ಅಂಕಗಳು ಬಂದಿವೆ. ಅಭಿರಾಮ್ ಚಿಂತಾಮಣಿಯ ವೇಣುಗೋಪಾಲ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.[ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ]

ರಜಾ ಇತ್ತಾದ್ದರಿಂದ ಊರಿಗೆ ಬಂದಿದ್ದ. ಮೂರು ದಿನ ಕಿವಿ ನೋವು ಬರ್ತಿತ್ತು ಎಂದು ಬೇತಮಂಗಲದ ಶಾರದಾ ಕ್ಲಿನಿಕ್ ನಲ್ಲಿ ತೋರಿಸಲಾಗಿತ್ತು. ಅಲ್ಲಿ ದಂತವೈದ್ಯ ನವೀನ್ ಕುಮಾರ್ ನೀಡಿದ ಚುಚ್ಚುಮದ್ದಿನಿಂದಲೇ ಅಭಿರಾಮ್ ಮೃತಪಟ್ಟ ಎಂದು ಆತನ ಪೋಷಕರು ಆರೋಪಿಸಿದ್ದರು.[ಖಾಸಗಿ ಕ್ಷಣ ಸೆರೆ ಹಿಡಿದು ಬ್ಲ್ಯಾಕ್ ಮೇಲ್, ಪತಿ ವಿರುದ್ಧ ದೂರು]

ನೋಡಿ, ಆ ಹುಡುಗ ಅದ್ಭುತವಾದ ಅಂಕ ಗಳಿಸಿದ್ದಾನೆ. ಆತನ ಪೋಷಕರು ತಮ್ಮ ಬುದ್ಧಿವಂತ ಮಗನನ್ನು ನೆನೆದು, ಮತ್ತಷ್ಟು ದುಃಖಿತರಾಗುತ್ತಿದ್ದಾರೆ. ಆ ಮನೆಯಲ್ಲಿ ಸಂಭ್ರಮ ಉಳಿದಿಲ್ಲ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications