ಕಲಾತ್ಮಕ ಸಹಿಯಿಂದ ಹೆಸರಾದ ಹೊನ್ನಾವರದ 'ಸಿಗ್ನೇಚರ್ ಶಾಂತಯ್ಯ'!
Recommended Video

ಕಾರವಾರ, ಆಗಸ್ಟ್.05:ಎಲ್ಲರೂ ಸಾಮಾನ್ಯವಾಗಿ ತಮ್ಮ ಮಾತೃ ಭಾಷೆಯಲ್ಲಿ ಅಥವಾ ಇಂಗ್ಲಿಷ್ ನಲ್ಲಿ ಅವರ ಪೂರ್ತಿ ಹೆಸರನ್ನು ಮೊಟಕುಗೊಳಿಸಿ, ಚುಟುಕಾಗಿ ಸಹಿಯನ್ನು ರೂಢಿಸಿಕೊಂಡಿರುತ್ತಾರೆ. ಅದೇ ಸಹಿಯನ್ನು ಅವರು ಎಲ್ಲಾ ಕಡೆ ಬಳಕೆ ಮಾಡುತ್ತಾರೆ. ಹಾಗೆಯೇ ಸಹಿ ಸುಲಭದ್ದಾದರೆ, ಅದನ್ನು ಸುಲಭದಲ್ಲಿಯೂ ನಕಲು ಮಾಡಲೂಬಹುದು.
ಆದರೆ, ಇಲ್ಲೊಬ್ಬರು ಅಧಿಕಾರಿ ಮಾಡುವ ಸಹಿಯನ್ನು ಕಂಡು ನೀವು ಹುಬ್ಬೇರಿಸಿದರೂ ಅದರಲ್ಲಿ ಅಚ್ಚರಿಯೇನಿಲ್ಲ!
ಬೆಂಗಳೂರಿನ ನೆಲಮಂಗಲ ಮೂಲದವರಾದ ಕೆ.ಎಸ್.ಶಾಂತಯ್ಯ ಅವರು ಹೊನ್ನಾವರದಲ್ಲಿ ಉಪನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಮಾಡಿದ ಒಂದು ಸಹಿ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರಾಗಿ ಎಲ್ಲರಿಗೂ ಅವರ ಗುರುತು ಸಿಗುವಂತೆ ಮಾಡಿದೆ.

ಕಂಬಾಳು ಸೋಮಪುರ ಶಾಂತಯ್ಯ ಎನ್ನುವುದು ಅವರ ಪೂರ್ಣ ಹೆಸರು. ಇದನ್ನೇ ಅವರು ಸಹಿಯಲ್ಲಿ ಕೆ.ಎಸ್. ಶಾಂತಯ್ಯ ಎಂದು ಅಚ್ಚಕನ್ನಡದಲ್ಲಿ ಬರೆಯುತ್ತಾರೆ. ಆದರೆ, ಅವರು ಮಾಡುವ ಸಹಿಯನ್ನು ಒಮ್ಮೆ ಗಮನಿಸಿದರೆ ನೀವು ದಂಗಾಗುತ್ತೀರಿ.
ಅವರ ಸಹಿ ಹೇಗಿರುತ್ತೆ ಅಂತಂದ್ರೆ, ಮೇಲ್ಭಾಗದಲ್ಲಿ ಸ್ಪ್ರಿಂಗ್ ಸುತ್ತಿಕೊಂಡಿರುವ ಗೆರೆ ಕೇಂದ್ರ ಬಿಂದುವಾಗಿದೆ. ಇನ್ನೊಂದು ರಿತಿಯಲ್ಲಿ ಶಂಖದಂತೆ ಕಂಡುಬಂದರೆ, ಮತ್ತೊಂದು ಕಡೆ ಕಲಾವಿದನೋರ್ವ ಯಾವುದೋ ಒಂದು ಕಲಾಕೃತಿ ಬಿಡಿಸಿದ ಹಾಗೆ ಕಾಣಿಸುತ್ತದೆ.
ಕೆ.ಎಸ್ ಶಾಂತಯ್ಯ ಅವರ ಈ ಸಹಿ ಸಾಮಾನ್ಯದಲ್ಲ. ಇದನ್ನು ಯಾರೂ ನಕಲು ಮಾಡುವಂತೆಯೂ ಇಲ್ಲ. ಇದು ಒಂದೆರಡು ಸೆಕೆಂಡಿನಲ್ಲಿ ಮುಗಿಸುವಂತದ್ದೂ ಅಲ್ಲ. ಅವರು ಒಮ್ಮೆ ಸಹಿ ಮಾಡಲು ಪ್ರಾರಂಭಿಸಿದರೆ ಸುಮಾರು ಒಂದು ನಿಮಿಷ ಹಿಡಿಯುತ್ತದೆ.

ಶಾಂತಯ್ಯ ಈ ಸಹಿಯನ್ನು ರೂಢಿಸಿಕೊಂಡಿದ್ದು 1994ರಿಂದ. ಅದನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಈ ಹಿಂದೆ ಸಹಿಯನ್ನು ಮೆಚ್ಚಿದ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಜಿಲ್ಲಾ ನೋಂದಣಾಧಿಕಾರಿಗಳ ಮೂಲಕ ಮನೆಗೆ ಕರೆಸಿಕೊಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು ಎಂದು ಅವರು ಸಹಿಯ ಹಿಂದಿನ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು.
ಕಾಲೇಜು ಹುಡುಗರಂತೂ ಇವರ ಸಹಿ ನೋಡಿ, ಕುವೆಂಪು ಬರೆದಿರುವ 'ದೇವರು ಋಜು ಮಾಡಿದನು' ಪದ್ಯವೇ ನೆನಪಾಗುತ್ತದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇವರನ್ನು ಆರ್ ಬಿಐ ಗವರ್ನರ್ ಮಾಡಿದರೆ ಯಾರೂ ನಕಲಿ ನೋಟುಗಳನ್ನು ತಯಾರಿಸುವ ಗೋಜಿಗೇ ಹೋಗುವುದಿಲ್ಲ, ಅಷ್ಟು ಕಠಿಣವಾಗಿದೆ ಅವರ ಸಹಿ ಎನ್ನುತ್ತಿದ್ದಾರೆ.
ಇವರು ದಾಖಲೆ ಪತ್ರಕ್ಕೆ ಹಾಕಿದ ಸಹಿಯನ್ನು ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಶಾಂತಯ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications