Get Updates
Get notified of breaking news, exclusive insights, and must-see stories!

2018ನೇ ಸಾಲಿನ ಕೊಂಕಣಿ ಅಕಾಡೆಮಿ ಪ್ರಶಸ್ತಿ ಘೋಷಣೆ

ಕಾರವಾರ, ಫೆಬ್ರವರಿ 10: 2018ನೇ ಸಾಲಿನ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 2018ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆಯಾಗಿದೆ.

ಅಕಾಡೆಮಿಯ ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯದಲ್ಲಿ ಜೆ.ಎಫ್.ಡಿಸೋಜಾ, ಕೊಂಕಣಿ ಕಲೆಯಲ್ಲಿ ಕೂಡ್ಲ ಆನಂದು ಮಧುಕರ್ ಶ್ಯಾನಭಾಗ, ಕೊಂಕಣಿ ಜಾನಪದದಲ್ಲಿ ಡಾ.ವಸಂತ ಬಾಂದೇಕರ್ ಆಯ್ಕೆಯಾಗಿದ್ದಾರೆ.

ಕೊಂಕಣಿ ಕವನದಲ್ಲಿ ರೋಶು ಬಜ್ಪೆ ಅವರ 'ತೀಂತ್ ಜಾಲೆಂ ರಗತ್', ಕೊಂಕಣಿ ಸಣ್ಣಕಥೆಯಲ್ಲಿ ಜೆಯಲ್ ಮಂಜರಪಲ್ಕೆ ಅವರ 'ಚಂದ್ರೆಮಾಚಿ ಖತಾಂ', ಕೊಂಕಣಿ ಕಾದಂಬರಿಯಲ್ಲಿ ಲವಿ ಗಂಜಿಮಠ ಅವರ 'ಚುಕ್‍ಲ್ಲಿಂ ಮೆಟಾಂ" ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

Konkani Academy Award -2018 was announced

ಜೆ.ಎಫ್.ಡಿಸೋಜಾ
ಜೋಕಿಮ್ ಫೆಡ್ರಿಕ್ ಡಿ'ಸೋಜಾ ಇವರ ಜನನ ಮಂಗಳೂರು ಮಿಲಾಗ್ರಿಸ್ ನ ಅತ್ತಾವರದಲ್ಲಿ. 1961ರಲ್ಲಿ ಸರಕಾರಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿಕೊಂಡು 39 ವರ್ಷಗಳ ಸುದೀರ್ಘ ಸೇವೆ ನೀಡಿ, ಸುಪರಿಟೆಂಡೆಂಟ್ ಪದವಿಯೊಂದಿಗೆ ನಿವೃತ್ತಿ ಹೊಂದಿದ್ದಾರೆ. ಇವರು ಜೆ.ಎಫ್. ಡಿಸೋಜಾ ಅತ್ತಾವರ, ಜೆಫ್ರಿ ಕುಮಾರ್, ಜೆಪ್ಪು ಜೆಫ್ರಿ ಹೆಸರಿನಲ್ಲಿ ಮಕ್ಕಳ ಕತೆ, ಲೇಖನಗಳನ್ನು ಬರೆದಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೊಂಕಣಿ, ತುಳು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಈ ರೀತಿ ಕೊಂಕಣಿ, ಕನ್ನಡ, ಇಂಗ್ಲಿಷ್, ತುಳು ಸಾಹಿತ್ಯದಲ್ಲಿಇವರ ಕೆಲಸ ಇಂದಿಗೂ ಸಾಗುತ್ತಲೇ ಇದೆ.

ಕೂಡ್ಲ ಆನಂದು ಮಧುಕರ್ ಶ್ಯಾನಭಾಗ

ಕೂಡ್ಲ ಆನಂದ ಮಧುಕರ್ ಶ್ಯಾನಭಾಗ ಇವರ ಜನನ 1953. ಸುಮಾರು 40 ಕ್ಕೂ ಹೆಚ್ಚು ನಾಟಕದ ನಿರ್ದೇಶನ ಮಾಡಿ ಪ್ರಮುಖ ನಗರ ಉತ್ಸವಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. 2005-08 ನೇ ಸಾಲಿನಲ್ಲಿ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ಯುವ ಕಲಾವಿದರನ್ನು ಒಟ್ಟುಗೂಡಿಸಿ ಕೊಂಕಣಿ ನಾಟಕ ಕಲಾ ತರಬೇತಿಯನ್ನು ನಡೆಸುತ್ತಿದ್ದಾರೆ.

ಡಾ.ವಸಂತ ಬಾಂದೇಕರ್

ಡಾ. ವಸಂತ ಬಾಂದೇಕರ್ ರವರ ಜನನ 1947. ಕೊಂಕಣಿ ಏಕ್‍ವ್ಯಕ್ತಿ ಸೇವೆಯ ಜೊತೆಗೆ ನಶಿಸಿ ಹೋಗುತ್ತಿರುವ ಕೊಂಕಣಿ ಜಾನಪದ ಕಲೆಗಳನ್ನು, ಸಾಹಿತ್ಯವನ್ನು ಲಿಖಿತವಾಗಿ ಛಾಯಾ ಚಿತ್ರದ ಮುಖಾಂತರ ಆಡಿಯೋ-ವೀಡಿಯೋ ಮೂಲಕ ಸಂಗ್ರಹಿಸಿ ಯುವಕ ಯುವತಿಯರಿಗೆ ತರಬೇತಿ ನೀಡಿ ವಿವಿಧ ಕಲಾತಂಡಗಳನ್ನು ಕಾರವಾರ ಕರಾವಳಿ ಉತ್ಸವ- ಕೊಂಕಣಿ ಸಾಹಿತ್ಯ ಅಕಾಡೆಮಿ ಉತ್ಸವ-ಜಾಗೃತಿ ಅಭಿಯಾನ-ಮಾಂಡ ಸೋಬಾಣ ಆಯೋಜಿತ ಉತ್ಸವ ಹೀಗೆ ಹಲಾವಾರು ಉತ್ಸವಗಳಲ್ಲಿ ಇವರ ನೇತೃತ್ವದ ಜೊತೆಗೆ ಕಲಾತಂಡಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿರುತ್ತಾರೆ.

ಪುಸ್ತಕ ಬಹುಮಾನ ಪುರಸ್ಕೃತರು

ರೋಶು ಬಜ್ಪೆ ಎಂ.ಕಾಮ್. ಪದವೀಧರಾಗಿದ್ದು, ಸಣ್ಣ ಕತೆ, ವಿನೋದ, ವಿಡಂಬನಾ, ಲೇಖನಾಂ ಲಲಿತಪ್ರಬಂಧಗಳನ್ನು ಬರೆದಿದ್ದಾರೆ.

ಜೆಯಲ್ ಮಂಜರಪಲ್ಕೆ ಹೆಸರಲ್ಲಿ ಕೊಂಕಣಿಯಲ್ಲಿ ಬರೆಯುತ್ತಿರುವ ಜ್ಯೋತಿ ಲೊರಿನ್ ಡಿಸಿಲ್ವಾ ಮೂಲತ: ಬೆಳ್ಮಣ್ಣಿನವರು. ಎಂ.ಎ. ಬಿ.ಎಡ್ ಮಾಡಿ ಕುಂದಾಪುರದ ಸಂತ ಮೇರಿಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರ ಕಥೆಗಳು ಕೊಂಕಣಿಯ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿವೆ.

ತಾರಾ ಲವೀನಾ ಫೆರ್ನಾಂಡಿಸ್, ಎಂ.ಎ. ಬಿ.ಎಡ್ ಪದವೀಧರೆಯಾಗಿದ್ದು, ಕಿನ್ನಿಕಂಬಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಲವಿ ಗಂಜಿಮಠ ಹೆಸರಿನಲ್ಲಿ ಕೊಂಕಣಿ ಸಾಹಿತ್ಯ ರಚನೆ ಮಾಡುತ್ತಿರುವ ಇವರು ಅಮ್ಚೊ ಯುವಕ್ ಪತ್ರಿಕೆಯಲ್ಲಿ ಪ್ರಕಟವಾದ ವಿಧಿಚಿ ದಾವ್ಲಿ ಎನ್ನುವ ಸಣ್ಣ ಕಥೆಯ ಮೂಲಕ ಸಾಹಿತ್ಯ ಸಂಸಾರಕ್ಕೆ ಕಾಲಿಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+