ಲಾಕ್ ಆಗಿದ್ದ ಕ್ಲಾಸ್ ರೂಂನಿಂದ ಬರುತ್ತಿತ್ತು ಶಬ್ದ; ಅಸಲಿ ನಡೆದಿದ್ದಾದರೂ ಏನು?
ಕಾರವಾರ, ಡಿಸೆಂಬರ್ 02: ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದರೂ ಒಳಗಿನಿಂದ ಬಾಗಿಲು ಬಡಿದ ಶಬ್ದ ಕೇಳಿಸುತ್ತಿತ್ತು. ಅದನ್ನು ಕಂಡ ಅಲ್ಲಿನ ಜನರು ಕೋಣೆಯೊಳಗೆ ಯಾರೋ ಬಂಧಿಯಾಗಿದ್ದಾರೆಂದು ಗಾಬರಿಗೊಂಡು ಪೊಲೀಸರನ್ನು ಕರೆಸಿದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಹಾಗಿದ್ದರೆ ನಿಜಕ್ಕೂ ಅಲ್ಲಿ ನಡೆದಿದ್ದೇನು? ನೋಡೋಣ ಬನ್ನಿ...
ಕಾರವಾರ ನಗರದ ಬಾಡ ಶಿವಾಜಿ ಪ್ರೌಢಶಾಲೆಯಲ್ಲಿ ಹೀಗೊಂದು ಸಂಗತಿ ನಡೆದಿದೆ. ಶಾಲೆಯ ತರಗತಿಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಆದರೆ ಯಾರೋ ಒಳಗಿನಿಂದ ಶಬ್ದ ಮಾಡುತ್ತ, ಹೊರ ಬರಬೇಕೆಂಬ ಸೂಚನೆ ನೀಡುತ್ತಿದ್ದರು. ಈ ಶಬ್ದ ಎಷ್ಟೋ ಹೊತ್ತಿನವರೆಗೂ ಕೇಳಿಸುತ್ತಿದ್ದರಿಂದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು.
ಸ್ಥಳಕ್ಕೆ ಬಂದವರು, ಯಾರೋ ಯುವತಿ ಒಳಗೆ ಬಂಧಿಯಾಗಿದ್ದಾಳೆಂದು ಯಾರು ನೀನು, ನಿನ್ನ ಹೆಸರೇನು... ಮಾತಾಡು ಹುಡುಗಿ ಎಂದೆಲ್ಲ ಪ್ರಶ್ನಿಸಿದ್ದಾರೆ. ಆದರೆ ಆ ಕಡೆಯಿಂದ ಒಂದೂ ಉತ್ತರವಿಲ್ಲ. ಆತಂಕ ಇನ್ನಷ್ಟು ಹೆಚ್ಚಾಯಿತು. ಪೊಲೀಸರನ್ನೂ ಸ್ಥಳಕ್ಕೆ ಕರೆಯಿಸಿದ್ದಾರೆ. ಎಷ್ಟೇ ಪ್ರಶ್ನೆಗಳನ್ನಿಟ್ಟರೂ ಒಳಗಿನಿಂದ ಯಾರೂ ಮಾತನಾಡುತ್ತಿಲ್ಲ. ಶಬ್ದ ಮಾತ್ರ ಕೇಳಿಸುತ್ತಲೇ ಇತ್ತು. ಕೊನೆಗೆ ಶಾಲೆಯಿಂದ ಚಾವಿ ಪಡೆದು ಬಾಗಿಲು ತೆರೆದಾಗ ಅಚ್ಚರಿ ಜೊತೆಗೆ ತಮಾಷೆಯ ಸಂಗತಿ ನಡೆದಿದೆ.

ಕೋಣೆಯೊಳಗೆ ಬಂಧಿಯಾಗಿದ್ದು ಯುವತಿಯಲ್ಲ, ಬೀದಿ ನಾಯಿ ಎಂಬುದು ಗೊತ್ತಾಗಿದೆ. ಬಾಗಿಲು ತೆರೆಯುತ್ತಿದ್ದಂತೆ ಬಾಲ ಅಲ್ಲಾಡಿಸಿಕೊಂಡು ನಾಯಿ ಹೊರ ಬರುತ್ತಿದ್ದಂತೆ, ಭಯದಲ್ಲಿದ್ದ ಸ್ಥಳೀಯರು ಮುಸುಮುಸು ನಕ್ಕಿದ್ದಾರೆ. ಸ್ಥಳೀಯರಲ್ಲಿ ಆತಂಕ ತಂದಿದ್ದ ಈ ಘಟನೆಯ ಒಂದು ಭಾಗದ ವಿಡಿಯೋವಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಇನ್ನಷ್ಟು ಆತಂಕ ಕೂಡ ಕಾರವಾರ ತಾಲೂಕಿನಾದ್ಯಂತ ಸೃಷ್ಟಿಯಾಗಿತ್ತು.
ಕೊನೆಗೆ ಎರಡನೇ ಭಾಗವೂ ಹರಿದಾಡಿ ತಮಾಷೆಯ ಸಂಭಾಷಣೆಗೂ ಘಟನೆ ಕಾರಣವಾಯಿತು.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications