ಇಚ್ಛಾ ಮರಣದ ಸರ್ಕಾರ ಅಂತ್ಯ: ಅನಂತಕುಮಾರ್ ಟಾಂಗ್
ಕಾರವಾರ, ಮೇ 23: ಕೇಂದ್ರದಲ್ಲಿ ನಿಚ್ಛಳವಾಗಿ ಬಿಜೆಪಿ ತನ್ನ ಬಹುಮತವನ್ನು ಸಾಬೀತು ಪಡಿಸಿದೆ. ಎನ್ಡಿಎ ಮೈತ್ರಿಕೂಟವು ಕಳೆದ ಬಾರಿಗಿಂತ ಅಧಿಕವಾಗಿ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ ಎಂದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಹೇಳಿದರು.
ಕುಮಟಾದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.
ಭಾರೀ ಅಂತರದ ಗೆಲುವು, ದಾಖಲೆ ಬರೆದ ಅನಂತ್ ಕುಮಾರ್ ಹೆಗಡೆ
343ಕ್ಕೂ ಹೆಚ್ಚು ಸ್ಥಾನಗಳನ್ನು ಎನ್ ಡಿಎ ಗೆದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಜನತೆ ಬಿಜೆಪಿ ಪರವಾಗಿ ಮತ ನೀಡಿದ್ದಾರೆ. ಮೋದಿಯವರ ನೇತೃತ್ವದಲ್ಲಿ ನಂಬಿಕೆ ಇಟ್ಟು ದೇಶ ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಫಲಿತಾಂಶ ನೀಡಿದ್ದಾರೆ ಎಂದರು.
3 ಲಕ್ಷಕ್ಕೂ ಅಧಿಕ ಮತಗಳೊಂದಿಗೆ ಗೆಲ್ಲುವ ನಿರೀಕ್ಷೆ ಇತ್ತು. ಕ್ಷೇತ್ರದ ಪ್ರಬುದ್ಧ ಮತದಾರನಿಗೆ ದೊರೆತ ಜಯ ಇದಾಗಿದೆ. ಇಚ್ಛಾ ಮರಣವನ್ನು ಪಡೆದಂತಹ ಮೈತ್ರಿ ಸರ್ಕಾರ ಅಂತಿಮ ದಿನಗಣನೆ ಪ್ರಾರಂಭಿಸಲಿದೆ ಎಂದು ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದರು.
Comments
lok sabha election results 2019 anant kumar hegde lok sabha elections 2019 bjp ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿ
English summary
At the center,BJP has proved its majority. BJP candidate Ananth Kumar Hegde said the NDA alliance has secured its position more than the last time but bjp created new wave in karnataka.
Story first published: Thursday, May 23, 2019, 16:39 [IST]