ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ : ಬಿಜೆಪಿ ಪ್ರಣಾಳಿಕೆ
ಬೆಂಗಳೂರು, ಫೆಬ್ರವರಿ 05 : ಕರ್ನಾಟಕ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೈರು ಹಾಜರಾಗಿದ್ದರು.
ಶನಿವಾರ
ಮಲ್ಲೇಶ್ವರದಲ್ಲಿರುವ
ಪಕ್ಷದ
ಕಚೇರಿಯಲ್ಲಿ
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಅವರು
ಪ್ರಣಾಳಿಕೆಯನ್ನು
ಬಿಡುಗಡೆ
ಮಾಡಿದರು.
ಕೇಂದ್ರ
ಸಚಿವ
ಅನಂತ್
ಕುಮಾರ್,
ಡಿ.ವಿ.ಸದಾನಂದ
ಗೌಡ,
ಮಾಜಿ
ಸಿಎಂ
ಜಗದೀಶ್
ಶೆಟ್ಟರ್,
ಮಾಜಿ
ಸಚಿವ
ಸುರೇಶ್
ಕುಮಾರ್,
ಆರ್.ಅಶೋಕ್
ಮುಂತಾದವರು
ಈ
ಸಂದರ್ಭದಲ್ಲಿ
ಉಪಸ್ಥಿತರಿದ್ದರು.
[112
ಭರವಸೆಗಳ
ಕಾಂಗ್ರೆಸ್
ಪ್ರಣಾಳಿಕೆ]
ಅಭಿವೃದ್ಧಿ ಕೇಂದ್ರಿತ ಆಡಳಿತ, ಆಡಳಿತಾತ್ಮಕ ಶಕ್ತಿ ವೃದ್ಧಿ, ಸಂಪನ್ಮೂಲ ಕ್ರೋಢೀಕರಣ, ಪಂಚಾಯತ್ ರಾಜ್ ಸ್ವಾಯ ತ್ತತೆಗೆ ಆದ್ಯತೆ, ಸಾಮಾಜಿಕ ವಿಕಾಸವೇ ಮೂಲಮಂತ್ರ ಸೇರಿದಂತೆ ಏಳು ಪ್ರಮುಖ ಅಂಶಗಳ ಆಧಾರದ ಮೇಲೆ ಚುನಾವಣಾ ಪ್ರಣಾಳಿಯರನ್ನು ಸಿದ್ಧಪಡಿಸಲಾಗಿದೆ. [ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ವಿವರ]
ಪ್ರಣಾಳಿಕೆಯ ಪ್ರಮುಖ ಅಂಶಗಳು
*
ತಾಲೂಕು
ಪಂಚಾಯಿತಿಗೆ
5
ಕೋಟಿ,
ಜಿಲ್ಲಾಪಂಚಾಯಿತಿಗೆ
10
ಕೋಟಿ
ಅನುದಾನ
ನೀಡಲು
ಒತ್ತಾಯ
*
ಜಿಲ್ಲಾ
ಮತ್ತು
ತಾಲೂಕು
ಪಂಚಾಯಿತಿ
ಸದಸ್ಯರ
ಗೌರವ
ಧನವನ್ನು
ಹೆಚ್ಚಳ
ಮಾಡಲು
ಕ್ರಮ
*
ಆಡಳಿತ
ಮತ್ತು
ಕಾಮಗಾರಿಗಳ
ಪರಿಶೀಲನೆಗೆ
ಜಾಗೃತಿ
ಸಮಿತಿ
ರಚನೆ
ಮಾಡುವುದು
*
ಡಿಜಿಟಲ್
ಇಂಡಿಯಾ
ಯೋಜನೆಯಡಿ
ಪ್ರತಿ
ಪಂಚಾಯರ್
ರಾಜ್
ಕೆಲಸಗಳನ್ನು
ಡಿಜಿಟಲೀಕರಣ
ಮಾಡುವುದು
*
ಉದ್ಯೋಗ
ಖಾತ್ರಿ
ಯೋಜನೆ
ಸಮರ್ಪಕ
ಜಾರಿಗೆ
ಮೇಲುಸ್ತುವಾರಿ
ಸಮಿತಿ
ರಚನೆ
*
ಪ್ರತಿ
ತಾಲೂಕಿನ
ಎಲ್ಲಾ
ವಿದ್ಯಾರ್ಥಿ
ನಿಲಯಗಳಲ್ಲಿ
ಮೂಲ
ಸೌಕರ್ಯ
ಒದಗಿಸುವುದು
*
ಪ.ಜಾ/ಪ.ಪಂ/ಅಲ್ಪ
ಸಂಖ್ಯಾತ
ವರ್ಗವದವರಿಗೆ
ಉದ್ಯೋಗದ
ತರಬೇತಿ
ನೀಡಲು
ಕೇಂದ್ರಗಳ
ಸ್ಥಾಪನೆ
*
ಲಂಬಾಣಿ
ತಾಂಡಾ,
ಗಿರಿಜನರ
ಹಾಡಿಗಳಲ್ಲಿ
ಮೂಲಸೌಕರ್ಯಗಳನ್ನು
ಕಲ್ಪಿಸುವುದು
*
ಕೃಷಿ
ಪಂಪ್
ಸೆಟ್ಗಳಿಗೆ
ಸೌರಶಕ್ತಿ
ಅಳವಡಿಕೆ
*
ಎಲ್ಲಾ
ತಾಲೂಕುಗಳಲ್ಲಿ
ವಿದ್ಯುನ್ಮಾನ
ಮಾರುಕಟ್ಟೆ
ಸ್ಥಾಪನೆ
*
ಅನಾಥ
ಮಕ್ಕಳ
ಕಲ್ಯಾಣಕ್ಕೆ
ಪ್ರತಿ
ಜಿಲ್ಲೆಯಲ್ಲಿ
ವಿಶೇಷ
ಯೋಜನೆ
*
ಗ್ರಾಮೀಣ
ಮಹಿಳೆಯರ
ಸ್ವ
ಸಹಾಯ
ಗುಂಪುಗಳಿಗೆ
ಪ್ರೋತ್ಸಾಹ
*
ಹಳ್ಳಿಗಳಲ್ಲಿ
ಬಡತನ
ನಿವಾರಿಸಲು
ಅಂತ್ಯೋದಯ
ಯೋಜನೆ
ಜಾರಿ
*
ಪ್ರತಿಯೊಂದು
ಸರ್ಕಾರಿ
ಶಾಲೆಗಳ
ದುರಸ್ತಿ