ಮೂರು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ : ಸಿಎಂ
ಬೆಂಗಳೂರು, ಮೇ 15 : 'ಎತ್ತಿನಹೊಳೆ ಯೋಜನೆ ಜಾರಿಯಾದರೆ ಅಗತ್ಯ ಪ್ರಮಾಣದಲ್ಲಿ ನೀರು ದೊರಕಲಿದೆ. ಮೂರು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ
ಎತ್ತಿನಹೊಳೆ
ಯೋಜನೆ
ಕುರಿತು
ಕೋಲಾರ,
ತುಮಕೂರು
ಮತ್ತು
ಚಿಕ್ಕಬಳ್ಳಾಪುರ
ಜಿಲ್ಲೆ
ಶಾಸಕರು
ಮುಖ್ಯಮಂತ್ರಿಗಳನ್ನು
ಭೇಟಿಮಾಡಿ
ಚರ್ಚೆ
ನಡೆಸಿದರು.
ಮುಖ್ಯಮಂತ್ರಿಯವರ
ಗೃಹ
ಕಚೇರಿ
ಕೃಷ್ಣಾದಲ್ಲಿ
ನಡೆದ
ಸಭೆಯಲ್ಲಿ
ಯೋಜನೆ
ಸಂಬಂಧ
ಈವರೆಗೆ
ಆಗಿರುವ
ಪ್ರಗತಿಯನ್ನು
ಅಧಿಕಾರಿಗಳು
ಪ್ರಾತ್ಯಕ್ಷಿಕೆ
ಮೂಲಕ
ವಿವರಿಸಿದರು.
[ಎತ್ತಿನಹೊಳೆ
ಯೋಜನೆ
ಕುಡಿಯುವ
ನೀರಿಗಾಗಿ
ಮಾತ್ರ]
ಯೋಜನೆ ವಿಚಾರದಲ್ಲಿ ಸಣ್ಣ ನೀರಾವರಿ ಮತ್ತು ಜಲ ಸಂಪನ್ಮೂಲ ಇಲಾಖೆ ನಡುವೆ ಸಮನ್ವಯ ಸಾಧಿಸಲು ಜಲ ಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಭೂ ಸ್ವಾಧೀನ ಮತ್ತು ಯೋಜನೆಗೆ ಅಗತ್ಯವಾದ ವಿದ್ಯುತ್ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. [ಎತ್ತಿನಹೊಳೆ ಯೋಜನೆಗೆ ಸರ್ಕಾರದ ಹಸಿರು ನಿಶಾನೆ]
ಅಗತ್ಯ
ನೀರು
ಸಿಗಲಿದೆ
:
ಸಭೆಯಲ್ಲಿ
ಮಾತನಾಡಿದ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು,
'ಕೋಲಾರ,
ಬೆಂಗಳೂರು
ಗ್ರಾಮಾಂತರ,
ಚಿಕ್ಕಬಳ್ಳಾಪುರ
ಮತ್ತು
ತುಮಕೂರು
ಜಿಲ್ಲೆಯಲ್ಲಿ
ಕುಡಿಯುವ
ನೀರಿಗೆ
ತೀವ್ರ
ಅಭಾವವಿದೆ.
ಆದ್ದರಿಂದ
ಎತ್ತಿನ
ಹೊಳೆ
ಯೋಜನೆ
ಅನಿವಾರ್ಯವಾಗಿದೆ'
ಎಂದು
ಹೇಳಿದರು.[ಬರಪೀಡಿತ
ಕೋಲಾರ-ಚಿಕ್ಕಬಳ್ಳಾಪುರ
ಜನರಿಂದ
ಬೈಕ್
ಜಾಥಾ]
'ಸರ್ಕಾರದ
ಆದ್ಯತೆಯ
ಯೋಜನೆಗಳಲ್ಲಿ
ಎತ್ತಿನಹೊಳೆ
ಯೋಜನೆಯೂ
ಸೇರಿದ್ದು
ಕಾಮಗಾರಿಯನ್ನು
3
ವರ್ಷಗಳಲ್ಲಿ
ಪೂರ್ಣಗೊಳಿಸಲು
ಸರ್ಕಾರ
ಬದ್ಧವಾಗಿದೆ.
ಯೋಜನೆ
ಕುರಿತು
ಅಪಪ್ರಚಾರ
ಮಾಡಬೇಡಿ,
ಎತ್ತಿನಹೊಳೆ
ಯೋಜನೆಯಲ್ಲಿ
ಅಗತ್ಯ
ಪ್ರಮಾಣದಲ್ಲಿ
ನೀರು
ಸಿಗಲಿದೆ.
ಈ
ಬಗ್ಗೆ
ಯಾವುದೇ
ಅನುಮಾನ
ಬೇಡ'
ಎಂದು
ಸಿದ್ದರಾಮಯ್ಯ
ಸ್ಪಷ್ಟನೆ
ನೀಡಿದರು.
[ನೀರು
ಕೊಡದಿದ್ದರೆ
ಚುನಾವಣೆ
ಬಹಿಷ್ಕಾರ,
ಹಳ್ಳಿಗರ
ಪ್ರತಿಜ್ಞೆ]
ವಿಧಾನಸಭೆ ಉಪಾಧ್ಯಕ್ಷ ಶಿವಶಂಕರ ರೆಡ್ಡಿ, ಹಿರಿಯ ಶಾಸಕ ರಮೇಶ್ ಕುಮಾರ್ ಸೇರಿದಂತೆ ಮೂರೂ ಜಿಲ್ಲೆಗಳ ಶಾಸಕರು, ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಏನಿದು ಎತ್ತಿನಹೊಳೆ ಯೋಜನೆ? : ಬಯಲುಸೀಮೆ ಜಿಲ್ಲೆಗಳಿಗೆ ಪಶ್ಚಿಮಘಟ್ಟದ ನದಿಗಳಿಂದ ನೀರು ತರುವ ಯೋಜನೆ ಇದಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಮೂಲಕ ನೀರು ಲಭ್ಯವಾಗಲಿದೆ. ಯೋಜನೆಗೆ 12,912 ಕೋಟಿ ವೆಚ್ಚದ ಪರಿಷ್ಕೃತ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ.