ಎತ್ತಿನಹೊಳೆ ಯೋಜನೆಗೆ ಅನುದಾನದ ಕೊರತೆ
ಬೆಂಗಳೂರು, ಮಾರ್ಚ್ 24 : ಕರಾವಳಿ ಭಾಗದ ಜನರ ವಿರೋಧಕ್ಕೆ ಕಾರಣವಾಗಿರುವ ಎತ್ತಿನಹೊಳೆ ಯೋಜನೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಬಜೆಟ್ನಲ್ಲಿ ಯೋಜನೆಗೆ ಅನುದಾನ ಕೊಟ್ಟಿಲ್ಲ. ಯೋಜನೆಗೆ ಹಣಕಾಸಿನ ಕೊರತೆ ಎದುರಾಗಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ.
ಜೆಡಿಎಸ್
ಶಾಸಕ
ಕೆ.ಎಂ.ಶಿವಲಿಂಗೇಗೌಡ
ಅವರು
ಬುಧವಾರ
ವಿಧಾನಸಭೆಯಲ್ಲಿ
ಯೋಜನೆ
ಬಗ್ಗೆ
ತೀವ್ರ
ಅಸಮಾಧಾನ
ವ್ಯಕ್ತಪಡಿಸಿದರು.
ಬಯಲು
ಸೀಮೆಯ
ಆಶಾಕಿರಣವೆನಿಸಿಕೊಂಡಿರುವ
ಎತ್ತಿನಹೊಳೆ
ಯೋಜನೆಗೆ
ಬಜೆಟ್ನಲ್ಲಿ
ನಿರ್ದಿಷ್ಟ
ಅನುದಾನವನ್ನು
ನೀಡಿಲ್ಲ
ಎಂದು
ದೂರಿದರು.
[ಎತ್ತಿನಹೊಳೆ
ಯೋಜನೆಯಲ್ಲಿ
ಹಣದ
ಹೊಳೆ]
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಎತ್ತಿನಹೊಳೆ ಯೋಜನೆಗೆ ಬಜೆಟ್ನಲ್ಲಿ ಅನುದಾನ ಕೊಟ್ಟಿಲ್ಲ. 1,800 ಕೋಟಿ ರೂ. ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ ಎಷ್ಟು ವರ್ಷ ಬೇಕು?' ಎಂದು ಪ್ರಶ್ನಿಸಿದರು.[ಬಜೆಟ್ಟಿನಲ್ಲಿ ನೀರಾವರಿ ವಲಯವನ್ನು ಬದಿಗೊತ್ತಿದ್ದ ಸಿದ್ದರಾಮಯ್ಯ]
'ಕೃಷ್ಣಾ, ಕಾವೇರಿ ನೀರಾವರಿ ಯೋಜನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಕೊಡಲಾಗಿದೆ. ಆದರೆ, ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಇಲ್ಲಿಯವರೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೊಡಿ. ಶಾಶ್ವತ ನೀರಾವರಿ ಯೋಜನೆಯಡಿ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ' ಎಂದು ಆರೋಪಿಸಿದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ಯೋಜನೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ಅವರು, 'ಎತ್ತಿನಹೊಳೆ ಯೋಜನೆಯಡಿ ಸಾಕಷ್ಟು ನೀರು ಸಿಗುವುದಿಲ್ಲ ಎಂಬ ಅಪಸ್ವರ ಎಲ್ಲೆಡೆ ಉಲ್ಬಣಗೊಂಡಿದೆ. ನೀರು ಸಿಗದೇ ಇದ್ದರೆ ಯೋಜನೆ ವಿಫಲವಾಗುವ ಸಾಧ್ಯತೆ ಇರುವುದರಿಂದ ಬೇರೆ ಮೂಲಗಳಿಂದ ಅಥವಾ ಶರಾವತಿ, ಭದ್ರಾದಿಂದ ನೀರು ತರಲು ಚಿಂತನೆ ನಡೆಸಿ' ಎಂದು ಹೇಳಿದರು.