ಬೆಂಬಲಿಗರಿಗೆ ಸ್ಥಾನಮಾನ ನೀಡಲು ಬಿಎಸ್ವೈ ಪತ್ರ!
ಬೆಂಗಳೂರು, ಮಾ.10 : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಬೆಂಬಲಿಗರ ಅಸಮಾಧಾನವನ್ನು ಶಮನಗೊಳಿಸಲು ಮುಂದಾಗಿದ್ದಾರೆ. ಬೆಂಬಲಗರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿಯಲ್ಲಿ
ಸೂಕ್ತ
ಸ್ಥಾನಮಾನ
ದೊರೆಯದ
ಬಿಎಸ್
ಯಡಿಯೂರಪ್ಪ
ಬೆಂಬಲಿಗರು
ಕಾಂಗ್ರೆಸ್
ಮತ್ತು
ಜೆಡಿಎಸ್
ನತ್ತ
ಮುಖ
ಮಾಡಿರುವುದು
ಗುಟ್ಟಾಗಿ
ಉಳಿದಿಲ್ಲ.
ಇದು
ಲೋಕಸಭೆ
ಚುನಾವಣೆಯಲ್ಲಿ
ಪಕ್ಷದ
ಮೇಲೆ
ಪ್ರಭಾವ
ಬೀರುವ
ಸಾಧ್ಯತೆ
ಇದೆ.
ಆದ್ದರಿಂದ
ಬೆಂಬಲಿಗರ
ಅಸಮಾಧಾನವನ್ನು
ಶಮನಗೊಳಿಸಲು
ಯಡಿಯೂರಪ್ಪ
ಮುಂದಾಗಿದ್ದಾರೆ.
[ಬಿಎಸ್ವೈಗೆ
ಬೆಂಬಲಿಗರ
ಪ್ರಶ್ನೆಗಳು]
ಬೆಂಬಲಿಗರ ಅಸಮಾಧಾನದ ಕುರಿತು ಭಾನುವಾರ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದ ಬಿಎಸ್ ಯಡಿಯೂರಪ್ಪ ಈ ಕುರಿತು ಸೋಮವಾರ ಪತ್ರ ಬರೆದಿದ್ದಾರೆ. ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. [ಜೆಡಿಎಸ್ ಬಾಗಿಲು ತಟ್ಟಿದ ಧನಂಜಯ್ ಕುಮಾರ್]
ಕೆಜೆಪಿಯಿಂದ ಬಿಜೆಪಿಗೆ ಯಡಿಯೂರಪ್ಪ ಜೊತೆಗೆ ಮರಳಿದ ಎಂ.ಡಿ.ಲಕ್ಷ್ಮೀನಾರಾಯಣ, ಧನಂಜಯ್ ಕುಮಾರ್, ತುಮಕೂರು ಹಾಲಿ ಸಂಸದ ಜಿ.ಎಸ್.ಬಸವರಾಜು ಮುಂತಾದವರು ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನಕ್ಕಾಗಿ ಕಳೆದ ವಾರದಿಂದ ಬಹಿರಂಗವಾಗಿ ಬೇಡಿಕೆ ಮುಂದಿಟ್ಟಿದ್ದಾರೆ. ಬೆಂಬಲಿಗರಿಗೆ ಸ್ಥಾನಮಾನವಿಲ್ಲ, ಲೋಕಸಭೆ ಟಿಕೆಟ್ ಸಹ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಿಜೆಪಿ ಸೂಕ್ತ ಸ್ಥಾನ ನೀಡದಿದ್ದರೆ, ಪಕ್ಷ ತೊರೆಯಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. [ಬಿಜೆಪಿ ಮೊದಲ ಪಟ್ಟಿ ನೋಡಿ]
ಸಿಂಗ್ ಜೊತೆ ಚರ್ಚೆ : ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಜೊತೆ ಯಡಿಯೂರಪ್ಪ ರಾಜ್ಯದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮತ್ತು ತಮ್ಮ ಬೆಂಬಲಿಗರಿಗೆ ಸ್ಥಾನಮಾನ ನೀಡುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.