ಯಾದಗಿರಿ: ರಾಚೋಟೇಶ್ವರ ಶ್ರೀಗಳ ಸಮಾಧಿ ಯೋಗ ಅನುಷ್ಠಾನ ಅಂತ್ಯ
ಯಾದಗಿರಿ, ಅಕ್ಟೋಬರ್ 11: ಕಿಕ್ಕಿರಿದು ತುಂಬಿರುವ ಭಕ್ತ ಸಮೂಹ. ಶ್ರೀಗಳಿಂದ ಗದ್ದುಗೆ ಗುಡಿಯ ಮಹದ್ವಾರಕ್ಕೆ ಪೂಜೆ. ಸಮಾಧಿ ಯೋಗದಲ್ಲಿದ್ದ ಸ್ವಾಮೀಜಿಗೆ ಜಯ ಘೋಷಗಳೊಂದಿಗೆ ಭಕ್ತರಿಂದ ಸ್ವಾಗತ. ಇದು ಕಂಡು ಬಂದಿದ್ದು ಯಾದಗಿರಿ ತಾಲೂಕಿನ ಚಿಂತನಹಳ್ಳಿಯ ಶ್ರೀ ಗವಿ ಸಿದ್ದೇಶ್ವರ ಮಠದಲ್ಲಿ.
22 ದಿನಗಳ ಕಾಲ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ ಸಮಾಧಿಯೋಗ ಅನುಷ್ಠಾನಕ್ಕೆ ಕುಳಿತಿದ್ದರು. ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ ಶ್ರೀ ಗವಿಯಪ್ಪ ಎಂಬ ಶರಣರ ಸಮಾಧಿ ಮೇಲೆ ನಿರ್ಮಿಸಿರೋ ಗದ್ದುಗೆ ಗುಡಿಯಲ್ಲಿ ಸಮಾಧಿ ಯೋಗ ಆರಂಭಿಸಿದ್ದರು.

ಸಮಾಧಿಯೋಗ ಅನುಷ್ಠಾನ ಆರಂಭಿಸಿದ ಬಳಿಕ ಶ್ರೀ ಶರಣ ಗವಿಯಪ್ಪ ಗದ್ದುಗೆ ಗುಡಿಯ ಮಹಾದ್ವಾರವನ್ನು ಮುಚ್ಚಲಾಗಿತ್ತು. ಇವತ್ತು ರಾಚೋಟೇಶ್ವರ ಶಿವಾಚಾರ್ಯರ 44ನೇ ಮೌನ ಅನುಷ್ಠಾನ ಹಾಗೂ ಸಮಾಧಿ ಯೋಗ ಅಂತ್ಯ ಹಿನ್ನೆಲೆಯಲ್ಲಿ ಗದ್ದುಗೆಯ ಮಹದ್ವಾರವನ್ನು ಒಡೆದು ಸ್ವಾಮೀಜಿಯನ್ನು ಹೊರಗೆ ಕರೆತರಲಾಯಿತು.
ರಾಚೋಟೇಶ್ವರ ಸ್ವಾಮೀಜಿ ಹಿನ್ನೆಲೆ
ರಾಚೋಟೇಶ್ವರ ಸ್ವಾಮೀಜಿ, ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬೊಮ್ಮನಾಳ ಗ್ರಾಮದವರು. ಸದ್ಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಪಿಎಚ್ಡಿ ಮಾಡ್ತಿದ್ದಾರೆ. ಅಲ್ಲದೇ ಗದಗ ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿರೋ ಬೂದೀಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿದ್ದಾರೆ.

ರಾಚೋಟೇಶ್ವರ ಶ್ರೀಗಳು ಕಳೆದ 10 ವರ್ಷಗಳಿಂದ ದ್ರವ ಪದಾರ್ಥ, ನೆನಸಿದ ಆಹಾರ ಪದಾರ್ಥ ಹಾಗೂ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರಂತೆ. ಹೀಗೆ ಕಳೆದ 20 ವರ್ಷಗಳಿಂದ ಕಠಿಣ ವೃತ ಆಚರಿಸುತ್ತಿದ್ದಾರಂತೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications