ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಾದಗಿರಿ, ರಾಯಚೂರು ಜಿಲ್ಲಾ ಸುದ್ದಿಗಳ ಗುಚ್ಛ
ಯಾದಗಿರಿ, ಅಕ್ಟೋಬರ್ 12 : ಯಾದಗಿರಿ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಧಾರಕಾರ ಮಳೆಯಾಗುತ್ತಿದೆ. ನಗರದ ಫಕರೂಲ್ಲಾ ಬಾಷಾ ದರ್ಗಾ ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿ ದರ್ಗಾ ಇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ನುಗ್ಗಿದೆ. ನೀರಿನಿಂದಾಗಿ ದರ್ಗಾ ಮಿನಿ ಕೆರೆಯಂತಾಗಿದೆ.
* ಲಿಂಗಸುಗೂರು : ಲಿಂಗಸುಗೂರು ಸಮೀಪದ ಹಟ್ಟಿ ಪಟ್ಟಣದಲ್ಲಿ ಈಜಲು ಹೋದ ಬಾಲಕ ನೀರು ಪಾಲಾಗಿದ್ದಾನೆ. ಹಟ್ಟಿ ಕ್ಯಾಂಪ್ನ ಜಯಪ್ರಕಾಶ್ ಕಾಲೋನಿಯ ಕಿರಣ ಕುಮಾರ್ (9) ಮೃತಪಟ್ಟ ಬಾಲಕ. ಕಿರಣ ಕುಮಾರ್ ಪಟ್ಟಣದ ವಿನಾಯಕ ಶಾಲೆಯಲ್ಲಿ ಓದುತ್ತಿದ್ದ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಹಾಯಕ ಆಯುಕ್ತರ ಕಚೇರಿ ಎದುರು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಧರಣಿ ಮಾಡಲಾಗುತ್ತಿದ್ದು ಅಮರಪ್ಪ ಎಂಬ ವ್ಯಕ್ತಿ ಅಸ್ವಸ್ಥಗೊಂಡಿದ್ದಾರೆ.
Comments
English summary
The heavy rain lashed Yadgir district. Here are the district news from Yadgir and Raichur.