ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?
'ಇಂದು ಮತದಾನ ಮಾಡಿದೆ, ಈಗ ನನ್ನ ಮೈಮೇಲೊಂದು ಕಪ್ಪು ಕಲೆ' ಇದು ಯಾವುದೋ ಅಜ್ಞಾತ ಕವಿಯೊಬ್ಬನ ಸಾಲು. ಚಿಕ್ಕ ಸಾಲಾದರೂ ಅರ್ಥವತ್ತಾದದ್ದೆ. ಆದರೆ ಇಲ್ಲಿ ಒಳಾರ್ಥ ವಿಶ್ಲೇಷಣೆ ಮಾಡುವುದು ಬೇಡ. ಮತದಾನದ ದಿನ ಬೆರಳಿಗೆ ಹಾಕುವ ಶಾಯಿಯ ಬಗ್ಗೆ ಮಾತ್ರವೇ ಚರ್ಚೆ ಮಾಡೋಣ.
ಮತದಾನ ಮಾಡಿದವರದ್ದು ಈಗ ಹೊಸ ಪ್ಯಾಷನ್ ಎಂದರೆ ಶಾಯಿ ಹಾಕಿದ ಬೆರಳು ಮುಂದೆ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ಸ್ಗಳಿಗಾಗಿ ಕಾಯುವುದು. ಆದರೆ ಏಕೆ ಮತದಾನದ ಮಸಿಯನ್ನು ಎಡಗೈ ತೋರುಬೆರಳಿಗೇ ಹಾಕುತ್ತಾರೆ ಯೋಚಿಸಿದ್ದೀರಾ?. ಇಲ್ಲಿದೆ ನೋಡಿ ಕಾರಣ.

* ಎಡಗೈ ತೋರು ಬೆರಳು ಬೇಗ ಗಮನ ಸೆಳೆಯುತ್ತದಂತೆ ಅದಕ್ಕೆಂದು ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ.
* ನಮ್ಮ ದೇಶದಲ್ಲಿ ಎಡಚರಿಗಿಂತಲೂ ಬಲಗೈ ಬಳಸುವವರ ಸಂಖ್ಯೆಯೇ ಹೆಚ್ಚು, ಬಲಗೈಯನ್ನು ಕೆಲಗಳಳಿಗೆ ಬಳಸುವಷ್ಟು ಎಡಗೈಯನ್ನು ಬಳಸುವುದಿಲ್ಲ, ಹಾಗಾಗಿ ಎಡಗೈಗೆ ಹಾಕಿದ ಇಂಕು ಬೇಗ ಅಳಿಸುವುದಿಲ್ಲ ಹಾಗಾಗಿ ಎಡಗೈಗೆ ಇಂಕು ಹಾಕುವುದು ರೂಢಿ.
* ಯಾವುದಾದರೂ ವ್ಯಕ್ತಿಗೆ ಎಡಗೈ ತೋರುಬೆರಳು ಇಲ್ಲದಿದ್ದರೆ ಆತನ ಎಡಗೈನ ಇತರ ಯಾವುದಾದರೂ ಒಂದು ಬೆರಳಿಗೆ ಶಾಯಿ ಹಾಕುತ್ತಾರೆ, ಎಡಗೈ ಇಲ್ಲದೇ ಹೋದಲ್ಲಿ ಬಲಗೈನ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡೂ ಕೈ ಇಲ್ಲದ ವ್ಯಕ್ತಿಗೆ ಕಾಲಿನ ಬೆರಳಿಗೆ ಇಂಕು ಹಾಕುತ್ತಾರೆ.
* ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ.
* ಮಾರ್ಕರ್ನಿಂದ ಮಾರ್ಕ್ ಮಾಡುವ, ಬೆರಳನ್ನು ಇಂಕಿನ ಬಾಟಲಿಯಲ್ಲಿ ಅದ್ದುವ ಪದ್ಧತಿಯೂ ಮುಂಚೆ ಇತ್ತು ಆದರೆ ಈಗ ಬೆರಳಿಗೆ ಇಂಕನ್ನು ಬಳಿಯುವ ಪದ್ಧತಿ ಚಾಲ್ತಿಯಲ್ಲಿದೆ.
ಇಂಕು ತಯಾರಿಸುವುದು ಮೈಸೂರಿನಲ್ಲಿ
ಮತದಾನದ ದಿನ ಬೆರಳಿಗೆ ಹಚ್ಚುವ ಶಾಯಿ ತಯಾರಿಸುವುದು ಇಡೀ ಭಾರತದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮಾತ್ರ. ಹೌದು, ಮೈಸೂರಿನ 'ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್' ಸಂಸ್ಥೆಯು ಮಾತ್ರವೇ ಈ ಶಾಯಿಯನ್ನು ಉತ್ಪಾದಿಸುತ್ತದೆ. ದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ಇಲ್ಲಿನಿಂದಲೇ ಸರಬರಾಜಾಗುವುದು. ಈ ಸಂಸ್ಥೆ ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications