ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?
'ಇಂದು ಮತದಾನ ಮಾಡಿದೆ, ಈಗ ನನ್ನ ಮೈಮೇಲೊಂದು ಕಪ್ಪು ಕಲೆ' ಇದು ಯಾವುದೋ ಅಜ್ಞಾತ ಕವಿಯೊಬ್ಬನ ಸಾಲು. ಚಿಕ್ಕ ಸಾಲಾದರೂ ಅರ್ಥವತ್ತಾದದ್ದೆ. ಆದರೆ ಇಲ್ಲಿ ಒಳಾರ್ಥ ವಿಶ್ಲೇಷಣೆ ಮಾಡುವುದು ಬೇಡ. ಮತದಾನದ ದಿನ ಬೆರಳಿಗೆ ಹಾಕುವ ಶಾಯಿಯ ಬಗ್ಗೆ ಮಾತ್ರವೇ ಚರ್ಚೆ ಮಾಡೋಣ.
ಮತದಾನ ಮಾಡಿದವರದ್ದು ಈಗ ಹೊಸ ಪ್ಯಾಷನ್ ಎಂದರೆ ಶಾಯಿ ಹಾಕಿದ ಬೆರಳು ಮುಂದೆ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ಸ್ಗಳಿಗಾಗಿ ಕಾಯುವುದು. ಆದರೆ ಏಕೆ ಮತದಾನದ ಮಸಿಯನ್ನು ಎಡಗೈ ತೋರುಬೆರಳಿಗೇ ಹಾಕುತ್ತಾರೆ ಯೋಚಿಸಿದ್ದೀರಾ?. ಇಲ್ಲಿದೆ ನೋಡಿ ಕಾರಣ.

* ಎಡಗೈ ತೋರು ಬೆರಳು ಬೇಗ ಗಮನ ಸೆಳೆಯುತ್ತದಂತೆ ಅದಕ್ಕೆಂದು ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ.
* ನಮ್ಮ ದೇಶದಲ್ಲಿ ಎಡಚರಿಗಿಂತಲೂ ಬಲಗೈ ಬಳಸುವವರ ಸಂಖ್ಯೆಯೇ ಹೆಚ್ಚು, ಬಲಗೈಯನ್ನು ಕೆಲಗಳಳಿಗೆ ಬಳಸುವಷ್ಟು ಎಡಗೈಯನ್ನು ಬಳಸುವುದಿಲ್ಲ, ಹಾಗಾಗಿ ಎಡಗೈಗೆ ಹಾಕಿದ ಇಂಕು ಬೇಗ ಅಳಿಸುವುದಿಲ್ಲ ಹಾಗಾಗಿ ಎಡಗೈಗೆ ಇಂಕು ಹಾಕುವುದು ರೂಢಿ.
* ಯಾವುದಾದರೂ ವ್ಯಕ್ತಿಗೆ ಎಡಗೈ ತೋರುಬೆರಳು ಇಲ್ಲದಿದ್ದರೆ ಆತನ ಎಡಗೈನ ಇತರ ಯಾವುದಾದರೂ ಒಂದು ಬೆರಳಿಗೆ ಶಾಯಿ ಹಾಕುತ್ತಾರೆ, ಎಡಗೈ ಇಲ್ಲದೇ ಹೋದಲ್ಲಿ ಬಲಗೈನ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡೂ ಕೈ ಇಲ್ಲದ ವ್ಯಕ್ತಿಗೆ ಕಾಲಿನ ಬೆರಳಿಗೆ ಇಂಕು ಹಾಕುತ್ತಾರೆ.
* ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ.
* ಮಾರ್ಕರ್ನಿಂದ ಮಾರ್ಕ್ ಮಾಡುವ, ಬೆರಳನ್ನು ಇಂಕಿನ ಬಾಟಲಿಯಲ್ಲಿ ಅದ್ದುವ ಪದ್ಧತಿಯೂ ಮುಂಚೆ ಇತ್ತು ಆದರೆ ಈಗ ಬೆರಳಿಗೆ ಇಂಕನ್ನು ಬಳಿಯುವ ಪದ್ಧತಿ ಚಾಲ್ತಿಯಲ್ಲಿದೆ.
ಇಂಕು ತಯಾರಿಸುವುದು ಮೈಸೂರಿನಲ್ಲಿ
ಮತದಾನದ ದಿನ ಬೆರಳಿಗೆ ಹಚ್ಚುವ ಶಾಯಿ ತಯಾರಿಸುವುದು ಇಡೀ ಭಾರತದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮಾತ್ರ. ಹೌದು, ಮೈಸೂರಿನ 'ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್' ಸಂಸ್ಥೆಯು ಮಾತ್ರವೇ ಈ ಶಾಯಿಯನ್ನು ಉತ್ಪಾದಿಸುತ್ತದೆ. ದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ಇಲ್ಲಿನಿಂದಲೇ ಸರಬರಾಜಾಗುವುದು. ಈ ಸಂಸ್ಥೆ ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications