ಮತಯಂತ್ರ ಸರಿಯಿಲ್ಲವೆಂದು ಸುಳ್ಳು ಹೇಳಿದರೆ ಏನು ಶಿಕ್ಷೆ?
ಬೆಂಗಳೂರು, ಏಪ್ರಿಲ್ 17: ಚುನಾವಣೆಗಳು ಬಂದಾಗೆಲ್ಲಾ ಮತಯಂತ್ರದ ಬಗೆಗಿನ ಅನುಮಾನಗಳು ಏಳುತ್ತವೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳು ಹರಿದಾಡಿ, ಮತಯಂತ್ರದ ಬಗೆಗಿನ ಅಪನಂಬಿಕೆ ಹುಟ್ಟುವಂತೆ ಮಾಡುತ್ತವೆ. ಆದರೆ ನೆನಪಿರಲಿ ಈ ವರೆಗೆ ಯಾರೂ ಮತಯಂತ್ರವನ್ನು ಹ್ಯಾಕ್ ಮಾಡಬಹುದು ಎಂಬುದನ್ನು ಸಾಬೀತು ಮಾಡಿಲ್ಲ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮತಯಂತ್ರ ಸರಿಯಿಲ್ಲವೆಂದು ಹುಯಿಲೆಬ್ಬಿಸುವವರೂ ಇರುತ್ತಾರೆ. ಆದರೆ ಹೀಗೆ ಸುಳ್ಳು ಹೇಳಿದರೆ ಭಾರಿ ಶಿಕ್ಷೆ ಕಾದಿದೆ.
ಮತಯಂತ್ರ ಸರಿಯಿಲ್ಲವೆಂದು ಮತಗಟ್ಟೆಯ ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಬಳಿ ದೂರು ನೀಡಿದರೆ, ದೂರು ದಾರರು ಫಾರಂ 49ma ಯನ್ನು ಸಹಿ ಮಾಡಿ ನೀಡಬೇಕಾಗುತ್ತದೆ. ಅದರನ್ವಯ ಮತ್ತೊಂದು ಮತದಾನಕ್ಕೆ ಅವಕಾಶ ನೀಡುತ್ತಾರಾದರೂ ಆ ಮತವನ್ನು ಬಹಿರಂಗವಾಗಿ ಚಲಾಯಿಸಬೇಕಾಗುತ್ತದೆ. ಹಾಗೊಂದು ವೇಳೆ ಮತವು ದೂರುದಾರ ಮತ ಹಾಕಿದ ಪಕ್ಷಕ್ಕೇ ಹೋದರೆ ಕೂಡಲೇ ಆತನನ್ನು ಪೊಲೀಸರು ಬಂಧಿಸುತ್ತಾರೆ.

ಮತಯಂತ್ರದ ಬಗ್ಗೆ ಸುಳ್ಳು ಹೇಳಿದರೆ ಶಿಕ್ಷೆಯೇನು?
ಮತಯಂತ್ರದ ಬಗ್ಗೆ ಸುಳ್ಳು ಆಪಾದನೆ ಮಾಡಿ, ಮತದಾನಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ಆತನಿಗೆ ಆರು ತಿಂಗಳು ಜೈಲು ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಮತಯಂತ್ರದಲ್ಲಿ ದೋಷ ವಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಜವಾಗಿಯೂ ಮತದಾರ ಹಾಕಿದ ಮತ ಬೇರೆ ಪಕ್ಷಕ್ಕೆ ಹೋಗಿರುವುದು ವಿವಿ-ಪ್ಯಾಟ್ನಲ್ಲಿ ಕಾಣಿಸಿದರೆ. ಕೂಡಲೇ ಪ್ರಿಸೈಡಿಂಗ್ ಆಫೀಸರ್ಗೆ ದೂರು ನೀಡಬೇಕಾಗುತ್ತದೆ. ಅವರು ನೀಡುವ ಫಾರಂ 41MA ಗೆ ಸಹಿ ಮಾಡಿ, ಪ್ರಿಸೈಡಿಂಗ್ ಅಧಿಕಾರಿ, ಬೂತ್ ಏಜೆಂಟ್ಗಳು ಪೊಲೀಸರ ಮುಂದೆಯೇ ತನಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸಬೇಕಾಗುತ್ತದೆ. ಹೀಗೆ ಮತಚಲಾಯಿಸುವ ಮುನ್ನಾ ದೂರುದಾರನು ತಾನು ಯಾವ ಅಭ್ಯರ್ಥಿಗೆ ಮತಚಲಾಯಿಸುತ್ತಿದ್ದೇನೆ ಎಂದು ಬರೆದುಕೊಡಬೇಕಾಗುತ್ತದೆ.

ಮತಯಂತ್ರ ತಪ್ಪಾದರೆ ಮತದಾನ ಸ್ಥಗಿತ
ಪ್ರಿಸೈಡಿಂಗ್ ಆಫೀಸರ್ ಎದುರು ಚಲಾಯಿಸಿದ ಮತವು ತಪ್ಪು ಅಭ್ಯರ್ಥಿಗೆ ಹೋದರೆ ಕೂಡಲೇ ಮತದಾನವನ್ನು ನಿಲ್ಲಿಸಲಾಗುತ್ತದೆ. ಮತದಾನದ ಆರಂಭದಲ್ಲಿಯೇ ಈ ತಪ್ಪು ಕಂಡು ಬಂದರೆ ಮತಯಂತ್ರವನ್ನು ಸರಿಮಾಡಿದ ನಂತರ ಮತಚಲಾವಣೆ ನಡೆಯುತ್ತದೆ.

ಮತಯಂತ್ರ ಹಲವು ಪರೀಕ್ಷೆಗಳನ್ನು ದಾಟಿರುತ್ತದೆ
ಮತಯಂತ್ರವನ್ನು ಮತಗಟ್ಟೆ ಅಧಿಕಾರಿಗಳು ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಿರುತ್ತಾರೆ. ಮತಗಟ್ಟೆಗೆ ಯಂತ್ರಗಳು ಬರುವ ಮುನ್ನಾ ಸಹ ಹಲವು ರೀತಿಯ ಪರೀಕ್ಷೆಗಳಿಗೆ ಒಳಪಟ್ಟೇ ಬಂದಿರುತ್ತದೆ. ಹಾಗಾಗಿ ಮತಯಂತ್ರವು ತಪ್ಪಾಗುವುದು ಅಪರೂಪ. ಹಾಗೆಂದು ಮತಯಂತ್ರದಲ್ಲಿ ದೋಷ ಇರುವುದೇ ಇಲ್ಲವೆಂದು ಹೇಳುವ ಹಾಗೂ ಇಲ್ಲ, ಕೆಲವೊಮ್ಮೆ ತಾಂತ್ರಿಕ ದೋಷದಿಂದಲೂ ಹೀಗೆ ಆಗುತ್ತದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications