ಮತಯಂತ್ರ ಸರಿಯಿಲ್ಲವೆಂದು ಸುಳ್ಳು ಹೇಳಿದರೆ ಏನು ಶಿಕ್ಷೆ?
ಬೆಂಗಳೂರು, ಏಪ್ರಿಲ್ 17: ಚುನಾವಣೆಗಳು ಬಂದಾಗೆಲ್ಲಾ ಮತಯಂತ್ರದ ಬಗೆಗಿನ ಅನುಮಾನಗಳು ಏಳುತ್ತವೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳು ಹರಿದಾಡಿ, ಮತಯಂತ್ರದ ಬಗೆಗಿನ ಅಪನಂಬಿಕೆ ಹುಟ್ಟುವಂತೆ ಮಾಡುತ್ತವೆ. ಆದರೆ ನೆನಪಿರಲಿ ಈ ವರೆಗೆ ಯಾರೂ ಮತಯಂತ್ರವನ್ನು ಹ್ಯಾಕ್ ಮಾಡಬಹುದು ಎಂಬುದನ್ನು ಸಾಬೀತು ಮಾಡಿಲ್ಲ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮತಯಂತ್ರ ಸರಿಯಿಲ್ಲವೆಂದು ಹುಯಿಲೆಬ್ಬಿಸುವವರೂ ಇರುತ್ತಾರೆ. ಆದರೆ ಹೀಗೆ ಸುಳ್ಳು ಹೇಳಿದರೆ ಭಾರಿ ಶಿಕ್ಷೆ ಕಾದಿದೆ.
ಮತಯಂತ್ರ ಸರಿಯಿಲ್ಲವೆಂದು ಮತಗಟ್ಟೆಯ ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಬಳಿ ದೂರು ನೀಡಿದರೆ, ದೂರು ದಾರರು ಫಾರಂ 49ma ಯನ್ನು ಸಹಿ ಮಾಡಿ ನೀಡಬೇಕಾಗುತ್ತದೆ. ಅದರನ್ವಯ ಮತ್ತೊಂದು ಮತದಾನಕ್ಕೆ ಅವಕಾಶ ನೀಡುತ್ತಾರಾದರೂ ಆ ಮತವನ್ನು ಬಹಿರಂಗವಾಗಿ ಚಲಾಯಿಸಬೇಕಾಗುತ್ತದೆ. ಹಾಗೊಂದು ವೇಳೆ ಮತವು ದೂರುದಾರ ಮತ ಹಾಕಿದ ಪಕ್ಷಕ್ಕೇ ಹೋದರೆ ಕೂಡಲೇ ಆತನನ್ನು ಪೊಲೀಸರು ಬಂಧಿಸುತ್ತಾರೆ.

ಮತಯಂತ್ರದ ಬಗ್ಗೆ ಸುಳ್ಳು ಹೇಳಿದರೆ ಶಿಕ್ಷೆಯೇನು?
ಮತಯಂತ್ರದ ಬಗ್ಗೆ ಸುಳ್ಳು ಆಪಾದನೆ ಮಾಡಿ, ಮತದಾನಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ಆತನಿಗೆ ಆರು ತಿಂಗಳು ಜೈಲು ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಮತಯಂತ್ರದಲ್ಲಿ ದೋಷ ವಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಜವಾಗಿಯೂ ಮತದಾರ ಹಾಕಿದ ಮತ ಬೇರೆ ಪಕ್ಷಕ್ಕೆ ಹೋಗಿರುವುದು ವಿವಿ-ಪ್ಯಾಟ್ನಲ್ಲಿ ಕಾಣಿಸಿದರೆ. ಕೂಡಲೇ ಪ್ರಿಸೈಡಿಂಗ್ ಆಫೀಸರ್ಗೆ ದೂರು ನೀಡಬೇಕಾಗುತ್ತದೆ. ಅವರು ನೀಡುವ ಫಾರಂ 41MA ಗೆ ಸಹಿ ಮಾಡಿ, ಪ್ರಿಸೈಡಿಂಗ್ ಅಧಿಕಾರಿ, ಬೂತ್ ಏಜೆಂಟ್ಗಳು ಪೊಲೀಸರ ಮುಂದೆಯೇ ತನಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸಬೇಕಾಗುತ್ತದೆ. ಹೀಗೆ ಮತಚಲಾಯಿಸುವ ಮುನ್ನಾ ದೂರುದಾರನು ತಾನು ಯಾವ ಅಭ್ಯರ್ಥಿಗೆ ಮತಚಲಾಯಿಸುತ್ತಿದ್ದೇನೆ ಎಂದು ಬರೆದುಕೊಡಬೇಕಾಗುತ್ತದೆ.

ಮತಯಂತ್ರ ತಪ್ಪಾದರೆ ಮತದಾನ ಸ್ಥಗಿತ
ಪ್ರಿಸೈಡಿಂಗ್ ಆಫೀಸರ್ ಎದುರು ಚಲಾಯಿಸಿದ ಮತವು ತಪ್ಪು ಅಭ್ಯರ್ಥಿಗೆ ಹೋದರೆ ಕೂಡಲೇ ಮತದಾನವನ್ನು ನಿಲ್ಲಿಸಲಾಗುತ್ತದೆ. ಮತದಾನದ ಆರಂಭದಲ್ಲಿಯೇ ಈ ತಪ್ಪು ಕಂಡು ಬಂದರೆ ಮತಯಂತ್ರವನ್ನು ಸರಿಮಾಡಿದ ನಂತರ ಮತಚಲಾವಣೆ ನಡೆಯುತ್ತದೆ.

ಮತಯಂತ್ರ ಹಲವು ಪರೀಕ್ಷೆಗಳನ್ನು ದಾಟಿರುತ್ತದೆ
ಮತಯಂತ್ರವನ್ನು ಮತಗಟ್ಟೆ ಅಧಿಕಾರಿಗಳು ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಿರುತ್ತಾರೆ. ಮತಗಟ್ಟೆಗೆ ಯಂತ್ರಗಳು ಬರುವ ಮುನ್ನಾ ಸಹ ಹಲವು ರೀತಿಯ ಪರೀಕ್ಷೆಗಳಿಗೆ ಒಳಪಟ್ಟೇ ಬಂದಿರುತ್ತದೆ. ಹಾಗಾಗಿ ಮತಯಂತ್ರವು ತಪ್ಪಾಗುವುದು ಅಪರೂಪ. ಹಾಗೆಂದು ಮತಯಂತ್ರದಲ್ಲಿ ದೋಷ ಇರುವುದೇ ಇಲ್ಲವೆಂದು ಹೇಳುವ ಹಾಗೂ ಇಲ್ಲ, ಕೆಲವೊಮ್ಮೆ ತಾಂತ್ರಿಕ ದೋಷದಿಂದಲೂ ಹೀಗೆ ಆಗುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications