ಕೊರೊನಾ ಹರಡದಿರಲು ಮಾಸ್ಕ್ ಪರಿಹಾರವೇ? ನಾವೆಂತಹ ಮೂರ್ಖರು ಎಂದ ಖ್ಯಾತ ವೈದ್ಯ ಬಿ.ಎಂ.ಹೆಗ್ಡೆ
ಕೊರೊನಾ ಜೊತೆಗೆ ಬದುಕಲು ಕಲಿಯಬೇಕು ಎಂದು ಖುದ್ದು ಪ್ರಧಾನಿ ಮೋದಿ ಹೇಳಿದ ನಂತರ, ಲಾಕ್ ಡೌನ್ ಮುಂತಾದ ಏನು ನಿರ್ಬಂಧವನ್ನು ಕೇಂದ್ರ ಸರಕಾರ ಹೇರಿತ್ತೋ, ಅದನ್ನು ಹಂತಹಂತವಾಗಿ ಸಡಿಲಿಸುವ ಮುನ್ಸೂಚನೆಯನ್ನು ಸರಕಾರ ನೀಡಿತ್ತು.
ಬೇಕಾಗಿರದ ವೇಳೆ ಲಾಕ್ ಡೌನ್, ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ವೇಳೆ, ಆರ್ಥಿಕತೆಯ ಹೆಸರು ಹೇಳಿ, ಕಠಿಣ ನಿಯಮಗಳನ್ನು ಸಡಿಲಿಸುತ್ತಾ ಸಾಗಿದ ಮೋದಿ ಸರಕಾರದ ಕ್ರಮ ಎಷ್ಟು ಸರಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಅದೇನೇ ಇರಲಿ, ಕೊರೊನಾ ವೈರಾಣುಗೆ ಇನ್ನೂ ಲಸಿಕೆ ರೆಡಿಯಾಗದೇ ಇರುವ ಹಿನ್ನಲೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ, ಈ ಸೋಂಕಿನಿಂದ ದೂರವಿರಬಹುದು ಎನ್ನುವ ಸರಕಾರದ ಮಾರ್ಗಸೂಚಿಯ ಬಗ್ಗೆ ಕೆಲವು ವೈದ್ಯರು ಅಪಸ್ವರ ಎತ್ತಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸಬೇಕು ಎನ್ನುವುದು ಈ ಗೈಡ್ಲೈನ್ಸ್ ನಲ್ಲಿ ಪ್ರಮುಖ ಅಂಶಗಳು. ಅದರಲ್ಲಿ, ಮಾಸ್ಕ್ ಧರಿಸಿದರೆ, ಕೊರೊನಾ ಹಾವಳಿಯಿಂದ ದೂರವಿರಬಹುದೇ? ಏನೆನ್ನುತ್ತಾರೆ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ? ಮುಂದೆ ಓದಿ..

ನಾವೆಂತಃ ಮೂರ್ಖರು ಎನ್ನುತ್ತಾರೆ ಖ್ಯಾತ ವೈದ್ಯ ಹೆಗ್ಡೆ
ಡಬ್ಯು.ಜೆ.ವಿಲಿಯಂ ಫರ್ಕ್ ಎನ್ನುವವರ ಲೇಖನವನ್ನು ಒಮ್ಮೆ ಸರಕಾರದ ಸಂಬಂಧಪಟ್ಟ ಇಲಾಖೆಯವರು ಓದಿಕೊಳ್ಳಬೇಕು. ಬ್ರಿಟಿಷ್ ಜರ್ನಲ್ ಅಶೋಶಿಯೇಶನ್ ಈ ಲೇಖವನ್ನು ಪ್ರಕಟಿಸಿದೆ. 1991ರಲ್ಲಿ ಕೆನಡಾದ ವ್ಯಾಂಕೋವರ್ ನಲ್ಲಿ ಮೊದಲು ಪ್ರಕಟವಾದ ಲೇಖನವಿದು. ಭೌತಶಾಸ್ತದ ಬಗ್ಗೆ ಬರೆದಿರುವ ಐದಾರು ಪೇಜುಗಳ ಲೇಖನವಿದು. ಲೇಖನದ ಅಂತ್ಯದಲ್ಲಿ ನಾವೆಂತಹ ಮೂರ್ಖರು ಎನ್ನುವುದು ಗೊತ್ತಾಗುತ್ತದೆ.

h1n1 ಅಥವಾ ಕೊರೊನಾ ವೈರಸ್ ಅನ್ನು ಯಾರದಾರೂ ನೋಡಿದ್ದಾರಾ
h1n1 ಅಥವಾ ಕೊರೊನಾ ವೈರಸ್ ಅನ್ನು ಯಾರದಾರೂ ನೋಡಿದ್ದಾರಾ, ವೈದ್ಯಲೋಕದಲ್ಲಿ ಯಾರಾದರೂ ಕರಾರುವಕ್ಕಾಗಿ ಇದಕ್ಕೆ ಉತ್ತರಿಸುತ್ತಾರಾ, ಖಂಡಿತಾ ಇಲ್ಲ. ಇವತ್ತು, ಕೊರೊನಾ ಬಗ್ಗೆ ಇಷ್ಟು ಸಾರ್ವಜನಿಕರು ಭಯ ಪಡಲು ಕಾರಣ, ಇದರ ಹಿಂದೆ, ಮುಂದೆ ಸೃಷ್ಟಿಸಲಾಗಿರುವ ಭಯದ ವಾತಾವರಣ. ಮಾರಾಟವಾಗದೇ ಇರುವ ಲಸಿಕೆಯನ್ನು ಸೇಲ್ ಮಾಡಲು, ಸೃಷ್ಟಿಸಲಾಗಿರುವ ವೈರಾಣುಗಳಿವು.

ಮಾಸ್ಕ್ ಧರಿಸು ಎನ್ನುತ್ತಿದ್ದಾವೆ
2009ರಲ್ಲಿ ಮಾಸ್ಕ್ ಧರಿಸುವುದು ಹಾನಿಕರ ಎಂದು ಹೇಳುವ ವರ್ಗವೇ, ಈಗ ಮಾಸ್ಕ್ ಧರಿಸು ಎನ್ನುತ್ತಿದ್ದಾವೆ. ಇದರಿಂದ, ಬೇರೆಯವರನ್ನು ರಕ್ಷಿಸುವುದು ಆಮೇಲೆ, ಮೊದಲು ನಿಮ್ಮನ್ನು ನೀವು, ರಕ್ಷಿಸಿಕೊಳ್ಳಲು ಇದು ಸರಿಯಾದ ವಿಧಾನವೇ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಲಬೇಕಿದೆ. ನಿಮ್ಮ ಉಸಿರನ್ನೇ ನೀವು ಮತ್ತೆಮತ್ತೆ ಸೇವಿಸಿದರೆ, ಇದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲವೇ ಎನ್ನುವುದನ್ನು ನಿಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಅನ್ನು ಒಮ್ಮೆ ಕೇಳಿಕೊಳ್ಳಿ.
Recommended Video

ನಮಸ್ಕಾರ ಎನ್ನುವ ಸಂಪ್ರದಾಯ
ನಮಸ್ಕಾರ ಎಂದು ಇನ್ನೊಬ್ಬರನ್ನು ಭೇಟಿಯಾಗುವಾಗ ಎದುರಾಗುವ ಸಂಪ್ರದಾಯ ನಮ್ಮಲ್ಲಿದೆ. ಇದರಿಂದ, ಇನ್ನೊಬ್ಬರ ಕೈಯನ್ನು ಮುಟ್ಟದೇ ಇರಲು ನಮಗೆ ಅವಕಾಶವಿರುತ್ತದೆ. ಮಾಸ್ಕ್ ಧರಿಸಿದರೆ, ಕೊರೊನಾದಿಂದ ದೂರವಾಗಬಹುದು ಎನ್ನುವುದಕ್ಕೆ ಯಾವುದೇ ರುಜುವಾತಾದ ಪರೀಕ್ಷೆಗಳು ನಮ್ಮಲ್ಲಿ ಇದುವರೆಗೆ ಮಾಡಿಲ್ಲ ಎಂದು ಹೇಳುವ ಮೂಲಕ, ವೈರಾಣು ಎನ್ನುವ ವಿಚಾರದಲ್ಲಿ ಜನರನ್ನು ಭಯ ಪಡಿಸುವ ಕೆಲಸ ನಡೆಯುತ್ತಿದೆ ಎನ್ನುವುದು ಡಾ. ಹೆಗ್ಡೆಯವರ ಅಭಿಪ್ರಾಯ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications