Get Updates
Get notified of breaking news, exclusive insights, and must-see stories!

ಕರ್ನಾಟಕದ 2,000 ಹಳ್ಳಿಗಳಲ್ಲಿ ‘ಬಜರಂಗಿ’ ಪೋಸ್ಟರ್ ಅಭಿಯಾನಕ್ಕೆ ಮುಂದಾದ ವಿಶ್ವ ಹಿಂದೂ ಪರಿಷತ್‌

ಬೆಂಗಳೂರು, ಮೇ 04: ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್‌ನ ಪ್ರಣಾಳಿಕೆ ಪ್ರಸ್ತಾವನೆಯು ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಲವೆಡೆ 'ನಾನು ಬಜರಂಗಿ' ಎಂಬ ಪೋಸ್ಟರ್‌ಗಳು ಹರಿದಾಡುತ್ತಿದೆ. ಇದೇ ಪೋಸ್ಟರ್‌ ಅಭಿಯಾನವನ್ನು ಕೈಗೊಳ್ಳಲು ಬಜರಂಗದಳದ ಮಾತೃ ಸಂಸ್ಥೆಯಾಗಿರುವ ವಿಶ್ವ ಹಿಂದೂ ಪರಿಷತ್‌ ಮುಂದಾಗಿದೆ.

ಬಿಜೆಪಿ ರಾಷ್ಟ್ರೀಯ ಯುವ ಘಟಕದ ಮುಖ್ಯಸ್ಥ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬುಧವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಾನು ಬಜರಂಗಿ ಎಂದು ಹೇಳುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. 'ನಾನು ಬಜರಂಗಿ. ನಾನು ಕನ್ನಡಿಗ, ಇದು ಹನುಮಂತನ ನಾಡು. ನನ್ನನ್ನು ನಿಷೇಧಿಸಲು ಕಾಂಗ್ರೆಸ್‌ಗೆ ಧೈರ್ಯವಿದೆಯೇ?' ಎಂದು ಪ್ರಶ್ನಿಸಿದ್ದಾರೆ.

Vishwa Hindu Parishad To Distribute Bajrang Dal Posters In 2000 Villages of Karnataka

'ನಾನು ಬಜರಂಗಿ', 'ಈ ನಿವಾಸವು ಬಜರಂಗದಳದ ಕಾರ್ಯಕರ್ತರದ್ದು' ಮತ್ತು ' ಕಾಂಗ್ರೆಸ್ ನಾಯಕರಿಗೆ ಮತ ಕೇಳಲು ಅವಕಾಶವಿಲ್ಲ' ಎಂದು ಹೇಳುವ ಪೋಸ್ಟರ್‌ಗಳು ಕರಾವಳಿ ಮತ್ತು ಚಿಕ್ಕಮಗಳೂರಿನ ಹಲವಾರು ಮನೆಗಳಲ್ಲಿ ಹುಟ್ಟಿಕೊಂಡಿವೆ. ಅಲ್ಲಿ ಸಂಘಟನೆಯು ಪ್ರಬಲವಾಗಿದೆ.

ಬಜರಂಗದಳದ ಮಾತೃ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಗುರುವಾರ ರಾಜ್ಯದ 2,000 ಹಳ್ಳಿಗಳಲ್ಲಿ ರಾಜ್ಯಾದ್ಯಂತ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ.

ಈ ವಿಚಾರವಾಗಿ ಮಾತನಾಡಿರುವ ವಿಎಚ್‌ಪಿ ರಾಜ್ಯ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್, 'ಕಾಂಗ್ರೆಸ್ ಬಜರಂಗದಳದ ಅಸ್ತಿತ್ವವನ್ನು ಪ್ರಶ್ನಿಸಿದೆ. ಹಿಂದೂ ಸಮುದಾಯವನ್ನು ವಿರೋಧಿಸಿದೆ. ನಾವು ಮನೆ ಮನೆಗೆ ತೆರಳಿ ಹಿಂದೂಗಳು ಕಾಂಗ್ರೆಸ್ ವಿರುದ್ಧ ಒಂದಾಗಬೇಕು ಮತ್ತು ಅವರಿಗೆ ಮತ ಹಾಕಬೇಡಿ ಎಂದು ಕೇಳಿಕೊಳ್ಳುತ್ತೇವೆ' ಎಂಬುದಾಗಿ ಹೇಳಿದ್ದಾರೆ.

Vishwa Hindu Parishad To Distribute Bajrang Dal Posters In 2000 Villages of Karnataka

ಗುರುವಾರ ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾವನ್ನು ಓದಲು ಸ್ಥಳೀಯ ದೇವಾಲಯಗಳು ಮತ್ತು ಭಜನಾ ಮಂದಿರಗಳಿಗೆ ಹೋಗುವಂತೆ ತಮ್ಮ ಅಂಗಸಂಸ್ಥೆ ಕಾರ್ಯಕರ್ತರನ್ನು ಕೇಳಿಕೊಂಡಿದ್ದೇವೆ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಬಜರಂಗದಳ ಕೂಡ ಗುರುವಾರ ಹನುಮಾನ್ ಚಾಲೀಸಾ ವಾಚನ ನಡೆಸಲು ನಿರ್ಧರಿಸಿದೆ. 'ಧರ್ಮ' ಅಪಾಯದಲ್ಲಿದೆ ಮತ್ತು 'ಒಟ್ಟಿಗೆ ನಿಲ್ಲುವ ಏಕೈಕ ಮಾರ್ಗವಾಗಿದೆ' ಎಂದು ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಣಾಳಿಕೆಯ ಭರವಸೆ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚುರುಕು ನೀಡಿದೆ. 'ಕಾಂಗ್ರೆಸ್‌ಗೆ ಇದು ಕೊನೆಯ ಚುನಾವಣೆ. ಹನುಮಂತನ ಭಕ್ತರು ಬಂಡಾಯವೆದ್ದರೆ ದೇಶ ಮತ್ತು ಬೇರುಗಳಿಂದ ಕಾಂಗ್ರೆಸ್ ತೊಲಗಲಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಭಜರಂಗದಳ ಆರ್‌ಎಸ್‌ಎಸ್‌ನ ಭಾಗವಾಗಿದ್ದು, ಯಾವತ್ತೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮುಸ್ಲಿಮರನ್ನು ಓಲೈಸುವ ಉದ್ದೇಶ ಹೊಂದಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಬಜರಂಗದಳವನ್ನು ನಿಷೇಧಿಸುವ ಕನಸು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 'ಅವರು ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ, ಅವರು ಕನಸು ಕಾಣಲು ಸ್ವತಂತ್ರರು' ಎಂದು ಬಿಎಸ್‌ವೈ ಹೇಳಿದರು.

ಆದಾಗ್ಯೂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರೆಸಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರತಿಯೊಂದು ಸಂಘಟನೆಯ ವಿರುದ್ಧ ಪಕ್ಷವು ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+