Get Updates
Get notified of breaking news, exclusive insights, and must-see stories!

Vote Chori: ಮತ ಚೋರಿ ಹೆಸರಲ್ಲಿ ಕಾಂಗ್ರೆಸ್ ಸಹಿ ಚೋರಿ ನಡೆಸಿದೆ: ವಿಜಯೇಂದ್ರ

ರಾಹುಲ್‌ ಗಾಂಧಿ ಕರೆ ನೀಡಿರುವ ವೋಟ್‌ ಚೋರಿ ಅಭಿಯಾನದಡಿ ರಾಜ್ಯದಲ್ಲಿಯೂ ಸಹಿ ಸಂಗ್ರಹವನ್ನು ಕಾಂಗ್ರೆಸ್‌ ನಡೆಸಿತ್ತು. ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತಚೋರಿ ಹೆಸರಲ್ಲಿ ಕಾಂಗ್ರೆಸ್ ಸಹಿ ಚೋರಿ ನಡೆಸಿದೆ ಎಂದಿದ್ದಾರೆ. 'ಕುಣಿಯಲಾರದವನಿಗೆ ನೆಲ ಡೊಂಕು' ಎಂಬಂತೆ ಚುನಾವಣೆಗಳನ್ನು ಜಯಿಸಲಾಗದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ಮತಕಳವು ಹೆಸರಿನಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸಿ, ವ್ಯರ್ಥ ಪ್ರಲಾಪ ಮಾಡುತ್ತಿದ್ದಾರೆ ಎಂದಿದ್ದಾರೆ.

ರಾಹುಲ್ ಗಾಂಧಿಯವರನ್ನು ತೃಪ್ತಿಗೊಳಿಸಲು ಬಣ ಬಡಿದಾಟದಲ್ಲಿ ಮುಳುಗಿ ಹೋಗಿರುವ ಕರ್ನಾಟಕದ ಕಾಂಗ್ರೆಸ್‌ ಪೈಪೋಟಿಗೆ ಬಿದ್ದು ಮತ ಕಳವಿನ ಆರೋಪವನ್ನು ಬೆಂಬಲಿಸಿ 1 ಕೋಟಿಗೂ ಹೆಚ್ಚು ಸಾರ್ವಜನಿಕರ ಸಹಿ ಸಂಗ್ರಹಿಸಿದ್ದೇವೆಂದು ಖೊಟ್ಟಿ ದಾಖಲೆಗಳ ಸಂಗ್ರಹದ ಪ್ರಹಸನ ನಡೆಸಿದ್ದಾರೆ. ಸಾರ್ವಜನಿಕರ ಹೆಸರಿನಲ್ಲಿ ನಕಲಿ ಸಹಿಗಳನ್ನು ಸೃಷ್ಟಿಸಿಕೊಂಡು ದೆಹಲಿಗೆ ಹೊತ್ತೊಯ್ಯಲು ಸಿದ್ದರಾಗಿದ್ದಾರೆ. ಈ ಸಹಿ ಸಂಗ್ರಹವನ್ನು ಯಾರಿಗೆ ತಲುಪಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಚುನಾವಣಾ ಆಯೋಗಕ್ಕೆ ಸಲ್ಲಿಸಿದರೆ, ಈ ಸಹಿ ಸಂಗ್ರಹದ ಅಸಲಿತನ ಪರೀಕ್ಷಿಸಿಕೊಳ್ಳಲಿ ಎಂದು ಮನವಿ ಮಾಡುವೆ ಎಂದು ಹೇಳಿದ್ದಾರೆ.

Vijayendra Slams Congress Vote Chori Turns Into Signature Chori In Karnataka

ಸಹಿ ಸಂಗ್ರಹದಲ್ಲಿ ದೇಶದಲ್ಲಿ ನಾವೇ ಮೊದಲು ಎಂದು ಕಾಂಗ್ರೆಸ್ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್‌ ಹೇಳಿಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ಗೆ ಅಳಿದುಳಿದಿರುವುದು 'ಒಂದು ಮತ್ತೊಂದು' ಅದರಲ್ಲಿ ಕರ್ನಾಟಕ ರಾಜ್ಯವೂ ಒಂದು. ವಸ್ತುಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಲ್ಲದೇ ಇನ್ನೆಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ನೀವು ಕೂಗು ಹಾಕಲು ಸಾಧ್ಯ? ರಾಜ್ಯದಲ್ಲಿ 138 ಸ್ಥಾನದಲ್ಲಿ ಗೆಲುವು ಸಾಧಿಸಿದ್ದೀರಿ ಎಂದಿದ್ದಾರೆ.

9 ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದೀರಿ, 1 ಕೋಟಿ ಸಹಿ ಸಂಗ್ರಹಿಸಿರುವುದು ನಿಜವೇ ಆದರೆ, ನೀವು ಮತಚೋರಿ ನಡೆಸಿಯೇ ಗೆಲುವು ದಾಖಲಿಸಿರುವುದು ಎಂಬುದನ್ನು ನೀವೇ ಪ್ರಮಾಣಿಸಿಕೊಂಡಂತಾಗಲಿಲ್ಲವೇ? ಎಂದು ಕೇಳಿದ್ದಾರೆ. ನೀವು ಹೊತ್ತೊಯ್ಯುತ್ತಿರುವ ಸಹಿ ಸಂಗ್ರಹದ ಗಂಟು ಮುಖ್ಯಮಂತ್ರಿ ಕುರ್ಚಿಯ ತೂಕ ಅಳೆಯುವ ಉದ್ದೇಶವನ್ನು ಸಂಕೇತಿಸುತ್ತಿದೆಯೇ ಹೊರತು, ರಾಹುಲ್ ಗಾಂಧಿಯವರ ಮತಕಳವು ಆರೋಪದ ತೂಕ ಹೆಚ್ಚಿಸುವದಕ್ಕಂತೂ ಬಳಕೆಯಾಗುವುದಿಲ್ಲ ಎಂಬುದು ನೈಜ ವಾಸ್ತವ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹವಾಗಿದೆ ಎಂದು ಡಿಕೆ.ಶಿವಕುಮಾರ್‌ ಹೇಳಿದ್ದರು. ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ ಎಂದಿದ್ದರು.

ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು ರಾಜ್ಯದ ಜನರು ಗಮನಿಸಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ 6,018 ಮತಗಳನ್ನು ಅಳಿಸಲು ಪ್ರಯತ್ನ ನಡೆದಿತ್ತು. ಇದೇ ರೀತಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವಾರು ಇತರ ರಾಜ್ಯಗಳಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+