ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ
Vande Bharat Express: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದಿದೆ. ಇದೀಗ ಈ ಸ್ಪೀಡರ್ ರೈಲುಗಳಿಗೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಗಳನ್ನು ಮೈಸೂರಿನಲ್ಲಿ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ 'ಆಧುನಿಕ ವಂದೇ ಭಾರತ್ ನಿರ್ವಹಣಾ ಕೇಂದ್ರ' ಸ್ಥಾಪನೆಗೆ ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸದ್ಯ ಮೈಸೂರಿನಲ್ಲಿ ಹೊಸ ಸರಕು ಟರ್ಮಿನಲ್ ವ್ಯಾಗನ್ ಡಿಪೋ ಇದೆ. ಇದೇ ಜಾಗದಲ್ಲಿ ವಂದೇ ಭಾರತ್ ಆಧುನಿಕ ಡಿಪೋ ನಿರ್ಮಿಸಲು ಚಿಂತನೆ ಇದೆ. ಆಗ ವ್ಯಾಗನ್ ಡಿಪೋವನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲು ಪ್ರಸ್ತಾವನೆ ಇಡಲಾಗಿದೆ. ಇದೆಲ್ಲವು ಅಂದುಕೊಂಡಂತಾದರೆ ವಂದೇ ಭಾರತ್ ರೈಲುಗಳ ನಿರ್ವಹಣೆಯಲ್ಲಿ ಕರ್ನಾಟಕದ ಮೈಸೂರು ಪ್ರಮುಖ ಪಾತ್ರ ವಹಿಸಲಿದೆ.

ವಂದೇ ಭಾರತ್ ಡಿಪೋದ ಕೆಲಸ
ಸ್ವಯಂ ಚಾಲಿತ ರೈಲುಸೆಟ್ಗಳ ತ್ವರಿತ ಸೇವೆಗಾಗಿ ವಿನ್ಯಾಸಗೊಳಿಸಲಾದ ಪಿಟ್ ಲೈನ್ ಕೇಂದ್ರಗಳನ್ನು ಡಿಪೋ ಒಳಗೊಂಡಿರುತ್ತದೆ. ರೈಲುಗಳ ಕ್ಲೀನಿಂಗ್, ವಿಶೇಷ ಅಂಡರ್ಸ್ಲಂಗ್ ಉಪಕರಣಗಳ ನಿರ್ವಹಣೆ, ಹೈಟೆಕ್ ಸಾಧನಗಳ ಜೋಡಣೆ, ಇನ್ನಿತರ ನಿರ್ವಹಣೆ, ಮುಖ್ಯವಾಗಿ ಹೈ-ಸ್ಪೀಡ್ ರೈಲು ನಿರ್ವಹಣೆಗಾಗಿ ಮೀಸಲಾದ ತರಬೇತಿ ಕೇಂದ್ರಗಳನ್ನು ಈ ಡಿಪೋ ಒಳಗೊಂಡಿರುತ್ತದೆ.
ಎಂಟು ವರ್ಷಗಳ ಹಿಂದೆ (2019) ರೈಲ್ವೆ ಇಲಾಖೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಪರಿಚಯಿಸಿತು. ಅಲ್ಲಿಂದ ಈವರೆಗೆ ಸುಮಾರು 160 ರೈಲುಗಳು ದೇಶವ್ಯಾಪಿ ಸಂಚಾರ ಸೇವೆ ನೀಡುತ್ತಿವೆ. ದೇಶದ ಅಪಾರ ಪ್ರಯಾಣಿಕರ ಅಚ್ಚು ಮೆಚ್ಚಿನ ರೈಲು ಇದಾಗಿದೆ. ಇದರ ನಿರ್ವಹಣೆಗೆ 400 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಸ್ಥಾಪನೆಗೆ ಮುಂದಾಗಿದೆ. ರೈಲುಗಳ ದುರಸ್ತಿಯು ಉದ್ದೇಶಿತ ಮೈಸೂರು ಡಿಪೋದಲ್ಲಿ ಮಾಡಲಾಗುವುದು. ಈ ಮೂಲಕ ಭವಿಷ್ಯದಲ್ಲಿ ಮೈಸೂರು ವಂದೇ ಭಾರತ್ ರೈಲುಗಳ ನಿರ್ವಹಣಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಅವರು ವಿವರಿಸಿದರು.
ಶೀಘ್ರವೇ ಸರ್ವೇ, ನಂತರ ಪ್ರಸ್ತಾವನೆ ಸಲ್ಲಿಕೆ
ಸದರಿ ಯೋಜನೆಯು ಪ್ರಸ್ತವಾನೆಯ ಹಂತದಲ್ಲಿದೆ. ಕೇಂದ್ರ ಸ್ಥಾಪನೆಗೂ ಮೊದಲು ಕಟ್ಟಡ ಸಮೀಕ್ಷೆ ಮತ್ತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಬೇಕಿದೆ. ಈ ಎಲ್ಲ ಆರಂಭಿಕೆ ಕೆಲಸಗಳು ಮುಗಿಯುತ್ತಿದ್ದಂತೆ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಮಂಡಳಿ ಹಾಗೂ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದರು. ಅಲ್ಲಿಂದ ಸಲಹೆ ಸೂಚನೆಗಳು ಬಂದಲ್ಲಿ ಒಂದಷ್ಟು ಬದಲಾವಣೆ ಆಗಬಹುದು. ಇಲ್ಲವೇ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಡಿಪೋ ಕಾಮಗಾರಿ ಕೆಲಸಗಳು ಆರಂಭವಾಗಲಿದೆ.
ಟರ್ಮಿನಲ್ ವ್ಯಾಗನ್ ಡಿಪೋ ಸ್ಥಳಾಂತರ ಏಕೆ?
ಸರಕು ಟರ್ಮಿನಲ್ ವ್ಯಾಗನ್ ಡಿಪೋ ಸದ್ಯ ಮೈಸೂರಿನಲ್ಲಿದೆ. ಅಲ್ಲಿಯೇ ವಂದೇ ಭಾರತ್ ರೈಲುಗಳ ಆಧುನಿಕ ಡಿಪೋ ತೆರೆಯಲು ನಿರ್ಧರಿಸಲಾಗಿದೆ. ವ್ಯಾಪಕ ಜಾಗವನ್ನು ವಿಸ್ತರಿಸಿಕೊಳ್ಳಲಿದೆ. ಹೀಗಾಗಿ ಅಲ್ಲಿರುವ ವ್ಯಾಗನ್ ಡಿಪೋವನ್ನು ಮಂಡ್ಯ ಜಿಲ್ಲೆಯ ಯೆಲಿಯೂರಿಗೆ ಸ್ಥಳಾಂತರಕ್ಕೆ ಪ್ರಸ್ತಾವನೆ ಇಡಲಾಗಿದೆ. ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಮಿತ್ತಲ್ ಹೇಳಿದರು.
-
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಏ.5ರಂದು ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತ, ಕಾರಣವೇನು? -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ













Click it and Unblock the Notifications