ಇಎಸ್ಐ ಆಸ್ಪತ್ರೆಯಲ್ಲಿ ಎರಡು ಶವ ಕೊಳೆತ ಪ್ರಕರಣ: ಉನ್ನತಮಟ್ಟದ ತನಿಖೆಗೆ ಅಗ್ರಹ
ಬೆಂಗಳೂರು, ನ. 29: ವಿಮಾ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುವ ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಹದಿನೈದು ತಿಂಗಳ ಹಿಂದೆ ಕೋವಿಡ್ ನಿಂದ ಮೃತಪಟ್ಟಿದ್ದ ಇಬ್ಬರು ಮೃತದೇಹಗಳನ್ನು ಹಸ್ತಾಂತರಿಸದೇ ಆಸ್ಪತ್ರೆಯಲ್ಲಿ ಕೊಳೆಯುವಂತೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಅಮಾನವೀಯ
ಘಟನೆ:
ಕೆಲ
ದಿನಗಳ
ಹಿಂದಷ್ಟೇ
ಇಎಸ್ಐ
ಆಸ್ಪತ್ರೆಯಲ್ಲಿ
ಕೆಲಸ
ಮಾಡುವ
ಸಿಬ್ಬಂದಿಯ
ವಯೋಮಿತಿ
ಕಡಿತಗೊಳಿಸಿ
ನೂರಾರು
ದಾದಿಯರನ್ನು
ಬೀದಿ
ಪಾಲು
ಮಾಡಿತ್ತು.
ದಾದಿಯರು
ಆಸ್ಪತ್ರೆ
ಮುಂದೆಯೇ
ಉಪವಾಸ
ಕುಳಿತು
ಪ್ರತಿಭಟನೆ
ನಡೆಸಿದ್ದರು.
ಇದೀಗ
ಇಡೀ
ನಾಗರಿಕ
ಸಮಾಜವೇ
ತಲೆತಗ್ಗಿಸುವಂತಹ
ಘಟನೆ
ರಾಜಾಜಿನಗರದಲ್ಲಿರುವ
ಇಎಸ್ಐ
ಆಸ್ಪತ್ರೆಯಲ್ಲಿ
ಬೆಳಕಿಗೆ
ಬಂದಿದೆ.
ಚಾಮರಾಜಪೇಟೆಯ
ಮಹಿಳೆ
ಸೇರಿ
ಇಬ್ಬರ
ಮೃತ
ದೇಹ
ಶವಗಾರದಲ್ಲಿ
ಹದಿನೈದು
ತಿಂಗಳು
ಕೊಳೆತರೂ
ಆಸ್ಪತ್ರೆ
ಸಿಬ್ಬಂದಿ
ನೋಡಿಲ್ಲ.
ಇದು
ಆಸ್ಪತ್ರೆಯ
ಅಸಲಿ
ಚಿತ್ರಣವನ್ನು
ಬಯಲು
ಮಾಡಿದೆ.
ಕರ್ನಾಟಕದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆದರೆ ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.#karnataka #ElectionCommission #LocalBodyElections #Elections #ಕರ್ನಾ…
ಇಎಸ್ಐ ಆಸ್ಪತ್ರೆ ಶವ ಪ್ರಕರಣ: ಉನ್ನತಮಟ್ಟದ ತನಿಖೆಗೆ ಅಗ್ರಹ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2020 ಜುಲೈನಲ್ಲಿ ಚಾಮರಾಜಪೇಟೆಯ ನಿವಾಸಿ ದುರ್ಗಾ ಮತ್ತು ಕೆಪಿ ಅಗ್ರಹಾರದ ನಿವಾಸಿ ಮುನಿರಾಜು ಕಾರ್ಮಿಕರ ವಿಮಾ ಆಸ್ಪತ್ರೆ ರಾಜಾಜಿನಗರದ ಇಎಸ್ಐಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಬ್ಬರೂ ಕಳೆದ 2020 ರ ಜುಲೈನಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರ ಶವಗಳನ್ನು ಶವಗಾರದ ಶೈತ್ಯಗಾರಕ್ಕೆ ಸ್ಥಳಾಂತರಿಸಿದ್ದರು. ಇದರ ನಡುವೆ ಇಎಸ್ಐ ಆಸ್ಪತ್ರೆಯಲ್ಲಿ ನವೀಕೃತ ಹೊಸ ಶವಗಾರ ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೇ ಶವಗಾರ ಬಂದ್ ಮಾಡಿದ್ದರು. ಮುಚ್ಚಿದ್ದ ಹಳೇ ಶವಗಾರದಲ್ಲಿ ಎರಡು ಮೃತದೇಹಗಳ ಕಳೇ ಬರಹ ದೊರೆತಿದ್ದು, ವೈದ್ಯರಾಗಲೀ, ಸಿಬ್ಬಂದಿಯಾಗಲೀ ಆ ಕಡೆ ನೋಡಿಯೇ ಇಲ್ಲ.
ಎರಡು ಶವಗಳ ಮೂಳೆಗಳಷ್ಟೇ ಉಳಿದುಕೊಂಡಿವೆ
ಹದಿನೈದು ತಿಂಗಳಿನಿಂದ ಕೊಳೆತ ಎರಡು ಶವಗಳ ಮೂಳೆಗಳಷ್ಟೇ ಉಳಿದುಕೊಂಡಿವೆ. ಶವಗಾರ ಪರಿಶೀಲಿಸಲು ನವೆಂಬರ್ 17 ರಂದು ಬಾಗಿಲು ತೆಗೆದಾಗ ಎರಡು ದೇಹ ಪತ್ತೆಯಾಗಿವೆ. ಇದನ್ನು ಗಮನಿಸಿದ ವೈದ್ಯರು ಗಾಬರಿಗೊಂಡು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎರಡು ಶವ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಷ್ಟಾಗಿಯೂ ಇಬ್ಬರ ಮೃತ ದೇಹದ ವಿವರ ಪತ್ತೆಯಾಗಿರಲಿಲ್ಲ. ದಾಖಲೆ ಪರಿಶೀಲಿಸಿದಾಗ ಚಾಮರಾಜಪೇಟೆಯ ದುರ್ಗಾ, ಕೆ.ಪಿ. ಅಗ್ರಹಾರದ ನಿವಾಸಿ ಮುನಿರಾಜು ಎಂಬುದು ಗೊತ್ತಾಗಿದೆ.
ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಸಂಬಂಧಪಟ್ಟವರಿಗೆ ಆಸ್ಪತ್ರೆ ಹಸ್ತಾಂತರಿಸಬೇಕಿತ್ತು. ಇಲ್ಲವೇ ಬಿಬಿಎಂಪಿಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ನಡೆಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಆಸ್ಪತ್ರೆಯ ನಿರ್ಲಕ್ಷ್ಯತೆಯಿಂದ ಎರಡು ಮೃತ ದೇಹಗಳು ಹದಿನೈದು ತಿಂಗಳು ಶವಗಾರದಲ್ಲಿ ಕೊಳೆತಿವೆ. ಅಂತಿಮವಾಗಿ ಎರಡು ಮೃತ ದೇಹಗಳ ವಾರಸುದಾರರನ್ನು ಪೊಲೀಸರು ಪತ್ತೆ ಮಾಡಿ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ಮೃತದೇಹ ಹದಿನೈದು ತಿಂಗಳ ಕಾಲ ಆಸ್ಪತ್ರೆಯ ಶವಗಾರದಲ್ಲಿ ಕೊಳೆತಿರುವುದು ಇದೀಗ ದೇಶದಲ್ಲಿದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಮಾತ್ರವಲ್ಲ ವಿಮೆಯುಳ್ಳ ಬಡ ಕಾರ್ಮಿಕರಿಗೆ ಎಷ್ಟರ ಮಟ್ಟಿಗೆ ಚಿಕಿತ್ಸೆ ನೀಡಬಲ್ಲದು ಎಂಬುದಕ್ಕೆ ಇದು ಹಿಡಿದ ಕನ್ನಡಿಯಾಗಿದೆ.
ಸುರೇಶ್ ಕುಮಾರ್ ಅಗ್ರಹ:
ಕೋವಿಡ್ ಗೆ ಬಲಿಯಾಗಿರುವ ಎರಡು ಮೃತ ದೇಹಗಳನ್ನು ಅಂತ್ಯ ಸಂಸ್ಕಾರ ನಡೆಸದೇ ಹದಿನೈದು ತಿಂಗಳು ಕೊಳೆಯುವಂತೆ ಮಾಡಿರುವ ರಾಜಾಜಿನಗರದ ಇಎಸ್ಐ ಆಸ್ಪತ್ರೆ ಮತ್ತು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಮಾಜಿ ಶಿಕ್ಷಣ ಸಚಿವ ಸುರೇಶ ಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಚಿವರು, ಈ ಕುರಿತು ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆ ಎಲ್ಲೂ ಆಗಬಾರದು. ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಅಗಿರುವುದು ದುರ್ದೈವ. ಬೇಜವಾಬ್ದಾರಿ ಮತ್ತು ಅಮಾನವೀಯ ಕೃತ್ಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಡೆತ್ ಸರ್ಟಿಫಿಕೇಟ್:
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. ಕೋವಿಡ್ ನಿಂದ ಮೃತಪಟ್ಟಿದ್ದ ದುರ್ಗಾ ಮತ್ತು ಮುನಿರಾಜು ಅವರಿಗೆ ಕರೆ ಮಾಡಿದ್ದ ಬಿಬಿಎಂಪಿ ಸಿಬ್ಬಂದಿ ಇಬ್ಬರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೃತರಿಗೆ ಡೆತ್ ಸರ್ಟಿಫಿಕೇಟ್ ಕೂಡ ಬಿಬಿಎಂಪಿ ಅಧಿಕಾರಿಗಳೇ ವಿತರಿಸಿದ್ದರು. ಇದೀಗ ಎರಡು ಮೃತದೇಹ ಸಿಕ್ಕಿರುವ ವಿಷಯ ಕೇಳಿ ಮೃತರ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಸಂಬಂಧಿಕರಿಗೆ ನೀಡಲು ಪೊಲೀಸರು ಮುಂದಾಗಿದ್ದಾರೆ.
Recommended Video
Revanna ರೈತರ ಕಷ್ಟಗಳನ್ನು ಪರಿಶೀಲಸಿದ ವಿಶೇಷ ಕ್ಷಣಗಳು | Oneindia Kannada