Get Updates
Get notified of breaking news, exclusive insights, and must-see stories!

ಹಣ ದುರ್ಬಳಕೆ ಬಗ್ಗೆ ಖಾಸಗಿ ದೂರು ಪುರಸ್ಕಾರ ಸಲ್ಲ- ಹೈಕೋರ್ಟ್

ಬೆಂಗಳೂರು, ಮೇ 4: ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್ ) 2002ರಡಿ ವಿಚಾರಣಾ ನ್ಯಾಯಾಲಯಗಳು ಖಾಸಗಿ ದೂರುಗಳನ್ನು ಪುರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಅಲ್ಲದೆ, ಹಾಲಿ ಎಂಎಲ್ ಸಿ ಶಶಿಲ್ ಜಿ.ನಮೋಶಿ ವಿರುದ್ಧದ ಖಾಸಗಿ ದೂರನ್ನು ರದ್ದುಗೊಳಿಸಿದೆ. ಇದರಿಂದಾಗಿ ಶಶಿಲ್ ನಮೋಶಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮನಿ ಲಾಂಡರಿಂಗ್ (ಪಿಎಂಎಲ್) ಆಕ್ಟ್, 2002 ರ ನಿಬಂಧನೆಗಳ ಅಡಿಯಲ್ಲಿ ವಿಚಾರಣಾ ಕೋರ್ಟ್‌ಗಳು ಖಾಸಗಿ ದೂರುಗಳ ಆಧಾರದ ಮೇಲೆ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಆ ಕೋರ್ಟ್ ಗಳು ಪಿಎಂಎಲ್ ಕಾಯಿದೆಯ ಅಡಿಯಲ್ಲಿ ಅಧಿಕಾರ ಹೊಂದಿರುವ ಅಧಿಕಾರಿಗಳ ದೂರುಗಳನ್ನು ಮಾತ್ರ ಪುರಸ್ಕರಿಸಿ ವಿಚಾರಣೆ ಮಾಡಬಹುದಾಗಿದೆ ಎಂದು ಆದೇಶಿಸಿದೆ.

Trail courts can not entertain private compliants under PMLA Act

ಕಲಬುರಗಿ ಮೂಲದ ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಯ ಮಾಜಿ ಪದಾಧಿಕಾರಿಗಳಾದ ವಿಧಾನಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಮತ್ತಿತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಪಿಎಂಎಲ್ ಕಾಯಿದೆ ಮತ್ತು ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ)ಯನ್ನು ವಿಶ್ಲೇಷಿಸಿರುವ ಹೈಕೋರ್ಟ್ , "ಪಿಎಂಎಲ್ ಕಾಯಿದೆಯು ವಿಶೇಷ ಶಾಸನವಾಗಿರುವುದರಿಂದ ಸಿಆರ್‌ಪಿಸಿ ಅಡಿಯಲ್ಲಿ ಸೂಚಿಸಲಾದ ಸಾಮಾನ್ಯ ಕಾರ್ಯವಿಧಾನಕ್ಕಿಂತ ಸೂಚಿಸಲಾದ ವಿಶೇಷ ಕಾರ್ಯ ವಿಧಾನವು ಮೇಲುಗೈ ಸಾಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ ಮತ್ತು ಅದು ಸಾಮಾನ್ಯ ಕಾರ್ಯವಿಧಾನದೊಂದಿಗೆ ಭಿನ್ನವಾಗಿದೆ'' ಎಂದು ಏಕಸದಸ್ಯಪೀಠ ಹೇಳಿದೆ.

"ಒಮ್ಮೆ ಪಿಎಂಎಲ್ ಕಾಯಿದೆಯಡಿ ಸೂಚಿಸಲಾದ ನಿರ್ದಿಷ್ಟ ಕಾರ್ಯವಿಧಾನವು ನಿರ್ದಿಷ್ಟ ವ್ಯಕ್ತಿಯಿಂದ ಲಿಖಿತವಾಗಿ ಮಾಡಿದ ದೂರಿನ ಮೇಲೆ ಮಾತ್ರ ಸಂಜ್ಞೆ ತೆಗೆದುಕೊಳ್ಳಲು ಅವಕಾಶ ಒದಗಿಸುತ್ತದೆ, ಸೆಕ್ಷನ್ 190 ರಡಿಯಲ್ಲಿ ಕಲ್ಪಿಸಿದಂತೆ ಖಾಸಗಿ ದೂರನ್ನು ಪುರಸ್ಕರಿಸಲು ಅಥವಾ ಮಾನ್ಯ ಮಾಡಲು ಸಿಆರ್ ಪಿಸಿ ಯಡಿಯಲ್ಲಿ ಸೂಚಿಸಿರುವ ಕಾರ್ಯವಿಧಾನದ ಬದಲು, ಪಿಎಂಎಲ್ ಕಾಯಿದೆಯ ಸೆಕ್ಷನ್ 46 ರಲ್ಲಿ ಕಾರ್ಯ ವಿಧಾನ ಅನುಸರಿಸಿ ನಂತರ ಸಿಆರ್‌ಪಿಸಿಯ ಅನ್ವಯಿಸಬೇಕಾಗುತ್ತದೆ" ಎಂದು ಹೈಕೋರ್ಟ್ ಉಲ್ಲೇಖಿಸಿದೆ.

ಪಿಎಂಎಲ್ ಕಾಯಿದೆಯ ಸೆಕ್ಷನ್ 45 (1) ರಲ್ಲಿ ನಿರ್ದಿಷ್ಟಪಡಿಸಿದಂತೆ ಸಕ್ಷಮ ಅಧಿಕಾರಿಗಳ ಮೂಲಕ ದೂರನ್ನು ಸಲ್ಲಿಸದೆ, ನೇರವಾಗಿ ಖಾಸಗಿ ವ್ಯಕ್ತಿಗಳ ದೂರು ಸಲ್ಲಿಸಿದರೆ ಅವುಗಳನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸುವಂತಿಲ್ಲ ಮತ್ತು ವಿಚಾರಣೆಯಿಂದ ಪ್ರಾರಂಭಿಸುವಂತಿಲ್ಲ ಎಂದು ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಸಮನ್ಸ್ ಹಾಗೂ ದೂರನ್ನು ವಜಾಗೊಳಿಸಿದೆ.

ಏನಿದು ಪ್ರಕರಣ?

ದೂರುದಾರರ ಕಲಬುರಗಿಯ ಒ.ಹೆಚ್. ಅಮರೇಶ್ ಮತ್ತು ಬೆಂಗಳೂರಿನ ಲಿಂಗನಗೌಡ ಅವರು ಸಮಾಜದ ಹಿಂದಿನ ಪದಾಧಿಕಾರಿಗಳಾಗಿರುವ ಅರ್ಜಿದಾರರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 2016ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಅರ್ಜಿದಾರರು ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಸಂಜ್ಞೇಯ ಅಪರಾಧವೆಂದು ಪರಿಗಣಿಸಿ ಮಂಗಳೂರಿನ ವಿಚಾರಣಾ ನ್ಯಾಯಾಲಯವು ನೀಡಿದ ಸಮನ್ಸ್‌ನ ಸಿಂಧುತ್ವವನ್ನು ಪ್ರಶ್ನಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+