Karnataka Assembly Elections: ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಘಟಾನುಗಟಿಗಳು

ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ರಾಜಕಾರಣಿಗಳು, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲ ಚಿತ್ತ ರಾಜ್ಯ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ ಹೊಸಬರಿಗೆ, ಕಾರ್ಯಕರ್ತರಿಗೂ ಟಿಕೆಟ್ ಲಭಿಸಿ ಕಡಿಮೆ ಅಂತರದಿಂದ ಸೋತರೆ ಅದು ಅಷ್ಟೊಂದು ದೊಡ್ಡ ವಿಷಯ ಅನ್ನಿಸದು.

ಆದರೆ ಪ್ರತಿಷ್ಠಿತ ಚನಾವಣಾ ಕಣದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸಾಕಷ್ಟು ಮತಗಳ ಅಂತರದಿಂದ ಸೋತರೆ ಅದು ದೊಡ್ಡ ಸೋಲಾಗಿ ಪರಿಣಮಿಸುತ್ತದೆ. ಆ ಸೋಲಿನ ದುಷ್ಪರಿಣಾಮ ಆಯಾಯ ಪಕ್ಷಗಳ ಮೇಲೂ ಆಗುತ್ತದೆ. ಈ ಹಿಂದಿನ 2018ರ ಚುನಾವಣೆಯಲ್ಲಿ ಈ ರೀತಿ ಸಾಕಷ್ಟು ಮತಗಳ ಅಂತರಗಳಿಂದ ಸೋತ ಘಟಾನುಗಟಿ ನಾಯಕರು ಯಾರು?, ಎಷ್ಟು ಅಂತರದಿಂದ ಮತ್ತು ಯಾರಿಂದ ಸೋಲು ಕಂಡರು, ಅವರ ಕ್ಷೇತ್ರ ಯಾವುದು? ಎಂಬೆಲ್ಲ ಮಾಹಿತಿಗಳು ಇಲ್ಲಿ ತಿಳಿಯೋಣ.

The List Of Leaders Major Parties Who Lost In 2018 Elections By A Huge Margin Of Votes

ಪ್ರಮುಖ ಪಕ್ಷಗಳಲ್ಲಿ ಹಿಂದಿನಿಂದ ಗುರುತಿಸಿಕೊಂಡ ಹಿರಿಯರು ಮತ್ತು ಪ್ರಭಾವಿ ಅಭ್ಯರ್ಥಿಗಳ ಸೋಲು ಅದು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಮತ್ತು ಟಿಕೆಟ್ ಘೋಷಣೆ ಮೇಲೂ ಪ್ರತಿಕೂಲ ಪರಿಣಾಮ ಬಿಳುವುದು ಸಾಮಾನ್ಯ. ಹೀಗಾಗಿ ಟಿಕೆಟ್‌ಗಾಗಿ ಲಾಬಿ, ವಾಗ್ವಾದ, ಟೀಕೆಗಳು, ಅಭ್ಯರ್ಥಿಗಳ ಬಂಡಾಯ ಮತ್ತು ಪಕ್ಷಾಂತರ ಆರಂಭವಾಗುತ್ತದೆ. ಆ ಮೂಲಕ ಸೋತ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವಿನ ಅದೃಷ್ಟ ಪರೀಕ್ಷೆ ಮುಂದಾಗಲು ಯತ್ನಿಸುತ್ತಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಘಟಾನುಗಟಿ ನಾಯಕರನ್ನು ನೋಡುವುದಾದರೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಿಮ್ಮನೆ ರತ್ನಾಕರ ಅವರು ಬಿಜೆಪಿಯ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿರುದ್ಧ ಬರೋಬ್ಬರಿ 21,955 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಹೀಗೆ ಚುನಾವಣೆಯಲ್ಲಿ ಸೋಲು ಕಂಡ ಪ್ರಮುಖ ಪಟ್ಟಿ ನಿಮ್ಮ ಮುಂದಿದೆ.

The List Of Leaders Major Parties Who Lost In 2018 Elections By A Huge Margin Of Votes

2018 ಪರಾಭವಗೊಂಡ ಪ್ರಮುಖರ ಪಟ್ಟಿ

ಪರಾಜಿತ ಅಭ್ಯರ್ಥಿ ಪಕ್ಷ ಕ್ಷೇತ್ರ ಸೋಲಿನ ಅಂತರ ಗೆದ್ದ ಅಭ್ಯರ್ಥಿ
ಉಮಾಶ್ರೀ ಕಾಂಗ್ರೆಸ್ ತೇರದಾಳ 21,113 ಸಿದ್ದು ಸವದಿ
ಬಾಬೂರಾವ್ ಚಿಂಚನಸೂರು ಕಾಂಗ್ರೆಸ್ ಗುರುಮಿಠಕಲ್ 24,480 ನಾಡನಗೌಡ ಕಂಡಕೂರು
ಎಚ್. ಆಂಜನೇಯ ಕಾಂಗ್ರೆಸ್ ಹೊಳಲಕೆರೆ 38,940 ಎಂ.ಚಂದ್ರಪ್ಪ
ಶಾಮನೂರು ಮಲ್ಲಿಕಾರ್ಜುನ ಕಾಂಗ್ರೆಸ್ ದಾವಣಗೆರೆ ಉತ್ತರ 4,071 ಎಸ್.ಎ.ರವೀಂದ್ರನಾಥ್
ಕಿಮ್ಮನೆ ರತ್ನಾಕರ ಕಾಂಗ್ರೆಸ್ ತೀರ್ಥಹಳ್ಳಿ 21,955 ಆರಗ ಜ್ಣಾನೇಂದ್ರ
ಮಧು ಬಂಗಾರಪ್ಪ ಜೆಡಿಎಸ್ ಸೊರಬ 13,286 ಕುಮಾರ್ ಬಂಗಾರಪ್ಪ
ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಸಾಗರ 8,039 ಹರತಾಳು ಹಾಲಪ್ಪ
ಮೋಟಮ್ಮ ಕಾಂಗ್ರೆಸ್ ಮೂಡಿಗೆರೆ 12,512 ಎಂ.ಪಿ.ಕುಮಾರಸ್ವಾಮಿ
ಬಿ.ಎಲ್. ಶಂಕರ್ ಕಾಂಗ್ರೆಸ್ ಚಿಕ್ಕಮಗಳೂರು 26,314 ಸಿ.ಟಿ.ರವಿ
ವೈ.ಎಸ್.ವಿ.ದತ್ತಾ ಜೆಡಿಎಸ್ ಕಡೂರು 15,372 ಕೆ.ಎಸ್.ಪ್ರಕಾಶ್
ರಮಾನಾಥ ರೈ ಕಾಂಗ್ರೆಸ್ ಬಂಟ್ವಳ 15,971 ಯು.ರಾಜೇಶ್ ನಾಯಕ್
ಡಾ.ಎಚ್.ಸಿ.ಮಹದೇವಪ್ಪ ಕಾಂಗ್ರೆಸ್ ತಿ.ನರಸೀಪುರ 28, 478 ಅಶ್ವಿನ್ ಕುಮಾರ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+