ಹಲವು ರೈಲುಗಳ ಸೇವೆ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ
ಬೆಂಗಳೂರು, ಡಿಸೆಂಬರ್ 20 : ನೈಋತ್ಯ ರೈಲ್ವೆ ಕರ್ನಾಟಕದ ವಿವಿಧ ರೈಲು ಸೇವೆಗಳ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ರೈಲು ಸೇವೆಗಳ ಅವಧಿಯನ್ನು 2020ರ ಆಗಸ್ಟ್ ತನಕ ವಿಸ್ತರಣೆ ಮಾಡಲಾಗಿದೆ.
ತತ್ಕಾಲ್ ಎಕ್ಸ್ಪ್ರೆಸ್ ಸೇರಿದಂತೆ ವಿವಿಧ ರೈಲುಗಳ ಸೇವೆಯನ್ನು ಆರು ತಿಂಗಳ ಕಾಲ ಮುಂದುವರೆಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ರೈಲುಗಳು ಪ್ರಾಯೋಗಿಕವಾಗಿ ಸಂಚಾರವನ್ನು ನಡೆಸುತ್ತಿದ್ದವು. ಈಗ ಮತ್ತೆ ಆರು ತಿಂಗಳು ಸೇವೆ ವಿಸ್ತರಣೆಯಾಗಿದೆ.

ವಿವಿಧ ಜಿಲ್ಲೆಗಳಿಂದ ಸಂಚಾರ ನಡೆಸುವ ರೈಲುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಆರು ತಿಂಗಳ ಕಾಲ ಸೇವೆಗಳನ್ನು ವಿಸ್ತರಿಸಲಾಗಿದೆ.
ಯಾವ-ಯಾವ ರೈಲುಗಳು
* ಶಿವಮೊಗ್ಗ ಟೌನ್-ರೇಣಿಗುಂಟ ವೀಕ್ಲಿ ತತ್ಕಾಲ್ ಎಕ್ಸ್ಪ್ರೆಸ್ ಆಗಸ್ಟ್ 19ರ ತನಕ ವಿಸ್ತರಣೆ
* ಶಿವಮೊಗ್ಗ ಟೌನ್-ಚೆನ್ನೈ ಸೆಂಟ್ರಲ್ ವೀಕ್ಲಿ ತತ್ಕಾಲ್ ಎಕ್ಸ್ಪ್ರೆಸ್ ಆಗಸ್ಟ್ 17ರ ತನಕ
* ಚೆನ್ನೈ ಸೆಂಟ್ರಲ್-ಶಿವಮೊಗ್ಗ ವೀಕ್ಲಿ ತತ್ಕಾಲ್ ಎಕ್ಸ್ಪ್ರೆಸ್ ಸೇವೆ ಆಗಸ್ಟ್ 18ರ ವರೆಗೆ
* ವಿಜಯಪುರ-ಮಂಗಳೂರು ಜಂಕ್ಷನ್ ಡೈಲಿ ತತ್ಕಾಲ್ ಎಕ್ಸ್ಪ್ರೆಸ್ ಆಗಸ್ಟ್ 9ರ ತನಕ
* ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ತತ್ಕಾಲ್ ಎಕ್ಸ್ಪ್ರೆಸ್ ಆಗಸ್ಟ್ 10ರ ವರೆಗೆ
* ಅರಸೀಕೆರೆ-ಶಿವಮೊಗ್ಗ ಟೌನ್ ವೀಕ್ಲಿ ಜನಸಾಧಾರಣ ಎಕ್ಸ್ಪ್ರೆಸ್ ಆಗಸ್ಟ್ 20ರ ತನಕ












Click it and Unblock the Notifications