ಅಂಗಡಿಯಲ್ಲಿ ನಿತ್ಕೊಂಡು ಹೊಗೆ ಬಿಡ್ಬೇಡಿ: ಜು1ರಿಂದ ಕಟ್ಟುನಿಟ್ಟಿನ ಆದೇಶ
ಜುಲೈ ಒಂದರಿಂದ ಅಂಗಡಿಯ ಬಳಿ ನಿಂತು ಧೂಮಪಾನ ಮಾಡುವಂತಿಲ್ಲ. ಬೀಡಿ, ಸಿಗರೇಟು ಸೇದುವವರು ಮತ್ತು ಮಾರುವವರನ್ನು ಸಮನಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆದೇಶ ಪಾಲಿಸದಿದ್ದರೆ ಇಬ್ಬರಿಗೂ ದಂಡ ವಿಧಿಸಲು ನಿರ್ಧರಿಸಿದೆ.
ಬೆಂಗಳೂರು, ಜುಲೈ 1: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯ ಈ ಹಿಂದೆಯೇ ಆದೇಶ ನೀಡಿದ್ದರೂ ಅದು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿರಲಿಲ್ಲ, ಈಗ ಪೊಲೀಸ್ ಇಲಾಖೆ ಈ ಸಂಬಂಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಜುಲೈ ಒಂದರಿಂದ ಅನ್ವಯವಾಗುವಂತೆ ಜಿಎಸ್ಟಿ, ಮತ್ತು ಹೆದ್ದಾರಿಗಳಲ್ಲಿ ಮದ್ಯ ಬಂದ್ ಎನ್ನುವ ಎರಡು ಮಹತ್ವದ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ಬಂದಿದೆ. ಈಗ, ಜುಲೈ ಒಂದರಿಂದ ಅಂಗಡಿಯ ಬಳಿ ನಿಂತೂ ಧೂಮಪಾನ ಮಾಡುವಂತಿಲ್ಲ.
ಬೀಡಿ, ಸಿಗರೇಟು ಸೇದುವವರು ಮತ್ತು ಮಾರುವವರನ್ನು ಸಮನಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆದೇಶ ಪಾಲಿಸದಿದ್ದರೆ ಇಬ್ಬರಿಗೂ ದಂಡ ವಿಧಿಸಲು ನಿರ್ಧರಿಸಿದೆ. ಎಚ್ಚರಿಕೆ ಸಂದೇಶ ಸಾರುವ ಬ್ಯಾನರುಗಳು ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಮುಂದೆ ರಾರಾಜಿಸುತ್ತಿವೆ.
ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್ಟಿ ಬಿಸಿತಟ್ಟದಿದ್ದರೂ, ಪೊಲೀಸ್ ಇಲಾಖೆಯ ಈ ಆದೇಶ ಮಾತ್ರ ಸರಿಬಿಸಿಮುಟ್ಟಿಸಿದೆ. ಜೊತೆಗೆ, ದುಶ್ಚಟ ಅಂಟಿಸಿಕೊಂಡಿರುವವರು ಮನಬಂದಲ್ಲಿ ಇನ್ನು ಮುಂದೆ ಹೊಗೆ ಬಿಡುವಂತಿಲ್ಲ.
ಅಯಾಯ ಠಾಣೆಯ ಪೊಲೀಸರು ಈಗಾಗಲೇ ಪ್ರಮುಖವಾಗಿ ಹೋಟೆಲ್ ಬಳಿಯಿರುವ ಅಂಗಡಿ, ಕಾಂಡಿಮೆಂಟ್ಸ್, ಚಿಲ್ಲರೆ ಅಂಗಡಿಯ ಮಾಲೀಕರಿಗೆ ಎರಡು ದಿನಗಳಿಂದ ಈ ಬಗ್ಗೆ ಎಚ್ಚರಿಕೆ ನೀಡುತ್ತಾ ಬರುತ್ತಿದ್ದಾರೆ.
ಪೊಲೀಸ್ ಇಲಾಖೆ ಹೊರಡಿಸಿರುವ ಕೆಲವೊಂದು ಸೂಚನೆಗಳು, ಮುಂದೆ ಓದಿ..

ಬಿಡಿ ಸಿಗರೇಟ್/ಬೀಡಿ ನೀಡುವಂತಿಲ್ಲ.
ಪೊಲೀಸ್ ಇಲಾಖೆಯ ಆದೇಶದ ಪ್ರಕಾರ ಅಂಗಡಿಯವರು ಇನ್ನು ಮುಂದೆ ಬಿಡಿ ಸಿಗರೇಟ್/ಬೀಡಿ ಮಾರುವಂತಿಲ್ಲ. ಗ್ರಾಹಕ ಬೇಕಿದ್ದಲ್ಲಿ ಫುಲ್ ಪ್ಯಾಕ್ ತೆಗೆದುಕೊಳ್ಳಬೇಕು. ದಿನವೊಂದಕ್ಕೆ ನಾಲ್ಕೈದು ಸಿಗರೇಟ್ ಸೇದುವವನು ಒಂದಾ ಸಿಗರೇಟ್ ಚಟದಿಂದ ಮುಕ್ತನಾಗಬೇಕು, ಇಲ್ಲಾಂದ್ರೆ ಪ್ಯಾಕ್ ಸಿಗರೇಟ್ ತೆಗೆದುಕೊಳ್ಳಬೇಕು.

ತಂಬಾಕು ಪದಾರ್ಥಗಳನ್ನು ಕಾಣಿಸುವಂತೆ ಇಡುವಂತಿಲ್ಲ
ಅಂಗಡಿಯವರು ಸಿಗರೇಟ್, ಬೀಡಿ ಸಹಿತ ತಂಬಾಕು ಪದಾರ್ಥಗಳನ್ನು ಕಣ್ಣಿಗೆ ಕಾಣಿಸದಂತೆ ಇಡುವಂತಿಲ್ಲ, ಯುವ ಜನತೆಯ ಜೊತೆಗೆ ಸಾರ್ವಜನಿಕರು ಈ ಚಟದಿಂದ ದೂರವಾಗಬೇಕು ಎನ್ನುವುದು ಇಲಾಖೆಯ ಉದ್ದೇಶ.

ಸೇದಿದವನಿಗೂ, ಮಾರಿದವನಿಗೂ ಇಬ್ಬರಿಗೂ ದಂಡ
ಅಂಗಡಿ ಬಳಿ ಸಿಗರೇಟು/ಬೀಡಿ ಸೇದಬಾರದು, ತಂಬಾಕು ಪದಾರ್ಥಗಳನ್ನು ಸೇವಿಸಬಾರದು. ಇಲಾಖೆಯ ಆದೇಶ ಉಲ್ಲಂಘಿಸಿದರೆ, ಸೇದಿದವನಿಗೂ, ಮಾರಿದವನಿಗೂ ಇಬ್ಬರಿಗೂ ಇನ್ನೂರು ರೂಪಾಯಿ ಫೈನ್.

ಸಾರ್ವಜನಿಕರೂ ದೂರು ನೀಡಬಹುದು
ಯಾರೇ ಆಗಲಿ ಆದೇಶ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸಾರ್ವಜನಿಕರೂ ಇಲಾಖೆಗೆ ದೂರು ನೀಡಬಹುದು. ಯಾವ ಅಂಗಡಿಯಲ್ಲಿ ಬಿಡಿ ಮಾರಾಟ ಮಾಡಲಾಗುತ್ತಿದೆ, ಯಾವ ಅಂಗಡಿ ಬಳಿ ಜನರು ಧೂಮಪಾನ ಮಾಡುತ್ತಿದ್ದಾರೆಂದು ತಿಳಿಸಿದರೆ, ಇಲಾಖೆಯವರು ಮುಂದಿನ ಕ್ರಮತೆಗೆದುಕೊಳ್ಳುತ್ತಾರೆ.

ಅಂಗಡಿ ಮಾಲೀಕನೇ ತನ್ನ ಗ್ರಾಹಕನಿಗೆ ಹೇಳಬೇಕು
ಅಂಗಡಿಯ ಬಳಿ ನಿಂತು ಧಮ್ ಹೊಡೆಯಬಾರದೆಂದು ಅಂಗಡಿ ಮಾಲೀಕನೇ ತನ್ನ ಗ್ರಾಹಕನಿಗೆ ಹೇಳಬೇಕು. ಬಹುತೇಕ ಚಿಲ್ಲರೆ ಅಂಗಡಿಗಳಿಗೆ ಇಲಾಖೆಯ ಹೊಸ ಆದೇಶ ತಲೆನೋವು ತಂದಿರುವುದು ಒಂದೆಡೆಯಾದರೆ, ವ್ಯಾಪಾರವೂ ತಗ್ಗುವ ಭೀತಿಯಲ್ಲಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications