ಸರ್ಕಾರದ ಹೊಸ ಕೊಡುಗೆ ː ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇ- ಹಾಸ್ಪಿಟಲ್
ಬೆಂಗಳೂರು, ಜುಲೈ 06: ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಇ-ಹಾಸ್ಪಿಟಲ್ ಮಹತ್ವದ ಯೋಜನೆಗೆ ರಾಜ್ಯ ಸಚಿವ ಸಂಪುಟವು ಬುಧವಾರದಂದು ಅನುಮತಿ ನೀಡಿದೆ.
ಜತೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಹೊಂದಿರದ ಜಿಲ್ಲೆಗಳಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲು ಸಂಪುಟ ಸಮ್ಮತಿಸಿದೆ.
ಸಚಿವ ಟಿ.ಬಿ ಜಯಚಂದ್ರ ಮಾತನಾಡಿ, ಬಳ್ಳಾರಿಯ ವಿಮ್ಸ್ ಮತ್ತು ಹುಬ್ಬಳ್ಳಿಯ ಕಿಮ್ಸ್ನಲ್ಲಿ ತಲಾ 150 ಕೋಟಿ ರು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ, ಕೋಲಾರದಲ್ಲಿ ತಲಾ 25 ಕೋಟಿ ರು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದಿದ್ದಾರೆ.
ಇ-ಹಾಸ್ಪಿಟಲ್ ಯೋಜನೆ ಅನುಷ್ಠಾನಗೊಳ್ಳುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೇಂದ್ರದಿಂದ ಹತ್ತು ಕಿಲೋ ಮೀಟರ್ಗಿಂತಲೂ ಹೆಚ್ಚು ದೂರವಿರುವ ಪ್ರದೇಶದಲ್ಲಿ ಮತ್ತೊಂದು ಹೊಸ ಘಟಕಗಳನ್ನು ಅಂದರೆ ಒಟ್ಟಾರೆ. 150 ಆರೋಗ್ಯ ವಿಸ್ತೀರ್ಣ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ.
ಅನಾರೋಗ್ಯಕ್ಕೊಳಗಾದ
ವ್ಯಕ್ತಿಗೆ
ತುರ್ತು
ಚಿಕಿತ್ಸೆ
ಕಲ್ಪಿಸಲು
ಸ್ಥಳೀಯ
ವೈದ್ಯರಿಂದ
ಸಾಧ್ಯವಿಲ್ಲದಿದ್ದ
ಸಂದರ್ಭದಲ್ಲಿ
ಜಿಲ್ಲಾ
ಕೇಂದ್ರ
ಅಥವಾ
ಬೆಂಗಳೂರಿನ
ಆಸ್ಪತ್ರೆಯ
ತಜ್ಞ
ವೈದ್ಯರೊಂದಿಗೆ
ಸಂಪರ್ಕಿಸಿ,
ಪ್ರಾಥಮಿಕ
ಚಿಕಿತ್ಸೆ
ಕಲ್ಪಿಸುವುದೇ
ಇದರ
ಉದ್ದೇಶ.
ಜತೆಗೆ
ತ್ವರಿತವಾಗಿ
ಹೆಚ್ಚಿನ
ಚಿಕಿತ್ಸೆಗೆ
ದೊಡ್ಡ
ಆಸ್ಪತ್ರೆಗೆ
ಕಳುಹಿಸಿ
ಕೊಡಲು
ಅವಕಾಶ
ಮಾಡಿಕೊಡಲಾಗಿದೆ.