ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣಾದಿಂದ ಸ್ಪರ್ಧಿಸಲು ಡಿವಿಎಸ್‌ಗೆ ಸಿದ್ದರಾಮಯ್ಯ ಸವಾಲು!

|
Google Oneindia Kannada News

ಬೆಂಗಳೂರು, ಡಿಸೆಂಬರ್. 10 : 'ವರುಣಾ ಕ್ಷೇತ್ರದಲ್ಲಿ ನಾನು ಈ ಬಾರಿ ನಿಲ್ಲುತ್ತಿಲ್ಲ. ನನ್ನ ಮಗ ಅಲ್ಲಿ ಸ್ಪರ್ಧಿಸುತ್ತಾನೆ. ನನ್ನ ಮಗನ ವಿರುದ್ಧ ಸದಾನಂದ ಗೌಡರು ನಿಲ್ಲಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು: ಸದಾನಂದ ಗೌಡವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು: ಸದಾನಂದ ಗೌಡ

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಕಳೆದ ಬಾರಿ 32 ಸಾವಿರ ಮತಗಳಿಂದ ಗೆದಿದ್ದೆ. ಬಿಜೆಪಿ ಅಲ್ಲಿ ಗೆಲ್ಲೋಕೆ ಸಾಧ್ಯನಾ?, ಗೆಲ್ಲುವುದು ಅಷ್ಟು ಸುಲಭನಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

'2018ರ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ''2018ರ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ'

Siddaramaiah challenges Sadananda Gowda to contest form Varuna

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು, 'ನಾನು ವರುಣಾ ಕ್ಷೇತ್ರಕ್ಕೆ ಹೋಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ನಡುಕ ಶುರುವಾಗಿದೆ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ವರುಣಾದಿಂದ ಸ್ಪರ್ಧಿಸುವಂತೆ ಸದಾನಂದ ಗೌಡರಿಗೆ ಸವಾಲು ಹಾಕಿದರು.

ವರುಣಾ ಕ್ಷೇತ್ರದಲ್ಲಿ ಯತೀಂದ್ರ ಹವಾ, ಗೆಲುವಿಗಾಗಿ ನೆಲ ಹದ!ವರುಣಾ ಕ್ಷೇತ್ರದಲ್ಲಿ ಯತೀಂದ್ರ ಹವಾ, ಗೆಲುವಿಗಾಗಿ ನೆಲ ಹದ!

'ನಾನು ಯಾರಿಗೂ ಭಯ ಬೀಳೋಲ್ಲ. ಸುಮ್ಮನೆ ಭಾಷಣ ಬಿಗಿಯುವುದಲ್ಲ. ಬೇರೆಯವರನ್ನು ನಿಲ್ಲಿಸಿ ಬಲಿಕೊಡೋದಕ್ಕಿಂತ ಸದಾನಂದ ಗೌಡರೇ ಸ್ಪರ್ಧಿಸಲಿ. ಸದಾನಂದ ಗೌಡರಿಗೆ ಉಸ್ತುವಾರಿ ಕೊಟ್ಟರೆ ಜನರು ಬದಲಾವಣೆಯಾಗಲ್ಲ' ಎಂದರು.

English summary
Karnataka Chief Minister Siddaramaiah challenged Union minister of Statistics and Programme Implementation D.V.Sadananda Gowda to contest from Varuna assembly constituency during elections in 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X