Get Updates
Get notified of breaking news, exclusive insights, and must-see stories!

ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರು ಹಿಂದೂ ಆಗುತ್ತಾರೆ: ಬಿಜೆಪಿ

ಬೆಂಗಳೂರು, ಸೆಪ್ಟಂಬರ್ 05: ಭಾರತೀಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಪರ ವಿರೋಧ ಚರ್ಚೆಗಳು, ಖಂಡನೆ ಮುಂದುವರಿದಿದೆ. ಸ್ಟಾಲಿನ್ ಇದೀಗ ಮತ್ತೆ ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಬಿಜೆಪಿ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ನವರು ಹಿಂದುಗಳಾಗುತ್ತಾರೆ. ಹಿಂದೂ ಧರ್ಮ ಅವಹೇಳನ ಮಾಡುವವರನ್ನು ಕಾಂಗ್ರೆಸ್‌ ಬೆಂಬಲಿಸುತ್ತಲೇ ಇದೆ ಎಂದು ಕಿಡಿ ಕಾರಿದೆ.

ಮಂಗಳವಾರ ರಾಜ್ಯ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂಗಳಾಗುವ ಐಎನ್‌ಸಿ ನಾಯಕರು ನಾಯಕರು, ಹಿಂದಿನಿಂದಲೂ ಹಿಂದೂಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಜೊತೆ ಜೊತೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಗಳಿಗೆ ಹಾಗೂ ಅಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಬಿಜೆಪಿ ಟೀಕಿಸಿದೆ.

Sanatana Dharma Remark: INDIA Alliance is Hindu Against Alliance, BJP Outrage on Congress

ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜೊತೆ ಸ್ನೇಹ ಬೆಳೆಸುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ತನ್ನ ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ.

ಹಿಂದೂ ವಿರುದ್ಧದಇಂಡಿಯಾ ಮೈತ್ರಿಕೂಟ

ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ DNA ನಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ. ಸಾಲದ್ದಕ್ಕೆ, ಹಿಂದೂಗಳ ಮೇಲೆ ದ್ವೇಷ ಕಾರುವ ಈ ಒಕ್ಕೂಟಕ್ಕೆ I.N.D.I.A. ಮೈತ್ರಿಕೂಟವೆಂದು ಎಂಬ ಹೆಸರಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಜರಿದಿದೆ.

Sanatana Dharma Remark: INDIA Alliance is Hindu Against Alliance, BJP Outrage on Congress

ಇಂಡಿಯಾ ಮೈತ್ರಿಕೂಟ ದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ನಾಯಕರು, ಹೊರ ಜಗತ್ತಿಗೆ ಪರಿಚಯವಾಗಿದ್ದು, ಅವರ ಹಿಂದೂ ವಿರೋಧಿ ಹಿನ್ನೆಲೆಯಿಂದಲೇ ಹೊರತು ಮತ್ತಾವ ಘನಂದಾರಿ ಕೆಲಸದಿಂದಲ್ಲ ಎಂದು ಕಿಡಿ ಕಾರಿದೆ.

ಆಂತರ್ಯದಲ್ಲಿನ ಹಿಂದೂ ವಿರೋಧಿಗೆ ದಿದಿ ಜೈಕಾರ

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿರವರಿಗೆ ಹಿಂದೂಗಳ ನೆರಳನ್ನು ಕಂಡರೂ ಆಗುವುದಿಲ್ಲ. ಒಂದೆಡೆ ಶ್ರೀರಾಮ್ ತಮ್ಮ ಸಮಾಜವನ್ನು ಒಡೆಯುವುದಿಲ್ಲ ಅದನ್ನು ಹೇಳಬೇಡಿ ಎನ್ನುತ್ತಾ, ಇನ್ನೊಂದೆಡೆ ಪಕ್ಷ TMC ಯಲ್ಲಿ 'M ಎಂದರೆ ಮದರಸಾ C ಅಂದರೆ ಮತಾಂತರ (Conversion) ಎಂಬಂತೆ ತಮ್ಮ ಆಂತರ್ಯದಲ್ಲಿನ ಹಿಂದೂ ವಿರೋಧಿಗೆ ಅವರು ಜೈ ಎನ್ನುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿಯವರ ಅತ್ಯಾಪ್ತ ಐಯುಎಂಎಲ್ (ಮುಸ್ಲಿಂ ಲೀಗ್) ಹಿಂದೂಗಳನ್ನು ದೇವಸ್ಥಾನದಲ್ಲಿ ನೇತು ಹಾಕಿ ಬೆಂಕಿ ಹಚ್ಚುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಕೂಗುತ್ತಿದೆ. ಹಿಂದೂಗಳನ್ನು ಈ ನೆಲದಿಂದ ಓಡಿಸಬೇಕೆಂಬುದೇ ಈ ಪಕ್ಷದ ಪ್ರಮುಖ ಸಿದ್ಧಾಂತ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂಗಳ ಮೇಲೆ ಎಡಪಕ್ಷಗಳ ದ್ವೇಷ

ಓಲೈಕೆ, ಕುಟುಂಬ ಮತ್ತು ಭ್ರಷ್ಟ ರಾಜಕಾರಣಕ್ಕೆ ಹೆಸರುವಾಸಿಯಾಗಿ, ಕುಖ್ಯಾತಿ ಪಡೆದಿರುವ RJD ಲಾಲೂ ಪ್ರಸಾದ್ ಯಾದವ್, ತಾವು ಮೇವು ಹಗರಣದಲ್ಲಿ ಜೈಲೂಟ ತಿಂದರೂ, ಹಿಂದೂಗಳು ಗೋಭಕ್ಷಕರು ಎಂದು ಸುಳ್ಳು ಹೇಳುತ್ತಿದ್ದಾರೆ.

ಇನ್ನು ಭಾರತ ಚೀನಾಕ್ಕೆ ಆದಿಯಾಗಿ ಕೆಲಸ ಮಾಡುವ ಎಡಪಕ್ಷಗಳು, ಹಿಂದೂಗಳು ಹಾಗೂ ಹಿಂದೂ ಧರ್ಮದ ಮೇಲೆ ಸದಾ ದ್ವೇಷ ಕಾರುತ್ತಿವೆ. ಒಂದೆಡೆ ಹಿಂದೂ ದೇವರುಗಳನ್ನೇ ಅವಹೇಳನ ಮಾಡುತ್ತಾ, ಮತ್ತೊಂದೆಡೆ ಭಾರತಕ್ಕೆ ಕಮ್ಮಿ ನಿಷ್ಠೆ ತೋರುವುದೇ ಈ ಪಕ್ಷಗಳ ಮುಖ್ಯ ಸಾಲು ಅಜೆಂಡಾ ಆಗಿದೆ.

ಸ್ಟಾಲಿನ್ ಹೇಳಿಕೆಗೆ ಕಾಂಗ್ರೆಸ್ ಬೆಂಬಲ: ಬಿಜೆಪಿ

ಈಗ ತಮಿಳುನಾಡಿನ DMK ಪಕ್ಷದ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಅದನ್ನೂ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದ್ದಾರೆ. ರಾಹುಲ್ ಗಾಂಧಿಯವರ ಕಾಂಗ್ರೆಸ್ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸುವ ಬದಲು, ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಉದಯನಿಧಿಯವರ ಹಿಂದೂ ವಿರೋಧಿ ಹೇಳಿಕೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಈ ಎಲ್ಲಾ ಹಿಂದೂ ವಿರೋಧಿ ರಾಜಕೀಯ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಪ್ರಮುಖ ಸದಸ್ಯರು. ಈ ಸ್ವಾರ್ಥದ ಮೈತ್ರಿಕೂಟಕ್ಕೆ I.N.D.I.A. ಮೈತ್ರಿಕೂಟ ಎನ್ನುವ ಬದಲು ಹಿಂದೂ ವಿರೋಧಿ ಮೈತ್ರಿಕೂಟ ಎಂಬ ಹೆಸರು ಅತ್ಯಂತ ಸೂಕ್ತವಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+