ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಂತಿಗ್ರಾಮದ ಬಳಿ 'ಶಿರಾಡಿ ಘಾಟ್' ಸಿನ್ಮಾ ಮಂದಿ ಸಾವು
ಸಕಲೇಶಪುರ, ಮಾ.3: ಶಿರಾಡಿ ಘಾಟ್ ಹೆಸರಿನ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. ಶಾಂತಿಗ್ರಾಮದ ಬಳಿ ಭೀಕರ ಅಪಘಾತದಲ್ಲಿ ಚಿತ್ರತಂಡ ಇಬ್ಬರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿ ಕ್ವಾಲೀಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕ್ವಾಲೀಸ್ ನಲ್ಲಿದ್ದ ಚಿತ್ರತಂಡದ ಸದಸ್ಯರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಸಹಾಯಕ ಸಿಬ್ಬಂದಿ ಚಿರಂಜೀವಿ(32) ಮತ್ತು ಮಾಲತೇಶ್(35) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಕ್ವಾಲೀಸ್ ನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಗೊಂಡ ಮೂವರ ಪೈಕಿ ರಾಜೇಶ್ ಎಂಬುವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದರೆ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಚಿತ್ರತಂಡ ಹೇಳಿದೆ.
ಘಟನಾ ಸ್ಥಳಕ್ಕೆ ಶಾಂತಿ ಗ್ರಾಮ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Comments
shiradi ghat road accident sakaleshpur hassan district news ಶಿರಾಡಿ ಘಾಟ್ ಹಾಸನ ಸಕಲೇಶಪುರ ಜಿಲ್ಲಾಸುದ್ದಿ ರಸ್ತೆ ಅಪಘಾತ
English summary
Two persons died and around 3 others were injured in an accident on Shiradi Ghat, Shanthigrama, Hassan district here on Tuesday March 3. All the deceased were crew members of Shiradi Ghat movie.