ರಾಜ್ಯೋತ್ಸವ ತಿಂಗಳಲ್ಲಿ 'ಬಾರಿಸು ಕನ್ನಡ ಡಿಂಡಿಮ' ಇರಲಿ
ಬೆಂಗಳೂರು, ಅಕ್ಟೋಬರ್, 30: ಕರ್ನಾಟಕ ಸರ್ಕಾರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹೊಸದಾಗಿ ನಿರ್ಮಿಸಿರುವ 'ಬಾರಿಸು ಕನ್ನಡ ಡಿಂಡಿಮ ಗೀತೆ'ಯನ್ನು ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರದಂದು ಮನವಿ ಪತ್ರ ಸಲ್ಲಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮ ಗೀತೆ ಯೂಟ್ಯೂಬ್ ನಲ್ಲಿ ಭಾರೀ ಜನರ ಮೆಚ್ಚುಗೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರದರ್ಶನಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ರೋಷನ್ ಬೇಗಂ ತಿಳಿಸಿದ್ದಾರೆ.[ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ವಿಡಿಯೋ]

ಬಾರಿಸು ಕನ್ನಡ ಡಿಂಡಿಮ ಗೀತೆಯೂ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಉದಿತ್ ಹರಿತಾಸ್, ಅನನ್ಯ ಭಟ್, ನವೀನ್ ಸಜ್ಜು ಮುಂತಾದವರು ಕುವೆಂಪು ಅವರ ಹಾಡಿಗೆ ದನಿಗೂಡಿಸಿದ್ದಾರೆ.
ಒಟ್ಟಿನಲ್ಲಿ ಯೂಟ್ಯೂಬ್ ಮೂಲಕ ಇದುವರೆಗೂ ಸುಮಾರು 15ಲಕ್ಷಕ್ಕೂ ಹೆಚ್ಚು ಜನರಿಗೆ ತಲುಪಿದ್ದು, ಎಲ್ಲಾ ವಯೋಮಾನದವರ ಮನಸ್ಸನ್ನು ಬಹಳ ಗಾಢವಾಗಿ ತಟ್ಟಿದೆ. ಭಾರತದಲ್ಲಿ ಅತ್ಯಧಿಕವಾಗಿ ವೀಕ್ಷಿಸಿರುವ ಮತ್ತು ಅತ್ಯಂತ ಜನಪ್ರಿಯವಾಗಿರುವ ಐದು ವೀಡಿಯೋಗಳಲ್ಲಿ ಇದು ಅಗ್ರಪಂಕ್ತಿಯಲ್ಲಿದೆ.[ರಾಜ್ಯೋತ್ಸವಕ್ಕೆ ನಿರ್ಬಂಧ : ಕನ್ನಡ ಹೋರಾಟಗಾರರು ಏನಂತಾರೆ?]
ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಂಪು ನಾಡಿನೆಲ್ಲೆಡೆ ಹರಡಲಿದೆ. ಈ ಅವಧಿಯಲ್ಲಿ ವಿನೂತನ ಶೈಲಿಯಲ್ಲಿ ಸಂಯೋಜನೆಯಾಗಿರುವ ಕುವೆಂಪು ಅವರ ಬಾರಿಸು ಕನ್ನಡ ಗೀತೆ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸುವುದರಿಂದ ಕುವೆಂಪು ಅವರನ್ನು ನೆನೆಪಿಸಿಕೊಂಡಂತಾಗುತ್ತದೆ ಎಂದು ರೋಷನ್ ಪ್ರದರ್ಶನದ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications