ನಿಮ್ಮ ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ
ಬೆಂಗಳೂರು, ಅ. 9: ಆನ್ ಲೈನ್ ನಲ್ಲಿ ಕನ್ನಡ ಓದಲು ಬಯಸುವ ಇ-ಬುಕ್ ಪ್ರಿಯರಿಗೆ ಸಂತಸದ ಸುದ್ದಿ. ನೀವು ಯಾವ ಭಾಗದಲ್ಲಿ ಕುಳಿತು ಬೇಕಾದರೂ ನಿಮಗಿಷ್ಟವಾದ ಲೇಖಕನ ಕಾದಂಬರಿ ಓದಬಹುದು.
ಹೌದು .. ಈ ನಿಟ್ಟಿನಲ್ಲಿ ವಿನೂತನ ಯತ್ನ ನಡೆಸಿರುವ ಪುಸ್ತಕ ಡಿಜಿಟಲ್ ಮೀಡಿಯಾ ಕಂಪನಿ ಸ್ಥಳೀಯ ಭಾಷೆಗಳ ಮೊಟ್ಟ ಮೊದಲ ಇ-ಬುಕ್ ಮಾರಾಟ ಮತ್ತು ಪುಸ್ತಕ ಬಾಡಿಗೆ ನೀಡುವ ಅಂತರ್ಜಾಲ ತಾಣವೊಂದನ್ನು ಆರಂಭಿಸಿದೆ[ಕುಮಟೆಯಲ್ಲಿ 'ಮಳೆ ಮಾರುವ ಹುಡುಗ' ಅನಾವರಣ]

ಜಾಲತಾಣದಲ್ಲಿ ಕನ್ನಡ, ತಮಿಳು ಮತ್ತು ತೆಲಗು ಭಾಷೆಗಳ ಹೆಸರಾಂತ ಲೇಖಕರ 150 ಕ್ಕೂ ಹೆಚ್ಚಿನ ಕೃತಿಗಳು ಲಭ್ಯವಿದೆ. ಓದುಗರು ಮತ್ತು ಪ್ರತಿಕ್ರಿಯೆ ಆಧರಿಸಿ ಎಲ್ಲ ಭಾಷೆಗಳಿಗೂ ವಿಸ್ತರಿಸುವ ಯೋಚನೆಯಿದೆ ಎಂದು ಕಂಪನಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಂಪನಿ ಸಂಸ್ಥಾಪಕ ಪಿ.ನಿವೇತಾ, ಜನರು ತಮ್ಮ ಅಂಗೈನಲ್ಲೇ ಇಷ್ಟವಾದ ಪುಸ್ತಕ ಓದಬಹುದು. ಮಾತೃಭಾಷಾ ಪ್ರಿಯರಿಗೆ ಇದು ನೆರವಾಗಲಿದೆ. ಕಡಿಮೆ ಬೆಲೆಯಲ್ಲಿ ಎಲ್ಲ ಬಗೆಯ ಪುಸ್ತಕಗಳ ಆಯ್ಕೆ ದೊರೆಯುತ್ತದೆ ಎಂದು ತಿಳಿಸಿದರು.[ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]
ಯುವಕರು ಪ್ರಾದೇಶಿಕ ಭಾಷೆಗಳಿಂದ ದೂರ ಸರಿಯುತ್ತಿದ್ದಾರೆ ಎಂದು ದೂರುತ್ತಿದ್ದೇವೆ. ಅದಕ್ಕೆ ಕಾರಣ ಅವರಿಗೆ ಈ ಬಗೆಯ ಪುಸ್ತಕಗಳು ಲಭ್ಯವಾಗದೆ ಇರುವುದು. ಅದಕ್ಕೆಲ್ಲ ನಮ್ಮ ಅಂತರ್ಜಾಲ ತಾಣ ಪರಿಹಾರ ನೀಡುತ್ತದೆ ಎಂದು ತಿಳಿಸಿದ್ದಾರೆ.
ಜಾಲತಾಣದಲ್ಲಿ ಯಂಡಮೂರಿ ವಿರೇಂದ್ರನಾಥ್, ಕೆ.ಟಿ.ಗಟ್ಟಿ. ಇಂದಿರಾ ಸುಂದರ್ರಾಜನ್, ಪಟ್ಟುಕೊಟ್ಟೈ ಪ್ರಭಾಕರ್, ನೀಲಾ ಪದ್ಮನಾಭನ್, ದೇವಿಬಾಲ, ರಾಜೇಶ್ ಕುಮಾರ್ ಮತ್ತಿತರ ಲೇಖಕರ ಪುಸ್ತಗಳು ಲಭ್ಯವಿದೆ.
ತಾಣಕ್ಕೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ: www.pustaka.co.in
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications