ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಪ್ರತ್ಯಕ್ಷ
ಮಂಡ್ಯ, ಜುಲೈ 28 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ಮಂಡ್ಯ ಜಿಲ್ಲೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಮಂಗಳವಾರ
ಜಿಲ್ಲಾ
ಕಾಂಗ್ರೆಸ್
ಮುಖಂಡರಿಗೂ
ಮಾಹಿತಿ
ನೀಡದೆ
ಮಂಡ್ಯಕ್ಕೆ
ಭೇಟಿ
ನೀಡಿದ
ರಮ್ಯಾ
ಅವರು
ಪಡಕನಹಳ್ಳಿ,
ಗಾಣದಹೊಸೂರು,
ಹೊನ್ನನಾಯಕನಹಳ್ಳಿ
ಮುಂತಾದ
ಹಳ್ಳಿಗಳಿಗೆ
ಭೇಟಿ
ನೀಡಿ
ಆತ್ಮಹತ್ಯೆ
ಮಾಡಿಕೊಂಡ
ರೈತ
ಕುಟುಂಬದವರನ್ನು
ಭೇಟಿ
ಮಾಡಿದ್ದಾರೆ.
ರಮ್ಯಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಹೈಕಮಾಂಡ್ಗೆ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮಂಡ್ಯಕ್ಕೆ ಭೇಟಿ ನೀಡದ ರಮ್ಯಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಮಂಗಳವಾರ ರಮ್ಯಾ ಜಿಲ್ಲೆಗೆ ಭೇಟಿ ನೀಡಿದ್ದಾರೆ. [ರಮ್ಯಾ ವಿರುದ್ಧ ಹೈಕಮಾಂಡಿಗೆ ದೂರು]
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ರಮ್ಯಾ ಭೇಟಿ http://publictv.in/?p=46396 #Mandya #Ramya
Posted by Public TV onTuesday, July 28, 2015
ಪಡಕನಹಳ್ಳಿಗೆ ಭೇಟಿ ನೀಡಿದ ರಮ್ಯಾ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಮಹೇಶ್ ಅವರ ಮನೆಗೆ ಭೇಟಿ ನೀಡಿ 50 ಸಾವಿರ ರೂ. ಪರಿಹಾರ ವಿತರಣೆ ಮಾಡಿದರು. ರಮ್ಯಾ ಅವರು ರೈತರ ಮನೆಗಳಿಗೆ ಬಂದು ಹೋದ ನಂತರ ಸ್ಥಳೀಯರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. [ಜನಮತ : ರಮ್ಯಾ ಮತ್ತೆ ರಾಜಕೀಯಕ್ಕೆ ಬರುವುದೇ ಬೇಡ]
ಕಳೆದ ಎರಡು ತಿಂಗಳಿನಿಂದ ಮಂಡ್ಯದಲ್ಲಿ 25ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಸೇರಿದಂತೆ ವಿವಿಧ ಸಚಿವರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.