ಶಾಶ್ವತ ನೀರಾವರಿಗಾಗಿ ಒಕ್ಕಲಿಗರಿಂದ ಬೃಹತ್ ಸಮಾವೇಶ
ತುಮಕೂರಿನ ಶಿರಾ ತಾಲೂಕಿಗೆ ಸೇರಿದ ಪಟ್ಟನಾಯಕನಹಳ್ಳಿಯಲ್ಲಿರುವ ಸ್ಪಟಿಕಾಪುರಿ ಮಹಾ ಸಂಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ 'ಶಾಶ್ವತ ನೀರಾವರಿ ಹಕ್ಕೊತ್ತಾಯ ಸಮಾವೇಷ'ವನ್ನು ಹಮ್ಮಿಕೊಳ್ಳಲಾಗಿದೆ.
ತುಮಕೂರು, ಏಪ್ರಿಲ್ 20: ಮಧ್ಯ ಕರ್ನಾಟಕದ ಕಾವೇರಿ ಮತ್ತು ಕೃಷ್ಣೆ ಕೊಳ್ಳದಲ್ಲಿನ ರೈತರಿಗೆ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇದೇ ಏಪ್ರಿಲ್ 23ರಂದು 'ಶಾಶ್ವತ ನೀರಾವರಿ ಹಕ್ಕೊತ್ತಾಯ ಸಮಾವೇಷ'ವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ನಂಜಾವಧೂತ ಮಹಾಸ್ವಾಮಿಗಳ 38ನೇ ಜನ್ಮದಿನದಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಶಿರಾ ತಾಲೂಕಿಗೆ ಸೇರಿದ ಪಟ್ಟನಾಯಕನಹಳ್ಳಿಯಲ್ಲಿರುವ ಸ್ಪಟಿಕಾಪುರಿ ಮಹಾ ಸಂಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ]
ಈ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ನೀಡಿದ ಸೇವೆಯನ್ನು ಗುರುತಿಸಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಅವಧೂತ ಪ್ರಜ್ಞಾ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತದೆ.[ಚೆಕ್ ಬೌನ್ಸ್ ಕೇಸ್ : ಮಾಜಿ ಸಚಿವ ಬಾಬುರಾವ್ ಗೆ ಸದ್ಯಕ್ಕೆ ರಿಲೀಫ್]
ಈ ಸಮಾವೇಶವನ್ನು ಬೆಂಬಲಿಸಿ ಇಂದು ಅಂದರೆ ಗುರುವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸಂಜೆ 6.30ಕ್ಕೆ 'ನೀರಿಗಾಗಿ ಬೆಳಕು ಚೆಲ್ಲಿ' ಎಂಬ ಘೋಷ ವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಅರಿವು ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.