ಮಳೆ... ಮಳೆ... ಎಲ್ಲೆಲ್ಲೂ ಭಾರಿ ಭರ್ಜರಿ ಮಳೆ ಆರ್ಭಟ! Karnataka Rain
ಮಳೆ ಅಬ್ಬರದಿಂದ ಸುರಿಯುತ್ತಿದ್ದರೆ ಇನ್ನೊಂದು ಕಡೆ ಕರ್ನಾಟಕದ ರೈತರು ಚಿಂತೆ ಮಾಡುವಂತೆ ಆಗಿದೆ, ಯಾಕೆ ಅಂದ್ರೆ ಈಗಾಗಲೇ ಬಿದ್ದಿರುವ ಮಳೆ ಸಾಕು ಸಾಕಪ್ಪಾ ಅಂತಾ ಕನ್ನಡಿಗರು ಹೇಳುತ್ತಿದ್ದಾರೆ. ಆದರೆ ಈ ಬಾರಿ ವರುಣ ದೇವನಿಗೆ ಕನ್ನಡಿಗರ ಮೇಲೆ ಜಾಸ್ತಿ ಪ್ರೀತಿ ಬಂದ ರೀತಿ ಕಾಣುತ್ತಿದೆ. ಇದೇ ಕಾರಣಕ್ಕಾಗಿ ಭರ್ಜರಿ ಮಳೆ ಸುರಿಯುತ್ತಿದ್ದು, ಎಲ್ಲೆಲ್ಲೂ ಮಳೆಯ ಹವಾ ಜೋರಾಗಿದೆ. ಇದೇ ಕಾರಣಕ್ಕೆ ಕಟ್ಟೆಚ್ಚರವನ್ನ ಕೂಡ ವಹಿಸಲಾಗಿದ್ದು, ಮತ್ತೆ ಕೆಲವು ದಿನಗಳ ಕಾಲ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದರೆ ಯಾವ, ಯಾವ ಜಿಲ್ಲೆಗಳಲ್ಲಿ ಮತ್ತೆ ಮಳೆ ಬರಲಿದೆ?
ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಕನ್ನಡಿಗರು ಕೂಡ ಈ ವಿಚಾರದಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ, ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು ತಮಿಳುನಾಡಿಗೆ ಈಗಾಗಲೇ ಸುಮಾರು 100 ಟಿಎಂಸಿ ನೀರು ಜುಲೈ ತಿಂಗಳಲ್ಲಿ ಹರಿದು ಹೋಗಿದೆ. ಇನ್ನು ಗರಿಷ್ಠ 124.80 ಅಡಿ ಇರುವ ಕೆಆರ್ಎಸ್ ಜಲಾಶಯ ಪೂರ್ಣವಾಗಿದೆ. ಹಾಗಾದ್ರೆ ಇದೀಗ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಗೊತ್ತೆ?













Click it and Unblock the Notifications