ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?
ಬೆಂಗಳೂರು, ಏಪ್ರಿಲ್ 21 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ಕೋಕಾ ಕಾಯ್ದೆಯಡಿ 4 ಬಾರಿಗೆ ಪ್ರಕರಣ ದಾಖಲಿಸಲಾಗುತ್ತಿದೆ. ಸಿಐಡಿ ಮೊದಲ ಬಾರಿಗೆ ಕೋಕಾ ಅಸ್ತ್ರ ಪ್ರಯೋಗಿಸಿದೆ.
ಬುಧವಾರ
ಬೆಂಗಳೂರಿನಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಸಿಐಡಿ
ಡಿಜಿಪಿ
ಕಿಶೋರ್
ಚಂದ್ರ
ಅವರು,
'ಆರೋಪಿಗಳ
ವಿರುದ್ಧ
(ಕರ್ನಾಟಕ
ಸಂಘಟಿತ
ಅಪರಾಧ
ತಡೆ
ಕಾಯ್ದೆ)
ಕೋಕಾ
ಕಾಯ್ದೆಯಡಿ
ಪ್ರಕರಣ
ದಾಖಲಿಸಲಾಗಿದೆ'
ಎಂದು
ಹೇಳಿದರು.
[ಇಬ್ಬರು
ಪಿಎಚ್
ಡಿ
ವಿದ್ಯಾರ್ಥಿಗಳ
ಬಂಧನ]
'ಹಗರಣದ ಕಿಂಗ್ ಪಿನ್ ಶಿವಕುಮಾರ್ ಮತ್ತು ಬಂಧಿತರಾಗಿರುವವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧವೂ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗಿದೆ' ಎಂದರು. [ಏನು ಓದ್ಕೋಬೇಡಿ, ಪಾಸಾಗ್ತೀರಾ ಹೋಗಿ ಎಂದಿದ್ದ ಕಾಲೇಜು!]
'ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಆರೋಪಿಗಳನ್ನು ಬಂಧಿಸಿದ 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು. ಆದರೆ, ಕೋಕಾ ಕಾಯ್ದೆಯಡಿ 180 ದಿನಗಳ ಕಾಲಾವಕಾಶ ಸಿಗುತ್ತದೆ. ಇದರಿಂದ ತನಿಖಾಧಿಕಾರಿಗಳಿಗೆ ಸಹಾಯಕವಾಗುತ್ತದೆ' ಎಂದು ಕಿಶೋರ್ ಚಂದ್ರ ಅವರು ಹೇಳಿದರು. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]
ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಆರೋಪಿಗಳ ವಿರುದ್ಧ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿರಬೇಕು. ಈಗ ಬಂಧಿತರಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ಆರು ಪ್ರಕರಣಗಳಿವೆ. ಅವುಗಳನ್ನು ಪರಿಗಣಿಸಿ ಕೋಕಾ ಕಾಯ್ದೆ ಪ್ರಯೋಗಿಸಲಾಗಿದೆ. [ಪತ್ರಿಕೆ ಸೋರಿಕೆ ಹಗರಣ, ಪ್ರಾಂಶುಪಾಲರ ಮೇಲೆ ಸಿಐಡಿ ಕಣ್ಣು]
10 ಆರೋಪಿಗಳ ಬಂಧನ : 'ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಕಿಂಗ್ ಪಿನ್ ಶಿವಕುಮಾರ್ ಸೇರಿದಂತೆ ಇತರೆ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ' ಎಂದು ಕಿಶೋರ್ ಚಂದ್ರ ತಿಳಿಸಿದರು.
ಕೋಕಾ ಕಾಯ್ದೆ ಪ್ರಕರಣಗಳು : 2014ರಲ್ಲಿ ಸಿಸಿಬಿ ಪೊಲೀಸರು ಬೆಂಗಳೂರಿನ ಪಾಲಿಕೆ ಸದಸ್ಯೆ ಮಂಜುಳಾ ದೇವಿ ಅವರ ಪತಿ ಸಿರಪುರ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಿದ 12 ಆರೋಪಿಗಳ ವಿರುದ್ಧ ಮೊದಲು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಶಿವಮೊಗ್ಗದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ವಿರುದ್ಧ ಕೋಕಾ ಕಾಯ್ದೆ ಪ್ರಯೋಗಿಸಲಾಗಿತ್ತು. ಮಂಗಳೂರಿನಲ್ಲಿ ನಾಯಕ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು. ರಾಜ್ಯದಲ್ಲಿ 4ನೇ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕೋಕಾ ಪ್ರಯೋಗಿಸಲಾಗಿದೆ.
ಕೋಕಾದ ಪ್ರಮುಖ ಅಂಶಗಳು
*
ಆರೋಪಿಗಳಿಗೆ
ನಿರೀಕ್ಷಣಾ
ಜಾಮೀನು
ಸಿಗುವುದಿಲ್ಲ
*
ಪೊಲೀಸ್
ಕಸ್ಟಡಿ
ಅವಧಿಯನ್ನು
15
ದಿನಗಳಿಂದ
1
ತಿಂಗಳ
ತನಕ
ವಿಸ್ತರಣೆ
ಮಾಡಬಹುದು
*
ಆರೋಪಿಗಳ
ಆಸ್ತಿಯನ್ನು
ಸರ್ಕಾರ
ಮುಟ್ಟುಗೋಲು
ಹಾಕಿಕೊಳ್ಳಲು
ಅವಕಾಶವಿದೆ
*
ತನಿಖಾ
ಸಂಸ್ಥೆಗಳು
ಆಕ್ಷೇಪಣೆ
ಸಲ್ಲಿಸಿದ
ಬಳಿಕ
ನ್ಯಾಯಾಲಯ
ಆರೋಪಿಗಳ
ಜಾಮೀನು
ಅರ್ಜಿ
ಪರಿಗಣಿಸಲಿದೆ
*
ಆರೋಪಿಗಳ
ವಿರುದ್ಧ
ಆರೋಪ
ಪಟ್ಟಿ
ಸಲ್ಲಿಕೆಗೆ
180
ದಿನಗಳ
ತನಕ
ಅವಕಾಶವಿದೆ
*
ಪ್ರಕರಣದ
ವಿಚಾರಣೆ
ಪ್ರಧಾನ
ಸಿವಿಲ್
ಮತ್ತು
ಸೆಷನ್ಸ್
ನ್ಯಾಯಾಲಯದಲ್ಲಿ
ಮಾತ್ರ
ನಡೆಯಲಿದೆ