ಬಿಜೆಪಿ ಸರಕಾರದ 40% ಕಮಿಷನ್: ಹೊಸ ಲೆಕ್ಕ ಹೇಳಿದ ಪ್ರಿಯಾಂಕ್ ಖರ್ಗೆ
ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ನ ಜಾಗತಿಕ ಜೀವನಯೋಗ್ಯ ಸೂಚ್ಯಂಕ 2022ರ ವರದಿಯನ್ನು ಉಲ್ಲೇಖಿಸುತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಮತ್ತು ಪ್ರಿಯಾಕ್ ಖರ್ಗೆ, ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
"ವಿಶ್ವದ 173 ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ, ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು" ಎಂದು ರಾಮಲಿಂಗ ರೆಡ್ಡಿ ಆರೋಪಿಸಿದರು.
ಬೆಂಗಳೂರು, ಜುಲೈ 4: ರಾಜ್ಯ ಸರಕಾರದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ನಲವತ್ತು ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿದ ನಂತರ, ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಚಾರದಲ್ಲಿ ಬಿಜೆಪಿ ಸರಕಾರವನ್ನು ಬೆಂಡೆತ್ತುತ್ತಲೇ ಇದೆ.
ಈ ವಿಚಾರದಲ್ಲಿ ಹೊಸ ಲೆಕ್ಕವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ಅವರ ಪ್ರಕಾರ ಕಮಿಷನ್ ಕೇಂದ್ರ ಸರಕಾರಕ್ಕೂ ಹೋದ ನಂತರ, ಗುತ್ತಿಗೆದಾರರಿಗೆ ಸಿಗುವುದು ಹಿಡಿಮಣ್ಣು ಮಾತ್ರ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಜೀವನಯೋಗ್ಯ ನಗರಗಳ ಪಟ್ಟಿ
ಸ್ಥಿರತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ, ಮೂಲಭೂತ ಸೌಕರ್ಯವನ್ನು ಆಧರಿಸಿ ಎಕನಾಮಿಸ್ಟ್ ಇಂಟೆಲಿಜೆನ್ಸ್, ಜೀವನಯೋಗ್ಯ ನಗರವನ್ನು ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ ಅತ್ಯಂತ ಯೋಗ್ಯ ನಗರದ ಶ್ರೇಯಸ್ಸು ಆಸ್ಟ್ರಿಯಾ ದೇಶದ ವಿಯೆನ್ನಾ, ಡೆನ್ಮಾರ್ಕಿನ ಕೋಪನ್ ಹೆಗನ್, ಸ್ವಿಜರ್ಲ್ಯಾಂಡಿನ ಜಿನಿವಾ, ಕೆನಡಾದ ಕ್ಯಾಲ್ಗರಿ, ವ್ಯಾಂಕೋವರ್ ನಗರಗಳಿವೆ. ಭಾರತದ ದೆಹಲಿ, ಮುಂಬೈ, ಚೆನ್ನೈ, ಅಹ್ಮದಾಬಾದ್ ನಗರದ ನಂತರ ಬೆಂಗಳೂರು 146ನೇ ಶ್ರೇಯಾಂಕದಲ್ಲಿದೆ.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದಾಗ ಹಾಕಿದ ಡಾಂಬರ್
"ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದಾಗ ಹಾಕಿದ ಡಾಂಬರ್ ಒಂದೇ ದಿನದಲ್ಲಿ ಕಿತ್ತು ಹೋಯಿತು. ಬಿಜೆಪಿ ಸರಕಾರದ ಕಮಿಷನ್ ಶೇ. 40% ಅಲ್ಲ, ರಾಜ್ಯಕ್ಕೆ ನಲವತ್ತು ಪರ್ಸೆಂಟ್, ಕೇಂದ್ರ ಸರಕಾರಕ್ಕೆ ಕೂಡಾ ನಲವತ್ತು ಪರ್ಸೆಂಟ್ ಹೋಗುತ್ತಿದೆ. ಹಾಗಾಗಿ, ಅಲ್ಲಿಗೆ ಉಳಿಯುವುದು ಇಪ್ಪತ್ತು ಪರ್ಸೆಂಟ್ ಮಾತ್ರ. ಅದರಲ್ಲೇ ಗುತ್ತಿಗೆದಾರ ಕೆಲಸ ಮಾಡಬೇಕು"ಎಂದು ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ, ಕಮಿಷನಿನ ಹೊಸ ಲೆಕ್ಕವನ್ನು ನೀಡಿದ್ದಾರೆ.

ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ
"ನಾವು ಚೆನ್ನೈಗಿಂತ ಗುಣಮಟ್ಟದಲ್ಲಿ ಕೆಳಗೆ ಹೋಗಿದ್ದೇವೆ. ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಆದರೆ, ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ. ಕರಾಚಿಗೆ ಹೋಗಿ ಬಿಜೆಪಿಯವರು ಕಲಿಯಲಿ. ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಅಭಿವೃದ್ಧಿಯಾಗಿತ್ತು. ಎಸ್.ಎಂ. ಕೃಷ್ಣ, ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಉತ್ತಮ ಯೋಜನೆ ತಂದಿದ್ದೆವು. ಕಾವೇರಿ ಮೂರು, ನಾಲ್ಕನೇ ಹಂತ ತಂದಿದ್ದೆವು. ವಿಶ್ವದ ಟಾಪ್ ಟೆನ್ ನಗರಗಳ ಪೈಕಿ ಬೆಂಗಳೂರು ಇತ್ತು"ಎಂದು ರಾಮಲಿಂಗ ರೆಡ್ಡಿ ಹೇಳಿದರು.

ಮೂಲ ಸೌಕರ್ಯ ಸರಿಯಿಲ್ಲ ಎಂದಿದ್ದ ಕಿರಣ್ ಮುಜುಂದಾರ್
"ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳೇ ಕುಸಿದಿವೆ, ಇದಕ್ಕೆಲ್ಲ ಕಾರಣ ಮೂರು ವರ್ಷದ ಬಿಜೆಪಿ ಸರಕಾರ. ಬೆಂಗಳೂರು ಈಗ ಐಸಿಯುನಲ್ಲಿದೆ, ಮುಂಚೆ ಗಾರ್ಡನ್ ಸಿಟಿ ನಂತರ ಗಾರ್ಬೇಜ್ ಸಿಟಿ ಆಗಿದ್ದ ಬೆಂಗಳೂರು ಈಗ ಗಾಂಜಾ ಸಿಟಿ ಆಗಿದೆ. ಇದನ್ನು ನಾವು ಹೇಳುತ್ತಿಲ್ಲ, ವರದಿಗಳು ಹೇಳುತ್ತಿವೆ. ಬೇರೆ ಬೇರೆ ರಾಜ್ಯ ಕರೆಯುತ್ತಿದ್ದಾರೆ. ಕೆಟಿಎಆರ್ ನಮ್ಮ ಕಡೆ ಬನ್ನಿ ಅಂತ ಕರೆಯುತ್ತಿದ್ದಾರೆ, ಉದ್ಯಮಿಗಳನ್ನ ಬಂಡವಾಳ ಹೂಡಿ ಅಂತಿದ್ದಾರೆ. ಮೂಲ ಸೌಕರ್ಯ ಸರಿಯಿಲ್ಲ ಅಂತ ಕಿರಣ್ ಮುಜುಂದಾರ್ ಕೂಡ ಹೇಳಿದ್ದಾರೆ, ಅವರೇನು ರಾಜಕಾರಣಿಗಳಾ"ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
-
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ











Click it and Unblock the Notifications