ನವೆಂಬರ್ 3ರಂದು ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ
ಬೆಂಗಳೂರು, ಅಕ್ಟೋಬರ್ 31 : ಕರ್ನಾಟಕದ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3ರಂದು ಮುಷ್ಕರ ನಡೆಸಲಿದ್ದಾರೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಅಂದು ಸ್ಥಗಿತಗೊಳಿಸಲಾಗುತ್ತದೆ ಎಂದು ಘೋಷಿಸಲಾಗಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಮಸೂದೆ ತಿದ್ದುಪಡಿ ವಿರೋಧಿಸಿ ವೈದ್ಯರು ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮುಷ್ಕರದ ಕುರಿತು ಮಾಹಿತಿ ನೀಡಿದೆ. ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲೆ ಮೀರಿಯೂ ಎಲ್ಲೇ ಇದ್ದರೂ ಶರಣಯ್ಯ ಶ್ರದ್ಧಾಳು ವೈದ್ಯರಿಗೆ
ಅಪಘಾತ ಮತ್ತು ಗರ್ಭಿಣಿಯರಿಗೆ ಮಾತ್ರ ಮುಷ್ಕರದ ದಿನ ಚಿಕಿತ್ಸೆ ನೀಡಲಾಗುತ್ತದೆ. ಉಳಿದಂತೆ ಯಾವುದೇ ಸೇವೆ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸರ್ಕಾರದ ಜೊತೆ ವೈದ್ಯರು ನಡೆಸಿದ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.
ಡಾ.ಭಕ್ತಿ ಅವರ ಕಾರ್ಯಕ್ಕೆ ನಮ್ಮದೊಂದು ಸಲಾಮ್
ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿ, ಸರ್ಕಾರ ಉದ್ದೇಶಿತ ಮಸೂದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗುತ್ತದೆ. ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗುತ್ತದೆ. ಅಗಲೂ ಸರ್ಕಾರ ಒಪ್ಪದಿದ್ದರೆ ಹೋರಾಟ ತೀವ್ರಗೊಳಿಸಲು ವೈದ್ಯರು ನಿರ್ಧರಿಸಿದ್ದಾರೆ.
ವೃದ್ಧರಿಗೆ ಉಚಿತ ಊಟ ನೀಡುವ ಮುಂಬೈ ವೈದ್ಯರೊಬ್ಬರ ಆದರ್ಶ ಕತೆಯಿದು
ಏನಿದು ಮಸೂದೆ? : ಜನರ ಹಿತಾಸಕ್ತಿ ಕಾಪಾಡಿ, ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017' ರೂಪಿಸಿದೆ. ಖಾಸಗಿ ಆಸ್ಪತ್ರೆಗಳ ವಿರೋಧದ ನಡುವೆಯೇ ಸರ್ಕಾರ ಮಸೂದೆಯನ್ನು ರೂಪಿಸಿದೆ.
ಮಸೂದೆಯಲ್ಲಿ ಏನಿದೆ?
* ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ವಿಧಿಸುವಂತಿಲ್ಲ
*
ಹೆಚ್ಚು
ಬಿಲ್
ಮಾಡಿದರೆ
25
ರಿಂದ
5
ಲಕ್ಷದ
ತನಕ
ದಂಡ
ವಿಧಿಸಲಾಗುತ್ತದೆ
*
ನಿಯಮ
ಉಲ್ಲಂಘನೆ
ಮಾಡಿದರೆ
6
ತಿಂಗಳಿನಿಂದ
3
ವರ್ಷದ
ತನಕ
ಜೈಲು
ಶಿಕ್ಷೆ
ವಿಧಿಸಬಹುದು
*
ರೋಗಿ
ಮೃತಪಟ್ಟರೆ
ದೇಹ
ಹಸ್ತಾಂತರ
ಮಾಡುವ
ಮುನ್ನ
ಬಾಕಿ
ಮೊತ್ತ
ಪಾವತಿಸುವಂತೆ
ಒತ್ತಾಯ
ಮಾಡುವಂತಿಲ್ಲ
*
ವೈದ್ಯಕೀಯ
ಸಂಸ್ಥೆಗಳು
ಸಂಬಂಧಿಸಿದ
ಪ್ರಾಧಿಕಾರದಲ್ಲಿ
ನೋಂದಣಿ
ಮಾಡುವುದು
ಕಡ್ಡಾಯ