ಕಾರ್ಕಳ : ಪತ್ನಿ, ಪುತ್ರಿ ಬಾವಿಗೆ ತಳ್ಳಿ ಅರ್ಚಕ ಆತ್ಮಹತ್ಯೆ
ಉಡುಪಿ, ಡಿಸೆಂಬರ್ 18 : ಕಾರ್ಕಳ ಅನಂತಶಯನ ದೇವಾಲಯದ ಪ್ರಧಾನ ಅರ್ಚಕರು ಪತ್ನಿ, ಮಗಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ಅರ್ಚಕರ ಪತ್ನಿ ಮತ್ತು ಮಗಳನ್ನು ರಕ್ಷಿಸಿದ್ದಾರೆ. ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಅನಂತಶಯನ
ದೇವಾಲಯದ
ಪ್ರಧಾನ
ಅರ್ಚಕ
ಗಣೇಶ್
ಜೋಯಿಸ್
(50)
ಆತ್ಮಹತ್ಯೆ
ಮಾಡಿಕೊಂಡವರು.
ಕಾರ್ಕಳದಲ್ಲಿನ
ತಮ್ಮ
ನಿವಾಸದ
ಮುಂಭಾಗದಲ್ಲಿರುವ
ಬಾವಿಗೆ
ಪತ್ನಿ
ಮತ್ತು
ಮಗಳನ್ನು
ತಳ್ಳಿದ
ಜೋಯಿಸ್,
ನಂತರ
ತಾವೂ
ಹಾರಿ
ಆತ್ಮಹತ್ಯೆಗೆ
ಮಾಡಿಕೊಂಡಿದ್ದಾರೆ.
[ಮಾಗಡಿ
ರಂಗನಾಥಸ್ವಾಮಿ
ಮುಂದೆ
ಅರ್ಚಕರ
ಕಿತ್ತಾಟ]
ಗಣೇಶ್ ಜೋಯಿಸ್ ಪತ್ನಿ ಶ್ಯಾಮಲಾ (42) ಮತ್ತು ಮಗಳು ರಶ್ಮಿ (18) ಹಗ್ಗವನ್ನು ಹಿಡಿದುಕೊಂಡು ಬದುಕುಳಿದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. [ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಅರ್ಚಕ]
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಣೇಶ್ ಜೋಯಿಸ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆತ್ನಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.