ನಾಗೇಶ್ ಹೆಗಡೆ, ಗಂಗಾಧರ ಹಿರೇಗುತ್ತಿಯವರಿಗೆ ಪತ್ರಿಕೋದ್ಯಮ ಪ್ರಶಸ್ತಿ
2016ನೇ ಸಾಲಿನ 'ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ'ಗೆ ಪ್ರಜಾವಾಣಿಯ ನಿವೃತ್ತ ಉಪ ಸಂಪಾದಕ ನಾಗೇಶ ಹೆಗಡೆ ಪಾತ್ರರಾಗಿದ್ದಾರೆ.ಇನ್ನು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯಗೆ ಗಂಗಾಧರ ಹಿರೇಗುತ್ತಿಯವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು, ಮೇ 15: 2016ನೇ ಸಾಲಿನ 'ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ'ಗೆ ಪ್ರಜಾವಾಣಿಯ ನಿವೃತ್ತ ಉಪ ಸಂಪಾದಕ, ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಪಾತ್ರರಾಗಿದ್ದಾರೆ.
ಇದೇ ವೇಳೆ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕಾರವಾರದ 'ಕರವಾಳಿ ಮುಂಜಾವು' ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಘೋಷಿಸಲಾಗಿದೆ.

ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶೆ ಶ್ರೀಮತಿ ಇಂದ್ರಕಲಾ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇಲೆ ಸರಕಾರ ಈ ಇಬ್ಬರು ಹಿರಿಯರ ಹೆಸರನ್ನು ಪ್ರಶಸ್ತಿಗಳಿಗೆ ಘೋಷಿಸಿದೆ.

{promotion-urls}












Click it and Unblock the Notifications