ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ
ಬೆಂಗಳೂರು, ಆಗಸ್ಟ್ 14 : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ 19 ಪೊಲೀಸರು ಈ ಬಾರಿ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಪದಕ ವಿಜೇತರ ಪಟ್ಟಿ ಘೋಷಣೆಯಾಗಿದೆ. ಶನಿವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.

2018ರಿಂದ ಕೇಂದ್ರ ಗೃಹ ಇಲಾಖೆಯು ಉತ್ತಮ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಪದಕವನ್ನು ನೀಡುತ್ತದೆ. ಕರ್ನಾಟಕದ ನಾಲ್ವರು ಸೇರಿದಂತೆ 120 ಪೊಲೀಸ್ ಅಧಿಕಾರಿಗಳನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪೊಲೀಸ್ ಪದಕ ವಿಜೇತರ ಪಟ್ಟಿ
* ಆರ್. ಹೇಮಂತ್ ಕುಮಾರ್, ಡಿವೈಎಸ್ಪಿ
* ಪರಮೇಶ್ವರ ಹೆಗ್ಡೆ, ಡಿವೈಎಸ್ಪಿ
* ಆರ್. ಮಂಜುನಾಥ್ ಡಿವೈಎಸ್ಪಿ
* ಎಚ್. ಎಂ. ಶೈಲೇಂದ್ರ, ಡಿವೈಎಸ್ಪಿ
* ಅರುಣ್ ನಾಗೇಗೌಡ, ಡಿವೈಎಸ್ಪಿ
* ಎಚ್. ಎಂ. ಸತೀಶ್, ಎಪಿಪಿ
* ಎಚ್. ಬಿ. ರಮೇಶ್ ಕುಮಾರ್, ಡಿವೈಎಸ್ಪಿ
* ಪಿ. ಉಮೇಶ್, ಎಸಿಪಿ
* ಸಿ. ಐ. ದಿವಾಕರ್, ಸರ್ಕಲ್ ಇನ್ಸ್ಪೆಕ್ಟರ್
* ಜಿ. ಎನ್. ರುದ್ರೇಶ್, ಆರ್ಪಿಐ
* ಬಿ. ಎ. ಲಕ್ಷ್ಮೀ ನಾರಾಯಣ, ಪಿಎಸ್ಐ
* ಎಂ. ಎಸ್. ಚಂದೇಕರ್, ಆರ್ಎಸ್ಐ
* ಕೆ. ಜಯಪ್ರಕಾಶ್, ಪಿಎಸ್ಐ
* ಎಚ್. ನಂಜುಂಡಯ್ಯ, ಎಎಸ್ಐ
* ಹತೀಕ್ ರೆಹಮಾನ್, ಎಎಸ್ಐ
* ರಾಮಾಂಜನಯ್ಯಾ, ಎಎಸ್ಐ
* ಆರ್. ಎನ್. ಬಾಳಿಕಾಯಿ, ಎಎಸ್ಐ
* ಕೆ. ಹೊನ್ನಪ್ಪ, ಹೆಡ್ ಕಾನ್ಸ್ಟೇಬಲ್
* ವಿ. ಎಲ್. ಎನ್. ಪ್ರಸನ್ನ ಕುಮಾರ್, ಎಎಸ್ಐ (ಸಿಐಡಿ)












Click it and Unblock the Notifications