Trend: ಓದುಗರ ಕ್ಷಮೆಯಾಚಿಸಿದ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿ, ಕಾರಣವೇನು ?
ಕನ್ನಡದ ಪ್ರಮುಖ ಹಾಗೂ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಎನ್ನುವ ಖ್ಯಾತಿ ಗಳಿಸಿರುವ ಪ್ರಜಾವಾಣಿ ಹಾಗೂ ಸಹೋದರ ಇಂಗ್ಲಿಷ್ ಪತ್ರಿಕೆ Deccan Herald ಟ್ರೆಂಡ್ ಫಾಲೋ ಮಾಡಿ ತನ್ನ ಓದುಗರಿಗೆ ವಿಭಿನ್ನವಾದ ಕ್ಷಮಾಪಣಾ ಪತ್ರ ಬರೆದಿದೆ. ಈ ಪತ್ರವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಈಚೆಗೆ ಜೀ ಕನ್ನಡ ಚಾನೆಲ್ ಸಹ ಇದೇ ಮಾದರಿಯ ಟ್ರೆಂಡ್ ಫಾಲೋ ಮಾಡಿತ್ತು. ಇಷ್ಟಕ್ಕೂ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಕ್ಷಮಾಪಣಾ ಪತ್ರದಲ್ಲಿ ಏನಿದೆ ಎನ್ನುವ ವಿವರ ನೋಡೋಣ.
ಕರ್ನಾಟಕದ ಜನರಿಗೆ, ನಮ್ಮಿಂದ ಕ್ಷಮೆಯಾಚನೆ. ಇತ್ತೀಚೆಗೆ ಒಂದು ಆಲೋಚನೆ ನಮ್ಮ ಹೃದಯವನ್ನು ಕಾಡುತ್ತಿದೆ. ತಲೆಮಾರುಗಳಿಂದ ನಿಖರವಾದ ಹಾಗೂ ನಂಬಿಕೆಯ ಸುದ್ದಿಗಳಿಗಾಗಿ ನೀವು ಮೊದಲು ನಮ್ಮ ಕಡೆಗೆ ತಿರುಗಿದ್ದೀರಿ ಎಂದು ಹೇಳಿದ್ದೀರಿ. ಬಿಕ್ಕಟ್ಟು, ಆಚರಣೆ ಮತ್ತು ಸಂಭ್ರಮಗಳೆಲ್ಲದರ ನಡುವೆ ನೀವು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯನ್ನು ನಿಮ್ಮ ಒಡನಾಡಿಗಳನ್ನಾಗಿ ಮಾಡಿಕೊಂಡಿದ್ದೀರಿ.

ದಶಕಗಳ ಪರಿಶೀಲನೆಗೆ ಕ್ಷಮಿಸಿ. ಸತ್ಯ ನಾವು ಬದಲಾಯಿಸಲಾಗದ ನಮ್ಮ ಮಾನದಂಡ. ಜಗತ್ತನ್ನು ಸ್ಪಷ್ಟವಾಗಿ ನೋಡಲು ನೀವು ಬಳಸುವ ಮಸೂರವಾಗಿ (ಸಾಧನ ಅಥವಾ ಉಬ್ಬುಗನ್ನಡಿ) ಆಗಿರುವುದಕ್ಕಾಗಿ. ನೀವು ನಮ್ಮ ಜಗತ್ತಿನಲ್ಲಿ ಕಳೆದುಹೋಗಿರುವಾಗ ನಿಮ್ಮ ಬೆಳಗಿನ ಫಿಲ್ಟರ್ ಕಾಫಿ ತಣ್ಣಗಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ.
ಕರ್ನಾಟಕ.. ನಿಮ್ಮ ಅತ್ಯಂತ ವಿಶ್ವಾಸಾರ್ಹ ಸುದ್ದಿಗಳಿಗಾಗಿ ನಮ್ಮ ಮೇಲೆ ನಂಬಿಕೆ ಇರುವಂತೆ ವಾತಾವರಣ ಸೃಷ್ಟಿಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ.
ಕೃತಜ್ಞತೆ ಮತ್ತು ಜವಾಬ್ದಾರಿಯೊಂದಿಗೆ ನಿಮ್ಮ...
ಡೆಕ್ಕನ್ ಹೆರಾಲ್ಡ್ | ಪ್ರಜಾವಾಣಿಯಿಂದ ಈ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಹಂಚಿಕೊಂಡಿರುವ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವಿನೂತನ ಪ್ರಯತ್ನವನ್ನು ಹಲವರು ಮೆಚ್ಚಿಕೊಂಡಿದ್ದು, ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಹಾಗೂ ದಕ್ಷಿಣದ ಅತ್ಯುತ್ತಮ ಪತ್ರಿಕೆ ❤️ ಎಂದು ಕಮೆಂಟ್ ಮಾಡಿದ್ದಾರೆ. ನನ್ನ ಅಜ್ಜ ಅಜ್ಜಿಯಿಂದ ಹಿಡಿದು ನನ್ನ ಮಕ್ಕಳ ಪೀಳಿಗೆಯ ವರೆಗೆ... DH ನಮ್ಮ ದಿನವನ್ನು ಪ್ರತಿದಿನವೂ ಪ್ರಾರಂಭಿಸುತ್ತದೆ❤️❤️, ಹಾಸ್ಯಮಯ ಮತ್ತು ಆಸಕ್ತಿದಾಯಕ. ಡೆಕ್ಕನ್ ಹೆರಾಲ್ಡ್ ಈ ಟ್ರೆಂಡ್ಅನ್ನು ಫಾಲೋ ಮಾಡಿರುವುದನ್ನು ನೋಡಲು ಸಂತೋಷವಾಯಿತು.. ನನ್ನ ನೆಚ್ಚಿನ ಪತ್ರಿಕೆ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications