ಒಯೋ ರೂಮ್ಸ್ ಜಾಲಿ, ಜಾಲಿ ಮಾಡೋಕೆ ಆಗಲ್ಲ! ರೊಚ್ಚಿಗೆದ್ದ ಹುಡುಗ & ಹುಡುಗಿಯರು... OYO Rooms
ಹುಡುಗ & ಹುಡುಗಿಯರಿಗೆ ಈಗ ಓಯೋ ರೂಮ್ಸ್ ಅಂದ್ರೆನೇ ಒಂದು ಟ್ರೆಂಡ್ ಆಗೋಗಿದೆ. ವೀಕೆಂಡ್ ಬಂತು ಅಂದ್ರೆ ಓಯೋ ರೂಮ್ಸ್ ಬುಕ್ ಮಾಡು... ಖುಷಿ ಆಯ್ತು ಅಂದ್ರೆ ಓಯೋ ರೂಮ್ಸ್ ಬುಕ್ ಮಾಡು... ಹುಟ್ಟುಹಬ್ಬ ಆಚರಣೆ ಅಂದ್ರೆ ಬರ್ತ್ ಡೇ ಕೇಕ್ ಕಟ್ ಮಾಡಲು ಕೂಡ ಓಯೋ ರೂಮ್ಸ್ ಬುಕ್ ಮಾಡು...
ಹೀಗೆ ಎಲ್ಲದಕ್ಕೂ ಓಯೋ ರೂಮ್ಸ್ ಮೇಲೆಯೇ ಅವಲಂಬನೆ ಆಗಿದ್ದ ಮದುವೆ ಆಗದ ಹುಡುಗ & ಹುಡುಗಿಯರಿಗೆ ದೊಡ್ಡ ಆಘಾತ ಸಿಕ್ಕಿದೆ. ರಜೆ ಬಂದಾಗ, ಹಬ್ಬಗಳು ಇದ್ದಾಗ, ಬರ್ತ್ ಡೇ ಸಮಯ ಹೆಚ್ಚಾದ ಸಮಯದಲ್ಲಿ ಓಯೋ ರೂಮ್ಸ್ ಸೋಲ್ಡ್ ಔಟ್ ಆಗುತ್ತಿದ್ದವು. ಆದರೆ ಈಗ ಹೊಸ ರೂಲ್ಸ್ ಮೂಲಕ ಮದುವೆ ಆಗದ ಹುಡುಗ & ಹುಡುಗಿಯರಿಗೆ ಓಯೋ ರೂಮ್ಸ್ ಭರ್ಜರಿ ಶಾಕ್ ನೀಡಿದೆ. ಒಯೋ ರೂಮ್ಸ್ ಜಾಲಿ, ಜಾಲಿ ಮಾಡೋಕೆ ಆಗಲ್ಲ! ರೊಚ್ಚಿಗೆದ್ದ ಹುಡುಗ & ಹುಡುಗಿಯರು...

ರೊಚ್ಚಿಗೆದ್ದ ಹುಡುಗ & ಹುಡುಗಿಯರು...
ಓಯೋ ಕಾನ್ಸೆಪ್ಟ್ ಶುರುವಾದ ನಂತರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಯುವ ಸಮುದಾಯಕ್ಕೆ ಓಯೋ ಫೇವರಿಟ್ ಆಗಿದೆ. ಹೀಗಿದ್ದಾಗ 2025ರ ಹೊಸ ವರ್ಷಾಚರಣೆಗೆ ಅಂತಾ 10 ಲಕ್ಷಕ್ಕೂ ಹೆಚ್ಚು ಜನ ಓಯೋ ರೂಮ್ಸ್ ಬುಕ್ ಮಾಡಿದ್ದರಂತೆ. ಈ ಕುರಿತು ಮಾಹಿತಿ ಹೊರ ಬಿದ್ದ ಕೆಲವು ದಿನಗಳ ನಂತರ, ಮದುವೆ ಆಗದೆ ಓಯೋ ರೂಮ್ಸ್ ಬುಕ್ ಮಾಡುವ ಹುಡುಗಿ & ಹುಡಗರಿಗೆ ಆಘಾತಕಾರಿ ಸುದ್ದಿ ಸಿಕ್ಕಿದೆ!
ಓಯೋ ರೂಮ್ಸ್ ಹೊಸ ರೂಲ್ಸ್ ವಿರುದ್ಧ ರೊಚ್ಚಿಗೆದ್ದ ಹುಡುಗ & ಹುಡುಗಿಯರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಮದುವೆ ಆಗದೇ ಓಯೋ ರೂಂ ಬುಕ್ ಮಾಡುತ್ತಿದ್ದವರಿಗೆ ಇನ್ನು ಮುಂದೆ ಅಂತಹ ಅವಕಾಶ ಸಿಗುವುದು ಕಷ್ಟ ಕಷ್ಟ. ಯಾಕಂದ್ರೆ ಮದುವೆ ಆಗದ ಹುಡುಗ & ಹುಡಗಿಯರಿಗೆ ಓಯೋ ರೂಮ್ಸ್ ಕೊಡದೇ ಇರಲು ಹೊಸ ರೂಲ್ಸ್ ಅನ್ನ ಜಾರಿ ಮಾಡಿ & ಹೊಸ ನಿಯಮ ತಂದಿದೆ ಓಯೋ ರೂಮ್ಸ್ ಮ್ಯಾನೇಜ್ಮೆಂಟ್. ಇದೇ ಈಗ ಆಕ್ರೋಶಕ್ಕೆ ಕಾರಣ ಕೂಡ ಆಗುತ್ತಿದೆಯಂತೆ!
ಓಯೋ ರೂಮ್ಸ್ ಬುಕ್ ಮಾಡಲು ಮದುವೆ...
ಅಂದಹಾಗೆ ಈ ಮೊದಲು 'ಓಯೋ ರೂಮ್ಸ್'ಗೆ ಹೋಗಲು ಮದುವೆ ಆಗದೇ ಇದ್ದರೂ ಓಕೆ ಎನ್ನುವಂತೆ ಇತ್ತು. ಆದರೆ ಇದೀಗ ಉತ್ತರ ಪ್ರದೇಶದ ಮೀರತ್ನಲ್ಲಿ ಓಯೋ ರೂಮ್ಸ್ನ ಬುಕ್ ಮಾಡುವವರು ಕಡ್ಡಾಯವಾಗಿ ತಮ್ಮ ಮದುವೆ ದಾಖಲೆಗಳನ್ನು ತರಬೇಕು ಎಂದು ರೂಲ್ಸ್ನ ಹಾಕಲಾಗಿದೆ.
ಮದುವೆ ಆಗದ ಜೋಡಿಗಳಿಗೆ ಓಯೋ ರೂಮ್ಸ್ ಬುಕ್ ಮಾಡಲು ಅವಕಾಶ ಕೊಡದಂತೆ ಈಗ ಸಿಕ್ಕಾಪಟ್ಟೆ ಕಂಪ್ಲೇಂಟ್ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದೀಗ ಉತ್ತರ ಪ್ರದೇಶ ರಾಜ್ಯದ ಮೀರತ್ ಸಿಟಿಯಲ್ಲಿ ಮಾತ್ರ ಜಾರಿಗೆ ಬಂದಿರುವ ಈ ಹೊಸ ರೂಲ್ಸ್, ಮುಂದಿನ ದಿನಗಳಲ್ಲಿ ಇಡೀ ಇಂಡಿಯಾದಲ್ಲಿ ಜಾರಿಗೆ ಬರಲಿದೆ ಎಂಬ ಸುದ್ದಿ ಹಬ್ಬಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications