Get Updates
Get notified of breaking news, exclusive insights, and must-see stories!

ಇನ್ನು 5ವರ್ಷ ಸೋಂದಾ ವಾದಿರಾಜ ಮಠದಲ್ಲಿ ಇಷ್ಟಾರ್ಥ ಸೇವೆ ಇರುವುದಿಲ್ಲ

ವಾದಿರಾಜ ಗುರುಗಳ ಮೂಲ ಬೃಂದಾವನ ಮತ್ತು ಭೂತರಾಜರನ್ನು ಆರಾಧಿಸುವ ಪುಣ್ಯಭೂಮಿ ಶಿರಸಿ ತಾಲೂಕು, ಸೋಂದಾ ವಾದಿರಾಜ ಮಠದಲ್ಲಿ, ಮುಂದಿನ ಕೆಲವು ವರ್ಷಗಳಲ್ಲಿ ಕೆಲವೊಂದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಶಿರಸಿ, ಏ 12: ರಮಾತ್ರಿವಿಕ್ರಮ ದೇವರು, ವಾದಿರಾಜ ಗುರುಗಳ ಮೂಲ ಬೃಂದಾವನ ಮತ್ತು ಭೂತರಾಜರನ್ನು ಆರಾಧಿಸುವ ಪುಣ್ಯಭೂಮಿ ಸೋಂದಾ ವಾದಿರಾಜ ಮಠದಲ್ಲಿ, ಮುಂದಿನ 4-5 ವರ್ಷಗಳಲ್ಲಿ ಭಕ್ತಾದಿಗಳು ಸಲ್ಲಿಸುವ ಕೆಲವೊಂದು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಕ್ಷೇತ್ರದಲ್ಲಿ ವಿವಿಧ ಜೀರ್ಣೋದ್ದಾರ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ಇಷ್ಟಾರ್ಥ ಸಿದ್ದಿಸೇವೆ (ಕಾಯಿಕಟ್ಟುವ ಸೇವೆ) ಸಹಿತ ಕೆಲವು ಸೇವೆಗಳು ಸದ್ಯಕ್ಕೆ ಇರುವುದಿಲ್ಲ, ಭಕ್ತಾದಿಗಳು ಸಹಕರಿಸಬೇಕೆಂದು ಸೋಂದಾ ಮಠ ಮನವಿ ಮಾಡಿಕೊಂಡಿದೆ. [ಸೋಂದಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ]

 Overall renovation of Sri Sonda Kshetra, Mutt seeks devotees co-operation

ಸೋಂದಾ ಮಠದ ಯತಿ ಶ್ರೀ ವಿಶ್ವವಲ್ಲಭ ತೀರ್ಥರು ಸುಮಾರು 30 ಕೋಟಿ ವೆಚ್ಚದಲ್ಲಿ ಸಮಗ್ರ ಸೋಂದಾ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವ ಸಂಕಲ್ಪ ಮಾಡಿದ್ದು, ಸುಮಾರು 4 ರಿಂದ 5 ವರ್ಷಗಳ ಕಾಲ ಜೀರ್ಣೋದ್ಧಾರದ ಕಾಮಗಾರಿಗಳು ನಡೆಯಲಿವೆ.

ವೃದ್ಧರಿಗೆ, ಅಶಕ್ತರಿಗೆ ಮಠದ ಆವರಣದಲ್ಲಿ ಅನಾನುಕೂಲವಾಗುವ ಸಾಧ್ಯತೆಯಿದೆ, ಜೊತೆಗೆ ಭಕ್ತಾದಿಗಳಿಗೆ ವಸತಿ ಸೌಲಭ್ಯ ನೀಡಲೂ ತೊಂದರೆಯಾಗಬಹುದು. ಆದರೆ ದೈನಂದಿನ ಪೂಜಾ ಪದ್ದತಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಶ್ವವಲ್ಲಭ ತೀರ್ಥರ ಮಹತ್ವಾಕಾಂಕ್ಷೆಯ ಈ ಕೆಲಸಕ್ಕೆ ಭಕ್ತಾದಿಗಳು ಸಹಕರಿಸಬೇಕೆಂದು ಕೋರಲಾಗಿದೆ. (ಚಿತ್ರ: ಮಧ್ವೇಶ್ ತಂತ್ರಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+