ಸಂತೋಷ್ ಹೆಗ್ಡೆ ರಾಷ್ಟ್ರಪತಿಯಾಗಲಿ : ಆನ್ಲೈನ್ ಅರ್ಜಿಗೆ ಸಹಿ ಹಾಕಿ!
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ದೆ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿಸಿ ಎಂದು ನರೇಂದ್ರ ಮೋದಿ ಸರ್ಕಾರಕ್ಕೆ ಆನ್ ಲೈನ್ ಅರ್ಜಿಯನ್ನು ಸಮಾನ ಆಸಕ್ತರ ಗುಂಪೊಂದು ಹಾಕಿದೆ.
ಬೆಂಗಳೂರು, ಮೇ 17: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ದೆ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿಸಿ ಎಂದು ನರೇಂದ್ರ ಮೋದಿ ಸರ್ಕಾರಕ್ಕೆ ಆನ್ ಲೈನ್ ಅರ್ಜಿಯನ್ನು ಸಮಾನ ಆಸಕ್ತರ ಗುಂಪೊಂದು ಹಾಕಿದೆ.
ಡಾ. ಭಾನುಪ್ರಕಾಶ್ ಎ.ಎಸ್ ಎಂಬುವವರು ಆರಂಭಿಸಿರುವ ಈ ಆನ್ ಲೈನ್ ಅರ್ಜಿ ಅಭಿಯಾನದ ಫಲಿತಾಂಶವನ್ನು ಭಾರತೀಯ ಜನತಾಪಕ್ಷ, ಕಾಂಗ್ರೆಸ್ , ಜೆಡಿಎಸ್, ಜೆಡಿಯು ಮುಖಂಡರಿಗೆ ತಲುಪಿಸಲಾಗುತ್ತದೆ. ಸದ್ಯಕ್ಕೆ ಸಹಿ ಹಾಕಿದವರ ಸಂಖ್ಯೆ 1500ರೊಳಗೆ ಇದ್ದರೂ, ಈ ಬಗ್ಗೆ ಫೇಸ್ ಬುಕ್ ನಲ್ಲಿ ಚರ್ಚೆಯಾಗುತ್ತಿದೆ.[ಭಾರತದ ರಾಷ್ಟ್ರಪತಿ ಅಯ್ಕೆ ಮಾಡುವ ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?]

ಕೆಲವರು ಸಂತೋಷ್ ಹೆಗ್ಡೆ ಅವರು ಸಮರ್ಥರು ಆದರೆ, ಲಾಲ್ ಕೃಷ್ಣ ಅಡ್ವಾಣಿ ಪರ ನಿಲ್ಲುವ ಇವರನ್ನು ಮೋದಿ ಸರ್ಕಾರವು 'ಮುದ್ರೆ ಒತ್ತಲು' ಮಾತ್ರ ಬಳಸುವಂತಾದರೆ ದುರಂತವಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಂಕಣಗಾರ ಡಾ. ನಾಗೇಶ್ ಹೆಗಡೆ ಅವರು ಕೂಡಾ ಹಂಚಿಕೊಂಡಿದ್ದಾರೆ. ಅವರ ಫೇಸ್ ಬುಕ್ ಪುಟದಲ್ಲಿ ಚರ್ಚೆ ಜಾರಿಯಲ್ಲಿದೆ.. ನೀವು ಪಾಲ್ಗೊಳ್ಳಿ..[ಈ 20 ಪ್ರಭಾವಿ ವ್ಯಕ್ತಿಗಳಲ್ಲಿ ರಾಷ್ಟ್ರಪತಿಯಾಗಲು ಯಾರು ಸಮರ್ಥರು?]
ಸಂತೋಷ್ ಹೆಗ್ಡೆ ಅವರು ರಾಷ್ಟ್ರಪತಿಯಾಗಲು ಸೂಕ್ತ ಎನಿಸಿದರೆ ಲಿಂಕ್ ಕ್ಲಿಕ್ಕಿಸಿ ಸಹಿ ಮಾಡಿ, ಬೆಂಬಲ ವ್ಯಕ್ತಪಡಿಸಿ
{promotion-urls}












Click it and Unblock the Notifications