ಹಿಂದುಳಿದ ವರ್ಗಕ್ಕೆ ಆಲೆಮಾರಿಗಳ 46 ಜಾತಿಗಳು ಸೇರ್ಪಡೆ
ಬೆಂಗಳೂರು, ಮಾರ್ಚ್ 26: ಪ್ರತ್ಯೇಕ ಲಿಂಗಾಯತ ಧರ್ಮ ಭಾಗ್ಯ ನೀಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದರ ಜತೆಗೆ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿದೆ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ, 46 ಜಾತಿಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ, ಅರೆ-ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.
ಬೈರಾಗಿ (ಬಾವ) ಬಾಲಸಂತೋಷ-ಜೋಷ, ಬಾಜ್ಗರ್, ಭರಡಿ, ಬುಡಬುಡಕ್-ಜೋಷ-ಗೊಂಧಳಿ, ಚಾರ, ಚಿತರೂಕರ್-ಜೋಷ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲಕಿರಿ, ಕೋಲ್ಹಟಿ, ನಂದಿವಾಲ-ಜೋಷ-ಗೊಂದಳಿ ಪುಲ್ಮಾಲಿ, ನಾಥಪಂರ್ ಡೌರಿಗೋಸಾವಿ, ನಶಿ್ಕಕಾರಿ, ಪಾಂಗುಯಾಯಲ್, ಜೋಷ (ಸಾದಾಜೋಷ), ಸಾನಸ್ಯ ಸರಾನಯ, ತ್ರುಮಲಿ, ವಾಯು್ಡ, ವಾಸುದೇವ, ವಾಡಿ, ವಾಗಿರೂ, ವೀರ್, ಬಜನಯ, ಶಿಕಕಿಲಿಗರ್, ಗೊಲಲಿ, ಕ್ಲಿಲಿಕಾಯಾತ, ಸರೋಡಿ, ದುಗ್ಕ-ಮುಗ್ಕ (ಬುರ್ಬುರ್ಚ), ಹಾವ್ಗಾರ್ (ಹಾವಾಡಿಗಾರ್), ಪಿಚಿಗುಂಟಲ, ಮಸಣಿಯ
ಯೕಗಿ, (ಬೆಸ್ತರ್) ಬುಂಡಬೆಸ್ತ, ಕಟಬು, ದವೆ್ಕಶ್, ಕಾಶಿಕಪಾಡಿ, ದೊಂಬಿದಾಸ, ಬೈಲಪತ್ತಾರ್ ಎಂಬ ಈ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.

ಈ ಅಲೆಮಾರಿ- ಅರೆಅಲೆಮಾರಿ ಜನಾಂಗಗಳ ಪ್ರಸ್ತುತಿ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಮುಖ ಹಾಗೂ ನಿಖರ ಮಾಹಿತಿಗಳನ್ನು ನೀಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಒಂದು ಪುಸ್ತಕವನ್ನು ಹೊರ ತರಲಾಗುತ್ತಿದೆ.
ಈ ನಿಟ್ಟಿನಲ್ಲಿ ಈ ಮೇಲಿನ ಅಲೆಮಾರಿ-ಅರೆ ಅಲೆಮಾರಿ ಜಾತಿಗಳ/ ಸಮುದಾಯಗಳ ಪ್ರತಿನಿಧಿಗಳು ಅಥವಾ ಆ ಸಮುದಾಯದ ಸಂಘಗಳಿದ್ದಲ್ಲಿ ಅವುಗಳ ಮುಖ್ಯಸ್ಥರು, ಆಯೋಗದ ಕಚೇರಿಗೆ ಬಂದು ತಮ್ಮ ಜಾತ್ಯ ಬಗ್ಗೆ ನಿಖರವಾದ ಮಾಹಿತಿಗಳನ್ನು ನೀಡಬಹುದಾಗಿದೆ.
ಲಿಖಿತವಾಗಿ ಅಥವಾ ಮುದ್ದಾಮ್ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16-ಡಿ, 2ನೇ ಮರಡಿ, ಡಿ.ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು- 560052 ಗೆ ಇಲ್ಲಿಗೆ ಕಳಿಸಬಹುದು.












Click it and Unblock the Notifications