ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನ ಸಿಕ್ಕರೂ, ಖಾತೆ ಸಿಗದೆ ಅತಂತ್ರ ಸ್ಥಿತಿಯಲ್ಲಿ ಮಂತ್ರಿಗಳು!

|
Google Oneindia Kannada News

ಬೆಂಗಳೂರು, ಜೂನ್ 22: ರಾಜ್ಯ ಸರ್ಕಾರದ ಇಬ್ಬರು ಸಚಿವರಿಗೆ ಬಹು ನಿರೀಕ್ಷಿತ ಮಂತ್ರಿ ಸ್ಥಾನವೇನೋ ಸಿಕ್ಕಿತು, ಅವರಿಗೆ ಕೂತ ವ್ಯವರಿಸಲು ಕಚೇರಿಯನ್ನು ಕೊಡಲಾಯಿತು ಆದರೆ ಖಾತೆಯನ್ನೇ ನೀಡಿಲ್ಲ.

ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಬರೋಬ್ಬರಿ ಎಂಟು ದಿನಗಳಾಗಿವೆ ಆದರೆ ಅವರಿಬ್ಬರಿಗೂ ಯಾವ ಖಾತೆ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ.

ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನಾ ಇಬ್ಬರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಯೇ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕುಮಾರಸ್ವಾಮಿ ಅವರು ಯಾಕೋ ಆ ಬಗ್ಗೆ ಹೆಚ್ಚು ತಲೆಕೆಸಿಕೊಳ್ಳಲಿಲ್ಲ. ಅವರೊಬ್ಬರೇ ಅಲ್ಲ, ಸರ್ಕಾರದ ಅಥವಾ ಎರಡೂ ಪಕ್ಷದ ಮುಖಂಡರು ಯಾರೊಬ್ಬರೂ ಖಾತೆ ಹಂಚಿಕೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಮಂಡ್ಯ ಸೋಲು: ಸಚಿವ ಪುಟ್ಟರಾಜುಗೆ ರಾಜ್ಯ ಸಂಪುಟದಿಂದ ಕೊಕ್? ಮಂಡ್ಯ ಸೋಲು: ಸಚಿವ ಪುಟ್ಟರಾಜುಗೆ ರಾಜ್ಯ ಸಂಪುಟದಿಂದ ಕೊಕ್?

ಈ ಇಬ್ಬರಿಗೂ ಸಚಿವ ಸ್ಥಾನ ನೀಡಿದ್ದು, ಸರ್ಕಾರದ ಉಳಿವಿಗೆ ಅಷ್ಟೆ ಅದನ್ನು ಬಿಟ್ಟರೆ ಇನ್ನಾವ ಸದುದ್ದೇಶವೂ ಇರಲಿಲ್ಲವೆಂಬುದು ಖಾತೆ ಹಂಚಿಕೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದಲೇ ಗೊತ್ತಾಗುತ್ತಿದೆ. ಸರ್ಕಾರ ಹೇಗೋ ಉಳಿದಿದೆ, ಯಾರಿಗೆ ಯಾವ ಖಾತೆ ಕೊಟ್ಟರೇನು ಎಂಬ ಧೋರಣೆ ಜೆಡಿಎಸ್-ಕಾಂಗ್ರೆಸ್ ಮುಖಂಡರಲ್ಲಿ ಕಾಣುತ್ತಿದೆ.

ಶಿಕ್ಷಣ, ಪೌರಾಡಳಿತ ಖಾತೆ ಖಾಲಿ ಇದೆ

ಶಿಕ್ಷಣ, ಪೌರಾಡಳಿತ ಖಾತೆ ಖಾಲಿ ಇದೆ

ಪ್ರಸ್ತುತ ಶಿಕ್ಷಣ ಖಾತೆ, ಪೌರಾಡಳಿತ ಖಾತೆ ಖಾಲಿ ಇದೆ. ಇದರ ಜೊತೆಗೆ ಸಿಎಂ ಅವರ ಬಳಿ ಕೆಲವು ಖಾತೆಗಳಿವೆ, ಎಚ್‌ಡಿ ರೇವಣ್ಣ, ಡಿಕೆ ಶಿವಕುಮಾರ್ ಎರೆರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ಈ ಇಬ್ಬರಿಗೆ ಯಾವ ಖಾತೆ ನೀಡುತ್ತಾರೆಂಬ ಕುತೂಹಲ ಇದೆ.

ಪೌರಾಡಳಿತ ಖಾತೆ ದೊರೆಯುವ ವಿಶ್ವಾಸದಲ್ಲಿ ಸಚಿವ ಆರ್.ಶಂಕರ್ಪೌರಾಡಳಿತ ಖಾತೆ ದೊರೆಯುವ ವಿಶ್ವಾಸದಲ್ಲಿ ಸಚಿವ ಆರ್.ಶಂಕರ್

ಬದಲಾವಣೆ ಮಾಡುವ ಚಿಂತನೆ ನಡೆದಿದೆ?

ಬದಲಾವಣೆ ಮಾಡುವ ಚಿಂತನೆ ನಡೆದಿದೆ?

ಮೂಲದ ಪ್ರಕಾರ ಶಿಕ್ಷಣ ಖಾತೆಗಾಗಿ ಇಬ್ಬರೂ ಪಕ್ಷೇತರರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ಶಿಕ್ಷಣ ಖಾತೆಯನ್ನು ಅನುಭವ ಹೊಂದಿದ ಸಚಿವರಿಗೆ ನೀಡಿ ಅವರ ಖಾತೆಯನ್ನು ಹೊಸದಾಗಿ ಸಂಪುಟ ಸೇರಿರುವ ಸಚಿವರಿಗೆ ನೀಡಬೇಕೆನ್ನುವ ಲೆಕ್ಕಾಚಾರವೂ ನಡೆದಿದೆ ಎನ್ನಲಾಗುತ್ತಿದೆ.

ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು

ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಎಚ್.ನಾಗೇಶ್ ಹಾಗೂ ಕೆಪಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಅವರನ್ನು ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಇವರಿಗೆ ಖಾತೆ ಹಂಚಿಕೆ ಮಾಡಲಾಗಿಲ್ಲ.

ಸಂಪುಟ ವಿಸ್ತರಣೆ : ಇಬ್ಬರು ಹೊಸ ಸಚಿವರಿಗೆ ಇನ್ನೂ ಖಾತೆ ಸಿಕ್ಕಿಲ್ಲಸಂಪುಟ ವಿಸ್ತರಣೆ : ಇಬ್ಬರು ಹೊಸ ಸಚಿವರಿಗೆ ಇನ್ನೂ ಖಾತೆ ಸಿಕ್ಕಿಲ್ಲ

ಅರಣ್ಯ ಇಲಾಖೆ ಕೇಳುತ್ತಿರುವ ಶಂಕರ್?

ಅರಣ್ಯ ಇಲಾಖೆ ಕೇಳುತ್ತಿರುವ ಶಂಕರ್?

ನಾಗೇಶ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಬೇಕು ಎಂಬ ಚರ್ಚೆ ನಡೆದಿದೆ. ಆದರೆ ನಾಗೇಶ್ ಅವರು ಶಿಕ್ಷಣ ಇಲಾಖೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಶಂಕರ್ ಅವರು ಈ ಹಿಂದೆ ನಿಭಾಯಿಸಿದ್ದ ಅರಣ್ಯ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಆ ಖಾತೆ ಈಗ ಸತೀಶ್ ಜಾರಕಿಹೊಳಿ ಬಳಿ ಇದೆ.

English summary
Two MLAs took oath as ministers on June 14 but still no portfolio has been allotted to them. Independent MLA H Nagesh and KPJP party MLA R Shankar took oath on June 14 as ministers of Kumaraswamy cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X