ಹೊಸ ವರ್ಷದ ಸಂಭ್ರಮ; ಅಬಕಾರಿ ಇಲಾಖೆಯ ಮಹತ್ವದ ಸೂಚನೆ
ಬೆಂಗಳೂರು, ಡಿಸೆಂಬರ್ 28; ಕರ್ನಾಟಕದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಬಕಾರಿ ಇಲಾಖೆ ಮದ್ಯ ಮಾರಾಟದಿಂದ ಎಷ್ಟು ಆದಾಯ ಬರಲಿದೆ? ಎಂಬ ಲೆಕ್ಕಾಚಾರದಲ್ಲಿದೆ. ಇಲಾಖೆ ಡಿಸೆಂಬರ್ 31ರ ಅಂಗವಾಗಿ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಕರ್ನಾಟಕದ ಪೊಲೀಸ್ ಇಲಾಖೆಯ ಜ್ಞಾಪನಾ ಪತ್ರವನ್ನು ಉಲ್ಲೇಖ ಮಾಡಿ ಅಬಕಾರಿ ಇಲಾಖೆ ಆಯುಕ್ತರ ಪರವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಪತ್ರದ ಮೂಲಕ ಸೂಚನೆಯೊಂದನ್ನು ಕೊಡಲಾಗಿದೆ.

2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಎಂಬ ಪೊಲೀಸ್ ಇಲಾಖೆ ಜ್ಞಾಪನಾ ಪತ್ರವನ್ನು ಉಲ್ಲೇಖ ಮಾಡಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿರುತ್ತದೆ. ಪತ್ರದಲ್ಲಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ಹೇಳಿದೆ.
ಪತ್ರದ ವಿವರಗಳು; ರಾಜ್ಯದ ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರುಗಳಿಗೆ ಅಬಕಾರಿ ಆಯುಕ್ತರ ಕಛೇರಿ 2ನೇ ಮಹಡಿ, ಟಿ.ಟಿ.ಎಂ.ಸಿ ಕಟ್ಟಡ 'ಎ' ಬ್ಲಾಕ್, ಬಿ.ಎಂ.ಟಿ.ಸಿ. ಶಾಂತಿನಗರ, ಬೆಂಗಳೂರು-27 ಇವರಿಂದ ಪತ್ರದ ಮೂಲಕ ಈ ಸೂಚನೆಗಳನ್ನು ನೀಡಲಾಗಿದೆ.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 22/12/2023ರಂದು ಹೊಸ ವರ್ಷದ ಆಚರಣೆಯ ಸಂಬಂಧಪಟ್ಟಂತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯಲ್ಲಿ 2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-9 ಇತ್ಯಾದಿ ಸನ್ನದುದಾರರುಗಳಿಗೆ ಹಾಗೂ ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳಿಗೆ ವಿಶೇಷ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡುವ ಸಲುವಾಗಿ ಪೂರ್ವಾನುಮತಿಯನ್ನು ಕೋರಿ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತಾವನೆಗಳು ಸ್ವೀಕೃತವಾಗುವ ಸಂಬಂಧ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಅದರಂತೆ 2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಮಾತ್ರ ಅನ್ವಯವಾಗುವಂತೆ ರಾತ್ರಿ 1ಗಂಟೆ ಮೀರದಂತೆ ಸಾಂದರ್ಭಿಕ ಸನ್ನದುಗಳನ್ನು (ಸಿಎಲ್-5) ಅನ್ನುಷರತ್ತಿಗೊಳಪಟ್ಟು ಮಂಜೂರು ಮಾಡಲು ಸೂಚಿಸಿದೆ ಎಂದು ಹೇಳಿದೆ.
* ಸಿಎಲ್-5 ಸನ್ನದುಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸನ್ನದು ಸ್ಥಳದಲ್ಲಿ ಮದ್ಯ/ ಬೀರ್ ಸೇವನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ/ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು, ಈ ಅನುಮತಿ/ ನಿರಾಕ್ಷೇಪಣಾ ಪತ್ರವು ಕೇವಲ ಕ್ರಿಸ್ಮಸ್ ಮತ್ತು 2024ರ ಹೊಸ ವರ್ಷದ ಆಚರಣೆ ಸಮಯದಲ್ಲಿ ಮಾತ್ರ ಅನ್ವಯವಾಗುತ್ತದೆ.
* ರೂಫ್ ಟಾಪ್ (Roof Top)ಗಳಿಗೆ ಸಿಎಲ್-5 ಸನ್ನದುಗಳನ್ನು ಮಂಜೂರು ಮಾಡಿದಲ್ಲಿ, ಅಂತಹ ಸನ್ನದುಗಳ ರೂಫ್ ಟಾಪ್ ಗಳಲ್ಲಿ ಯಾವುದೇ ಅಡುಗೆ ಕೋಣೆ ಕಾರ್ಯ ನಿರ್ವಹಿಸಬಾರದು ಹಾಗೂ ಯಾವುದೇ ಒಲೆಗಳು, ಸಿಲಿಂಡರ್ ಮತ್ತು ಬೆಂಕಿ ಉಪಕರಣಗಳು ಇರಬಾರದು.
* ರೂಫ್ ಟಾಪ್ಗಳಲ್ಲಿ ಯಾವುದೇ ಅಹಿತಕರ ಘಟನಗಳು ನಡೆಯದಂತೆ ಸೂಕ್ತ ಭದ್ರತೆಯನ್ನು ಕಲ್ಪಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡ ನಂತರವೇ ಸನ್ನದನ್ನು ಮಂಜೂರು ಮಾಡುವುದು.
* ಸಿಎಲ್-5 ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕವನ್ನು ನಿಗಧಿಪಡಿಸಿರುವ ದರದಲ್ಲಿ ಕಡ್ಡಾಯವಾಗಿ ಪಾವತಿಸಬೇಕು.
* ಸಿಎಲ್-5 ಸನ್ನದುಗಳನ್ನು ಯಾವುದೇ ರೀತಿಯ ಅನಧಿಕೃತ ಮದ್ಯವನ್ನು ಸೇವಿಸಲು ಅವಕಾಶ ನೀಡತಕ್ಕದ್ದಲ್ಲ. ಕೆ.ಎಸ್.ಬಿ.ಸಿ.ಎಲ್, ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುಗಳಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ/ ಬೀರ್ ಅನ್ನು ಮಾತ್ರ ಬಳಸತಕ್ಕದ್ದು.
* ಸಿಎಲ್-5 ಸನ್ನದಿನಡಿಯಲ್ಲಿ ಪಡೆದ ಮದ್ಯ ಬಳಸಿದ ಮದ್ಯ ಹಾಗೂ ಉಳಿದ ಮದ್ಯದ ಶಿಲ್ಕುಗಳ ಬಗ್ಗೆ ಸೂಕ್ತ ಲೆಕ್ಕವನ್ನು ಇಟ್ಟು ಅದನ್ನು ಸಂಬಂಧಿಸಿದ ವಲಯ ಅಬಕಾರಿ ನಿರೀಕ್ಷಕರಿಗೆ ನೀಡತಕ್ಕದ್ದು.
* 2024ರ ಹೊಸ ವರ್ಷದ ಆಚರಣೆ ಸಂಬಂಧ ಮಂಜೂರು ಮಾಡುವ ಸಿಎಲ್-5 ಸನ್ನದುಗಳ ವಿವರಗಳನ್ನು ಒಳಗೊಂಡಂತೆ ವಿಶೇಷ ವರದಿಯನ್ನು ಅಬಕಾರಿ ಉಪ ಆಯುಕ್ತರುಗಳು ಕೇಂದ್ರ ಕಛೇರಿಗೆ ಸಲ್ಲಿಸುವುದು.
2024ರ ಹೊಸ ವರ್ಷದ ವರ್ಷಾಚರಣೆ ಸಂಬಂಧ ದಿನಾಂಕ 31/12/2023ರ ರಾತ್ರಿ ಎಲ್ಲಾ ವಲಯ, ಉಪ ವಿಭಾಗ ಮತ್ತು ಉಪ ಆಯುಕ್ತರ ಕಛೇರಿಯ ಕಾರ್ಯನಿರ್ವಾಹಕ ಅಧಿಕಾರಿ/ ಸಿಬ್ಬಂದಿಗಳು ಜನಜಂಗುಳಿ ಇರುವಂತಹ ಸನ್ನದುಗಳ ಮುಂದೆ ಯಾವುದೇ ಅಕ್ರಮಗಳು ಮತ್ತು ಅಹಿತಕರ ಘಟನೆಗಳು ನಡೆಯದಂತೆ ಕಾವಲು ಇಡತಕ್ಕದ್ದು.
ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ಸಂಗ್ರಹಣ, ಶೇಖರಣೆ ಮತ್ತು ಮಾರಾಟದ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿ ಕಮ ವಹಿಸುವುದು. ಸದರಿ ದಿನದಂದು ರಸ್ತೆಗಸ್ತು/ ರಸ್ತೆಗಾವಲುಗಳನ್ನು ನಡೆಸಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವುದು. ಒಟ್ಟಾರೆಯಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications