ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಆರಂಭ
ಬೆಂಗಳೂರು, ಜೂನ್ 23 : ಕರ್ನಾಟಕದಲ್ಲಿ ಶೀಘ್ರದಲ್ಲೇ ನೂತನ ರಾಜಕೀಯ ಪಕ್ಷವೊಂದು ಸ್ಥಾಪನೆಯಾಗಲಿದೆ. 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ಖಾತರಿ ಇಲ್ಲದಿದ್ದರೂ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದೆ.
ಯುವ
ಜನರನ್ನು
ರಾಜಕೀಯದತ್ತ
ಸೆಳೆಯಲು
ಈ
ಪಕ್ಷವನ್ನು
ಮೊದಲು
ಹುಟ್ಟು
ಹಾಕಲಾಗುತ್ತಿದೆ.
ಮೇಲುಕೋಟೆ
ಶಾಸಕ
ಕೆ.ಎಸ್.ಪುಟ್ಟಣ್ಣಯ್ಯ,
ಕುಡುಚಿ
ಶಾಸಕ
ಪಿ.ರಾಜೀವ್,
ಸಾಹಿತಿ
ದೇವನೂರು
ಮಹಾದೇವ,
ಸಾಮಾಜಿಕ
ಹೋರಾಟಗಾರ
ಎಸ್.ಆರ್.ಹಿರೇಮಠ
ಮುಂತಾದವರು
ಈ
ಪಕ್ಷವನ್ನು
ಮುನ್ನಡೆಸಲಿದ್ದಾರೆ.
[ರಾಜಕೀಯದಲ್ಲಿ
ಮಹಿಳೆಯರ
ಪಾತ್ರ
ಏನು?
ಸಂವಾದ]
ಆಮ್ ಆದ್ಮಿ ಪಕ್ಷದಿಂದ ಹೊರಬಂದಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಆರಂಭಿಸಿರುವ 'ಸ್ವರಾಜ್ ಅಭಿಯಾನ' ಈ ಪಕ್ಷಕ್ಕೆ ಬೆಂಬಲ ನೀಡಲಿದೆ. ಪ್ರಗತಿಪರರು, ಹೋರಾಟಗಾರರು ಈ ಪಕ್ಷದ ಭಾಗವಾಗಲಿದ್ದಾರೆ. [ಭಾರತದ ಪುರಾತನ ರಾಜಕೀಯ ಪಕ್ಷಕ್ಕೆ ಬರ್ಥ್ ಡೇ ವಿಷಸ್!]
ಜುಲೈ 10ರಂದು ಘೋಷಣೆ : ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಜುಲೈ 9 ಮತ್ತು 10 ರಂದು 'ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ ಜನ ಪರ್ಯಾಯದ ಸಾಧ್ಯತೆಗಳು' ಎಂಬ ವಿಷಯದ ಕುರಿತು ಚಿಂತನಾ ಸಮಾವೇಶ ನಡೆಯಲಿದೆ. [ರಾಜಕೀಯ ಪಕ್ಷಗಳ ಸ್ಥಿರಾಸ್ತಿ ವೆಬ್ ಸೈಟ್ ನಲ್ಲಿ ಬಹಿರಂಗಪಡಿಸಿ]
ಈ ಸಮಾವೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಯವಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದರೆ ಅವರಿಗೆ ಬೆಂಬಲವಾಗಿ ನಿಲ್ಲಲು ಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದೆ.