BREAKING: ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುವ ಯೋಗ್ಯತೆ ಇರುವ ಬಹಳ ಜನರಿದ್ದಾರೆ!
ಬೆಂಗಳೂರು, ಜು. 07: "ಕೇಂದ್ರ ಸಚಿವ ಸಂಪುಟ ಸೇರುವ ಯೋಗ್ಯತೆ ಇರುವವರು ಬಹಳ ಜನ ಇದಾರೆ, ಯಾರಿಗೆ ಯೋಗ ಇದೆ ನೋಡೋಣ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, "ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಧಾನಿ ಕಾರ್ಯಾಲಯದಿಂದ ಪ್ರಕಟ ಆಗುವವರೆಗೂ ಏನೂ ಹೇಳಲು ಬಯಸುವುದಿಲ್ಲ. ಇಲಾಖೆಯಲ್ಲಿ ಯಾರೂ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೊ ಅವರಿಗೆ ಪ್ರಧಾನಿ ಮೋದಿ ಅವಕಾಶ ಮಾಡಿಕೊಡುತ್ತಾರೆ" ಎಂದಿದ್ದಾರೆ.
Recommended Video
"ರಾಜ್ಯದ ಸಂಸದರಲ್ಲಿ ಯಾರಿಗೇ ಯೋಗ ಕೂಡಿ ಬರಲಿ, ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲಿ. ಪಕ್ಷದ ಕಾರ್ಯಕರ್ತರ ಗೌರವ ಇಮ್ಮಡಿ ಮಾಡುವ ಕೆಲಸ ಮಾಡಲಿ" ಎಂದು ಸಿ.ಟಿ. ರವಿ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಬಗ್ಗೆಯೂ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಕೂಡ ಭ್ರಷ್ಟಾಚಾರ ಸಹಿಸುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹಿಂದೆ ನಡೆದಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಲ್ಲವನ್ನೂ ಕೂಡ ಗಮನಿಸುತ್ತಿದ್ದಾರೆ. ಹೀಗಾಗಿ ಯತ್ನಾಳ್ ಅಥವಾ ಬೇರೆಯವರ ಹೇಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.