ಶಕ್ತಿದೇವತೆಯ ಶಾಪ? 3 ತಿಂಗಳಲ್ಲಿ ಗ್ರಾಮದ 18 ಜನರ ಸಾವು
ಕೋಲಾರ, ನ 6: ನೆಮ್ಮದಿಯಾಗಿದ್ದ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಜವರಾಯನ ಅಟ್ಟಹಾಸ. ಒಬ್ಬರ ಶವಸಂಸ್ಕಾರ ಮುಗಿಯುವಷ್ಟರಲ್ಲಿ ಮತ್ತೊಂದು ಸಾವು.
ಸತ್ತವರಾರೂ ಯಾವುದೇ ರೋಗ ರುಜಿನಗಳಿಂದ ನರಳಿ ಸತ್ತವರಲ್ಲ, ಆರೋಗ್ಯವಾಗಿದ್ದು ರಾತ್ರಿ ಮಲಗಿದವರು ಬೆಳಗ್ಗೆ ಹೆಣವಾಗಿರುತ್ತಾರೆ. ಈ ಚಿತ್ರವಿಚಿತ್ರ ಘಟನೆಗೆ ಇದುವರೆಗೆ ಗ್ರಾಮದ 18 ಜನ ಸಾವನ್ನಪಿದ್ದಾರೆ.
ರಾಜ್ಯದ ಗಡಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೆ.ಪಾತೂರು ಗ್ರಾಮದಲ್ಲಿನ ಸದ್ಯದ ಪರಿಸ್ಥಿತಿ ಇದು. ಗ್ರಾಮದಲ್ಲಿ ಸುಮಾರು 150 ಕ್ಕೂ ಹೆಚ್ಚು ಮನೆಗಳಿವೆ. ಕರ್ನಾಟಕ ಹಾಗೂ ಆಂಧ್ರದ ಗಡಿ ಭಾಗದಲ್ಲಿರುವ ಕೆ ಪಾತೂರು ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಸರಣಿ ಸಾವು ಮುಂದುವರಿಯುತ್ತಲೇ ಇದ್ದು ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಅಕ್ಷರಸ: ಸ್ಮಶಾನದಂತಾಗಿರುವ ಈ ಗ್ರಾಮದಲ್ಲಿನ ಅನೇಕ ಕುಟುಂಬಗಳು ಊರಿಗೆ ಊರೇ ಖಾಲಿಯಾಗಿ ಬಿಡುತ್ತದೆನೋ ಎಂಬ ಆತಂಕದಲ್ಲಿದೆ. ಅನೇಕ ಕುಟುಂಬಗಳು ಈಗಾಗಲೇ ಮನೆಯ ಸಾಮಗ್ರಿಗಳನ್ನೆಲ್ಲಾ ತೆಗುದುಕೊಂಡು ವಲಸೆ ಹೋಗಲು ಆರಂಭಿಸಿದ್ದಾರೆ.

ಶಕ್ತಿದೇವತೆಯ ಶಾಪ : ಇದಕ್ಕೆಲ್ಲಾ ಕಾರಣ ಗ್ರಾಮದ ಶಕ್ತಿದೇವತೆ ಶಾಪ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಇದಕ್ಕೆ ಗ್ರಾಮಸ್ಥರು ನೀಡುವ ಸ್ಪಷ್ಟೀಕರಣ ಏನಂದರೆ, ಗ್ರಾಮದ ಹೊರಗಡೆ ಬೃಹತ್ ಆಲದ ಮರವೊಂದಿತ್ತು. ಅದನ್ನು ಗ್ರಾಮಸ್ಥರು ಕಡಿದು ಹಾಕಿದ್ದರು.
ಅಂದಿನಿಂದ ಗ್ರಾಮದಲ್ಲಿ ಸಾವಿನ ಸರಪಳಿ ಆರಂಭವಾಗಿದೆ. ಗ್ರಾಮದಲ್ಲಿ ಸಂಭವಿಸುತ್ತಿರುವ ಘಟನೆಗಳಿಗೆ ಶಕ್ತಿದೇವತೆಯ ಶಾಪವೇ ಕಾರಣ ಎನ್ನುವುದು ಗ್ರಾಮಸ್ಥರ ಹೇಳಿಕೆ.
ಸರಣಿ ಸಾವಿನಿಂದಾಗಿ ಆತಂಕಕ್ಕೊಳಗಾಗಿರುವ ಜನರು ಗ್ರಾಮದಲ್ಲಿ ಹಿರಿಯರ ಸಲಹೆ ಮೇರೆಗೆ ಗಂಗಮ್ಮ ದೇವಿಯ ಪೂಜೆ, ಉತ್ಸವ ಕೂಡಾ ಮಾಡಿಸಿದ್ದಾರೆ.
ದುರಂತವೆಂದರೆ ಉತ್ಸವ ಮಾಡಿದ ದಿನದಂದೇ ಗ್ರಾಮಸ್ಥನೊಬ್ಬನು ಸಾವನ್ನಪ್ಪಿದ್ದು. ಇದರಿಂದ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದ್ದು ಯಾರಿಗೆ ಯಾವಾಗ ಏನಾಗುತ್ತೋ ಎನ್ನುವ ಭಯದಲ್ಲಿ ಜನ ಬದುಕುತ್ತಿದ್ದಾರೆ.
ಇನ್ನೊಂದು ಸೋಜಿಗದ ಸಂಗತಿ ಏನಂದರೆ, ಸಾವಿನ ಸರಣಿ ಆರಂಭವಾದ ಮೇಲೆ ಗ್ರಾಮದಲ್ಲಿ ರಾತ್ರಿ ಇಡೀ ಒಂದು ರೀತಿಯ ವಿಚಿತ್ರ ಶಬ್ಧಗಳು ಕೇಳಿಬರುತ್ತಿದೆ. ಇದರಿಂದ ಗ್ರಾಮದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ.
ಜ್ಯೋತಿಷಿಗಳ ಸಲಹೆ ಮೇರೆಗೆ ಗ್ರಾಮ ದೇವರು, ಗ್ರಾಮದಲ್ಲಿರುವ ಶಾಸನಗಳಿಗೆ ನಿತ್ಯ ಪೂಜೆಗಳನ್ನು ಮಾಡಲಾಗುತ್ತಿದೆ. ಆದರೂ, ಗ್ರಾಮದಲ್ಲಿ ನಿಗೂಢವಾಗಿ ಜನರು ಸಾವನ್ನಪ್ಪುತ್ತಿರುವ ಘಟನೆ ಮುಂದುವರಿಯುತ್ತಲೇ ಇದೆ.
ಒಟ್ಟಿನಲ್ಲಿ ಇದು ಶಕ್ತಿದೇವತೆಯ ಶಾಪವೋ, ಸಾಂಕ್ರಾಮಿಕ ರೋಗ ಹರಡಿದಿಯೋ, ಸರಣಿ ಸಾವಿನಿಂದ ಕೆ.ಪಾತೂರು ಗ್ರಾಮಸ್ಥರ ಬದುಕು ಹೈರಾಣವಾಗಿರುವುದಂತೂ ಸತ್ಯ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications