ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ವಾದಕ್ಕೆ ಮೋಹನ್ ಕಾತರಕಿ ಗುಡ್ ಬೈ
ಬೆಂಗಳೂರು, ಜನವರಿ 23: ಕಾವೇರಿ ಜಲ ವಿವಾದದಲ್ಲಿ ವಾದ ಮಂಡಿಸುತ್ತಿದ್ದ ಕರ್ನಾಟಕ ರಾಜ್ಯ ವಕೀಲರ ತಂಡದಿಂದ ಸುಪ್ರಿಂ ಕೊರ್ಟ್ ನ ಹಿರಿಯ ವಕೀಲ ಮೋಹನ್ ಕಾತರಕಿ ಹೊರ ನಡೆದಿದ್ದಾರೆ.
ಫಾಲಿ ಎಸ್ ನಾರಿಮನ್ ಮುಖ್ಯಸ್ಥರಾಗಿರುವ ಕರ್ನಾಟಕ ವಕೀಲರ ತಂಡದಲ್ಲಿ ಮೋಹನ್ ಕಾತರಕಿ ಕೂಡಾ ಒಬ್ಬರಾಗಿದ್ದರು. ಅವರ ರಾಜೀನಾಮೆಗೆ ಜಲಸಂಪನ್ಮೂಲ ಮಂತ್ರಿ ಎಂ.ಬಿ ಪಾಟೀಲ್ ಅವರ ನಡವಳಿಕೆಯೇ ಕಾರಣ ಎನ್ನಲಾಗಿದೆ.[ಚುನಾವಣೆ ಹಿನ್ನಲೆ, ಬಜೆಟ್ ಮುಂದೂಡಿಕೆಗೆ ಸುಪ್ರಿಂ ನಕಾರ]
ಶನಿವಾರ ದೆಹಲಿಯಲ್ಲಿ ಕರ್ನಾಟಕ ವಕೀಲರ ತಂಡದ ಸಭೆ ನಡೆದಿತ್ತು. ಈ ಸಭೆಗೆ ಕಾತರಕಿಯವರಿಗೆ ಎಂ.ಬಿ ಪಾಟೀಲ್ ಆಹ್ವಾನಿಸದೆ ಕಡೆಗಣಿಸಿದ್ದರು. ಇದರಿಂದ ಕಾತರಕಿ ಬೇಸರಗೊಂಡಿದ್ದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 7ರಿಂದ ಸುಪ್ರಿಂ ಕೋರ್ಟ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ಆರಂಭಿಸಲಿದ್ದು ಅದಕ್ಕೂ ಮೊದಲು ಕಾತರಕಿ ರಾಜೀನಾಮೆ ನೀಡಿದ್ದಾರೆ.
[ಚಿತ್ರ ಕೃಪೆ: ಟ್ವಿಟ್ಟರ್]
Comments
English summary
Mohan Katarki, a senior Supreme Court lawyer resigned for Karnataka legal team, headed by Fali S Nariman. Which has been arguing the Cauvery water dispute case before the apex court.
Story first published: Monday, January 23, 2017, 16:37 [IST]