ಮಂತ್ರಾಲಯ ಪ್ರಭುಗಳ ಸಾನಿಧ್ಯದಲ್ಲಿ ಜಗ್ಗೇಶ್
ರಾಯಚೂರು, ಆಗಸ್ಟ್ 09 : ಮಂತ್ರಾಲಯ ಗುರು ಶ್ರೀರಾಘವೇಂದ್ರ ಸ್ವಾಮೀಜಿಗಳ 346ನೇ ಆರಾಧಾನಾ ಮಹೋತ್ಸವದ ಅಂಗವಾಗಿ ಆಗಸ್ಟ್ 09ರಂದು ಮದ್ಯಾರಾಧನೆ ಜರುಗುತ್ತಿದೆ.
ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲು ನಟ, ಬಿಜೆಪಿ ಶಾಸಕ ಜಗ್ಗೇಶ್ ಅವರು ಮಂತ್ರಾಲಯ ದೇಗುಲಕ್ಕೆ ಆಗಮಿಸಿದ್ದಾರೆ.
ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ಮಂತ್ರಾಲಯ ಪ್ರಭುಗಳ ಸಾನಿಧ್ಯದಲ್ಲಿ..ಶುಭಮಸ್ತು.. pic.twitter.com/wAF2Qps1zp
— ನವರಸನಾಯಕ ಜಗ್ಗೇಶ್ (@Jaggesh2) August 9, 2017
ರಾಯರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್, ತಮಗೂ ಹಾಗೂ ರಾಯರ ಮಠಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಮೆಲಕು ಹಾಕಿದರು.
ಅಧ್ಭುತ ದರ್ಶನ ಶ್ರೀಗಳ ಆಶೀರ್ವಾದ ಪಡೆದು ಪುನೀತರಾದೆವು..ಸರ್ವೇಜನಸುಖಿನೋಭವಂತು.. pic.twitter.com/cMuGE7hNSm
— ನವರಸನಾಯಕ ಜಗ್ಗೇಶ್ (@Jaggesh2) August 9, 2017
ತಮ್ಮ ಪ್ರೇಮಕ್ಕೆ ಎದುರಾಗಿದ್ದ ಸಂಕಷ್ಟಗಳನ್ನ ರಾಯರೇ ಪರಿಹರಿಸಿದ್ದರು, ದಾಂಪತ್ಯ ಜೀವನಕ್ಕೆ ಕಾಲಿಡಲು ರಾಯರೇ ಕಾರಣ. 33 ವರ್ಷಗಳಿಂದ ರಾಯರ ದರ್ಶನ ಪಡೆಯುತ್ತಿದ್ದೇನೆ ಎಂದು ಜಗ್ಗೇಶ್ ಹೇಳಿದರು.
ರಾಯರ ಸಾನಿಧ್ಯಕ್ಕೆ ಪ್ರಯಾಣ..ದೊಡ್ಡಣ್ಣ ರಾಕ್ ಲೈನ್ ಪರಿಮಳ ನನ್ನ ಸಹಪಾಠಿಗಳು..ರಾಯರ ಆರಾಧನೆಯ ಶುಭಾಷಯಗಳು..ಶುಭೋದಯ:) pic.twitter.com/Zec1IyhAC7
— ನವರಸನಾಯಕ ಜಗ್ಗೇಶ್ (@Jaggesh2) August 9, 2017
ಅಗಸ್ಟ್ 10ರಂದು ಉತ್ತರ ಆರಾಧನೆ ನಂತರ ರಾಘವೇಂದ್ರ ಸ್ವಾಮೀಜಗಳ ಆರಾಧಾನಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಜಗ್ಗೇಶ್ ಅವರು ಮಂತ್ರಾಲಯದ ಯತಿಗಳನ್ನು ಕೂಡಾ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಮಂತ್ರಾಲಯಕ್ಕೆ ಹೋಗುವ ಹಾದಿ, ಮಂತ್ರಾಲಯ ಸಾನಿಧ್ಯದಲ್ಲಿ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.